ಜೆಡಿಎಸ್- ಕಾಂಗ್ರೆಸ್ ಮೈತ್ರಿ, ಕಮಲಕ್ಕೆ ಗಡಗಡ

Deshpande
ಬೆಂಗಳೂರು, ನ. 29 : ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾತುಕತೆ ಅಂತಿಮ ಹಂತ ತಲುಪಿದ್ದು, ಚೌಕಾಶಿಗೆ ಅವಕಾಶವಿಲ್ಲದ ಕೆಲವು ಅಭ್ಯರ್ಥಿಗಳ ಪಟ್ಟಿನ್ನು ಎರಡು ಪಕ್ಷಗಳ ಅಂತಿಮಗೊಳಿಸಿದೆ. ಈ ಪ್ರೇಮಾಂಕುರ ಆಡಳಿತರೂಢ ಬಿಜೆಪಿಗೆ ನಡುಕ ತಂದಿದೆ. ಈ ನಡುವೆ ಕಾಂಗ್ರೆಸ್ ನ ಉಗ್ರಪ್ಪ ಜೆಡಿಎಸ್ ದೋಸ್ತಿ ಆದರೆ ಮಾತ್ರ ತುಮಕೂರಿನಿಂದ ಸ್ಪರ್ಧಿಸುವೆ ಎಂದಿದ್ದಾರೆ. ಆದರೆ, ತುಮಕೂರು ಮತ್ತು ಚಿತ್ರದುರ್ಗ ತನಗೇ ಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದೆ. ಹೀಗಾಗಿ ಉಗ್ರಪ್ಪ ಸ್ಪರ್ಧೆ ಅನುಮಾನವಾಗಿದೆ.

ಬೆಂಗಳೂರು ಗ್ರಾಮಾಂತರ ಕುರಿತೂ ಕೊಂಚ ಗೊಂದಲವಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ಒಂದು ಕ್ಷೇತ್ರ ನೀಡುವಂತೆ ಜೆಡಿಎಸ್ ಕೇಳಿದೆ. ಹೊಂದಾಣಿಕೆ ಅಂತಿಮ ಹಂತದಲ್ಲಿ ಮುರಿದುಬಿದ್ದರೆ ಎಲ್ಲ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ತಯಾರಿ ನಡೆಸಿದೆ. ಮೈತ್ರಿ ಆದರೂ 5-6 ಕಡೆ ಅನುಕೂಲ ದೃಷ್ಟಿಯಿಂದ ಎರಡೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಬಹುದು.

ಕಾಂಗ್ರೆಸ್ ನಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್ ವಿ ದೇಶಪಾಂಡೆ ಬದಲು ಎಸ್ ಎಲ್ ಗೋಟ್ನೇಕರ್ ಅವರ ಹೆಸರು ಅಂತಿಮಗೊಂಡಿದೆ. ಶನಿವಾರ ಮಾತುಕತೆ ನಂತರ ಬೆಂಗಳೂರು ಗ್ರಾಮಾಂತರ- ರವಿ, ದಕ್ಷಿಣ ಕನ್ನಡ- ಪ್ರತಾಪಚಂದ್ರಶೆಟ್ಟಿ, ಉತ್ತರ ಕನ್ನಡ-ಎಸ್ ಎಲ್ ಗೋಟ್ನೇಕರ್, ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ, ಕೊಡಗು- ಜಾನ್, ಮೈಸೂರು- ಮಂಜುನಾಥ, ರಾಯಚೂರು-ಬಸವರಾಜ ಇಟಗಿ, ಗುಲ್ಬರ್ಗಾ-ಅಲ್ಲಮಪ್ರಭು ಪಾಟೀಲ್, ಬೆಳಗಾವಿ- ವೀರಕುಮಾರ್ ಪಾಟೀಲ್, ಬಾಗಲಕೋಟಿ-ಎಸ್ ಆರ್ ಪಾಟೀಲ್ ಹೆಸರು ಅಂತಿಮಗೊಂಡಿದೆ.

ಜೆಡಿಎಸ್ ಕೂಡಾ ಮಂಡ್ಯ-ರಾಮಕೃಷ್ಣ, ಮೈಸೂರು-ಸಂದೇಶ ನಾಗರಾಜ್, ತುಮಕೂಕು- ಡಾ ಹುಲಿನಾಯ್ಕರ್, ಹಾಸನ- ಪಟೇಲ್ ಶಿವರಾಮ್, ಚಿತ್ರದುರ್ಗ-ಸಿದ್ಧೇಶ್ ಹೆಸರನ್ನು ಅಂತಿಮಗೊಳಿಸಿದೆ. ಮೈತ್ರಿ ಅಂತಿಮಗೊಂಡಲ್ಲಿ ಕೆಲವೊಂದು ಬದಲಾವಣೆ ಆಗುವ ಸಾಧ್ಯತೆ ಇದೆ. ಇಂದು ಸಂಜೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳಲಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+