ಇದು ಬಚ್ಚೇಗೌಡ್ರ ಇಲಾಖೆಯ ಅದ್ಭುತ ಕೆಲ್ಸ!

ನಗರದ ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ಕಾಲೇಜು ಆವರಣ ಹಾಗೂ ಧರ್ಮಾರಾಂ ಕಾಲೇಜು ಆವರಣದಲ್ಲಿ ಜು.17 ಹಾಗೂ ಜು.18 ರಂದು ನಡೆದ ಈ ಉದ್ಯೋಗಮೇಳದಲ್ಲಿ ಸಾವಿರಾರು ಜನ ಅಭ್ಯರ್ಥಿಗಳು ನೆರೆದಿದ್ದರು.
ಶಾಲೆ ತೊರೆದವರು, ಎಸ್ ಎಸ್ ಎಲ್ ಸಿಗಿಂತ ಕಡಿಮೆ ವಿದ್ಯಾರ್ಹತೆ ಉಳ್ಳವರು, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ ಪಡೆದವರಲ್ಲದೆ ಪದವಿದರದು, ಇಂಜಿನಿಯರಿಂಗ್ ಪದವೀಧರರು, ಸ್ನಾತ್ತಕೋತ್ತರ ಪದವೀಧರರು ಹೀಗೆ ಎಲ್ಲಾ ಸ್ತರದ ಅಭ್ಯರ್ಥಿಗಳಿಗೆ ಈ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಟಿವಿಎಸ್ , ಶೆಲ್ , ಏಜಿಎಸ್, ಇ4 ಇ, ಗೋಲ್ಡ್ ಮನ್ ಸ್ಯಾಚ್, ಥಾಮ್ಸನ್ ರೈಟರ್ಸ್ ಸೇರಿದಂತೆ ಸುಮಾರು 50 ಕ್ಕೂ ಉದ್ದಿಮೆದಾರರಿಂದ ಸ್ಥಳದಲ್ಲೇ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉದ್ಯೋಗ ಪತ್ರವನ್ನು ಪಡೆದು ವಿತರಿಸಲಾಯಿತು. ಈ ಮಹತ್ವದ ಕೆಲಸವನ್ನು ಮಾನ್ಯ ಮಂತ್ರಿಗಳಾದ ಬಚ್ಚೇಗೌಡ ಹಾಗೂ ನರೇಂದ್ರ ಸ್ವಾಮಿ ಅವರು ಸಂತೋಷದಿಂದ ನೇರವೇರಿಸಿದರು.
ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳ ಕೌಶಲ್ಯ ಮೌಲ್ಯಾಂಕನ ಮಾಡಿ ತರಬೇತಿ ಅಗತ್ಯವಿದ್ದಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಿ ಪ್ರಮಾಣಪತ್ರ ನೀಡಿ, ಸೂಕ್ತವಾದ ಉದ್ಯೋಗ ಕಲ್ಪಿಸಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವ ಬಚ್ಚೇಗೌಡ ಹೇಳಿದರು.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳ ಗಮನಕ್ಕೆ:
Helpline : 080-40621191/2/3/4
E-mail:[email protected]
Website: www.koushalyasiri.in/www.jobraiser.com
ಮುಖಾಂತರ ನೋಂದಾಯಿಸಿಕೊಂಡು ಉದ್ಯೋಗ ಪಡೆಯಬಹುದು.
ಟಿಪ್ಪಣಿ: ರಾಜ್ಯ ಕೌಶಲ್ಯ ಆಯೋಗಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಮುಂದಿನ 5 ವರ್ಷಗಳಲ್ಲಿ ಹತ್ತು ಲಕ್ಷ ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ನೀಡುವುದು ಆಯೋಗದ ಗುರಿ.
2008-09ನೇ ಮತ್ತು 2009-10 ನೇ ಸಾಲಿನಲ್ಲಿ 16 ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಒಟ್ಟು 2008 ಉದ್ದಿಮೆದಾರರು ಹಾಗು ಒಟ್ಟು 2,56,554 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಉದ್ಯೋಗಮೇಳ ಮತ್ತು ತರಬೇತಿಯ ಮುಖಾಂತರ ಒಟ್ಟು 1,29,722 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಒದಗಿಸಲಾಗಿದೆ. ಎಂ.ಇ.ಎಸ್. ಯೋಜನೆಯ ಮುಖಾಂತರ ಒಟ್ಟು 2,08,289ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಕ್ರೈಸ್ಟ್ ಕಾಲೇಜಿನಲ್ಲಿ ನಡೆದ ಮೇಳಕ್ಕೆ ಎಡುಕ್ಯುಟಿ ಸಂಸ್ಥೆ, ಎಪಿಡಿ, ಎನೇಬಲ್ ಇಂಡಿಯಾ, ಸಮರ್ಥನಂ ಹಾಗು ಶೆಶೈರ್ ಲೈವ್ಲಿಹುಡ್ ರಿಸೋರ್ಸ್ ಸೆಂಟರ್ ಸಂಸ್ಥೆಗಳು ಸಹಕಾರ ನೀಡಿದವು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications