ದಲಿತರು ಇಲ್ಲಿ ಬ್ರಾಹ್ಮಣರಾಗುತ್ತಾರೆ!

ಉಜ್ಜನಿ ಗ್ರಾಮದ ಜೌಡೇಶ್ವರಿ ಜಾತ್ರೆಗಾಗಿ ಕಂಬ ಹಾಕಲಾಗಿದ್ದು, ಕಂಬ ಹಾಕುತ್ತಿದ್ದಂತೆಯೇ ಆರು ಮಂದಿ ದಲಿತರು ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಾರೆ. ದಲಿತರು ಬ್ರಾಹ್ಮಣರಂತೆಯೇ ಜನಿವಾರ ಧರಿಸಿ ಬ್ರಾಹ್ಮಣರಂತೆ ಸಂಸ್ಕಾರ, ಕಟ್ಟು ಪಾಡುಗಳನ್ನು ಪಾಲಿಸಲು ಆರಂಭಿಸುತ್ತಾರೆ. ಈ ಆಚರಣೆ ಉಜ್ಜಿನಿ ಗ್ರಾಮದಲ್ಲಿ ಸುಮಾರು 8 ಶತಮಾನಗಳಿಂದಲೂ ಮುಂದುವರೆಸಿಕೊಂಡು ಬಂದಿದೆ. 21 ದಿನಗಳ ಕಾಲ ದಲಿತರ ಜನಾಂಗದ ಆರು ಮಂದಿ ಬ್ರಾಹ್ಮಣರಾಗಿರುತ್ತಾರೆ.
ಈ ಆರು ಜನಿವಾರ ಬ್ರಾಹ್ಮಣರು ಹೆಬ್ಬಾರಮ್ಮನಿಗೆ ಪೂಜೆ ಸಲ್ಲಿಸಿದ ನಂತರ ಇವರು ನೀಡಿದ ಪ್ರಸಾದವನ್ನು ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು, ಸ್ವೀಕರಿಸುತ್ತಾರೆ. ದಲಿತ ಜನಾಂಗ ಬ್ರಾಹ್ಮಣರಾಗಿ ಪರಿವರ್ತನೆಯಾಗದಿದ್ದರೆ ಈ ಗ್ರಾಮದಲ್ಲಿ ಚೌಡೇಶ್ವರಿ ಜಾತ್ರೆ ನಡೆಯುವುದಿಲ್ಲ.
ಹಿನ್ನೆಲೆ:
800 ವರ್ಷಗಳ ಹಿಂದೆ ಉಜ್ಜಿನಿ ಗ್ರಾಮದ ಬ್ರಾಹ್ಮಣ ಯುವತಿಯೊಬ್ಬಳನ್ನು ದಲಿತ ಯುವಕ ಬ್ರಾಹ್ಮಣನೆಂದು ಸುಳ್ಳು ಹೇಳಿ ಮದುವೆಯಾಗಿರುತ್ತಾನೆ. ಇವರ ದಾಂಪತ್ಯಕ್ಕೆ ಐದು ಮಂದಿ ಮಕ್ಕಳು ಜನಿಸಿರುತ್ತಾರೆ. ಆದರೆ, ಕೊನೆಗೊಂದು ದಿನ ಯುವತಿಗೆ ತಾನು ಮದುವೆಯಾಗಿರುವುದು ದಲಿತ ಯುವಕನನ್ನು ಎಂಬ ಸತ್ಯ ತಿಳಿಯುತ್ತಿದ್ದಂತೆಯೇ ಮನನೊಂದು ಅಗ್ನಿ ಪ್ರವೇಶ ಮಾಡುವ ನಿರ್ಧಾರ ಮಾಡುತ್ತಾಳೆ.
ಆಗ ಮಕ್ಕಳು ಮತ್ತು ಗಂಡನ ಮನವಿಯಿಂದಾಗಿ ತನ್ನ ಐದು ಮಂದಿ ಮಕ್ಕಳು ಜಾತ್ರೆ ಸಂದರ್ಭದಲ್ಲಿ ಬ್ರಾಹ್ಮಣರಾಗಿ ಪರಿವರ್ತನೆ ಹೊಂದಿ ನೀತಿ, ನಿಯಮ ಪಾಲಿಸಬೇಕೆಂದು ಶಾಪ ಕೊಡುತ್ತಾಳೆ. ಇದರಿಂದಾಗಿ 6 ಮಂದಿ ದಲಿತರು ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಾರೆ. 6 ಮಂದಿ ದಲಿತರು ಹೆಬ್ಬಾರಮ್ಮನ ಪ್ರತೀಕವನ್ನು ಹೊತ್ತು ಅಗ್ನಿ ಕುಂಡದ ಮೇಲೆ ನಡೆಯುತ್ತಾರೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications