ತ್ವರಿತ ಅಲರ್ಟ್ ಗಳಿಗಾಗಿ
For Daily Alerts
'ಮುಂಬೈ ಇಸ್ಕಾನ್ ಗುರುಗಳಿಂದಲೇ ಲೈಂಗಿಕ ಹಗರಣ'
ಚಂಚಲಪತಿ ದಾಸ ಅವರು ಕೂಡ ತಿರುಗಿಬಿದ್ದಿದ್ದು, ಲೈಂಗಿಕ ಹಗರಣ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿದ್ದರಿಂದಲೇ ಮಧು ಪಂಡಿತ ದಾಸರ ವಿರುದ್ಧ ಮುಂಬೈ ಶಾಖೆಯವರು ವೈಯಕ್ತಿಕ ದ್ವೇಷ ಕಾರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಅಕ್ರಮಗಳ ವಿಚಾರಣೆಗೆ ನೇಮಿಸಲಾಗಿರುವ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿರುವ ಕೊಲ್ಕತಾದ ದಯಾರಾಮ ದಾಸ್ ಅವರೇ ದೊಡ್ಡ ರಿಯಲ್ ಎಸ್ಟೇಟ್ ಕುಳವಾಗಿದ್ದು, ಕೊಲ್ಕತಾದಲ್ಲಿ ದೊಡ್ಡದೊಡ್ಡ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದೂ ಚಂಚಲಪತಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಹಿಂದೆ 2001ರಲ್ಲಿ ಆದಿಧಾರಣ ದಾಸ ಅವರು ಲೈಂಗಿಕ ಹಗರಣಗಳನ್ನು ಬಯಲಿಗೆಳೆದಿದ್ದಾಗ, ಇದೇ ದಯಾರಾಮ ಗೂಂಡಾಗಳನ್ನು ಸೇರಿಸಿ ಆದಿಧಾರಣ ದಾಸರನ್ನು ಅನಾಮತ್ತಾಗಿ ಇಸ್ಕಾನ್ ನಿಂದ ಹೊರಹಾಕಿದ್ದ ಎಂದು ಚಂಚಲಪತಿ ದಾಸ ದೂರಿದ್ದಾರೆ.
Comments
English summary
Madhu Pandit Dasa, head of Bangalore ISKCON and Chanchalapati Dasa have alleged that Mumbai ISKCON supervisory committee is illegal and few top gurus have involved in sex activities. The allegations have come after Karnataka High Court given a verdict that Bangalore ISKCON is fake.
Story first published: Tuesday, May 31, 2011, 10:23 [IST]