ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ !

ಇಪ್ಪತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದ 35 ವರ್ಷದ ರಣವೀರ್ ಸಿಂಗ್ ಬಾಘೇಲ್ ಎನ್ನುವಾತ ತಾನು ನಂಬಿರುವ ದೇವಿಯನ್ನು ಸಂತೃಪ್ತಿಪಡಿಸಲು ತನ್ನ ನಾಲಿಗೆಯನ್ನು ಕತ್ತರಿಸಿ ಅಂಬಾದೇವಿಗೆ ಅರ್ಪಿಸಿದ್ದಾನೆ. ರಣವೀರ್ ಸಿಂಗ್ ನ 'ಭಕ್ತಿ ಪರಾಕಾಷ್ಠೆ'ಯ ಈ ಅತಿರೇಕದ ಘಟನೆ ಮೇಘನಿ ನಗರದ ಅಂಬಾದೇವಿ ದೇವಾಲಯದಲ್ಲಿ ನಡೆದಿದೆ.
ನಗರಕ್ಕೆ ವಲಸೆ ಬಂದಿರುವ ಸಿಂಗ್, ದೇವಿ ನನ್ನ ನಾಲಿಗೆ ಅರ್ಪಿಸುವಂತೆ ಸೂಚಿಸಿದ್ದಳು, ಹಾಗಾಗಿ ನಾಲಿಗೆ ಕೊಯ್ದು ಅರ್ಪಿಸಿದೆ, ನನಗೇನೂ ಆಗುವುದಿಲ್ಲ. ನಾನು ಈಗ ಆರೋಗ್ಯವಾಗಿದ್ದು, ದೇವಿಯ ಕೃಪೆಯಿಂದ ನನ್ನ ನಾಲಿಗೆ ಪುನಃ ಚಿಗುರುತ್ತದೆ ಎನ್ನುವ ನಂಬಿಕೆ ನನಗಿದೆ ಎಂದು ತಿಳಿಸಿದ್ದಾನೆ. ನಾಲಿಗೆ ಕತ್ತರಿಸಿಕೊಂಡ ನಂತರ ರಣವೀರ್ ಸಿಂಗ್ ಚಿಕಿತ್ಸೆಗಾಗಿ ವೈದ್ಯರ ಬಳಿ ಕೂಡ ಹೋಗಿಲ್ಲ ಮತ್ತು ಔಷಧಿಯನ್ನೂ ತೆಗೆದುಕೊಂಡಿಲ್ಲ ಎಂದು ಆತನ ಸಹೋದರ ಸಂಬಂಧಿ ತಿಳಿಸಿದ್ದಾನೆ.
(ಏಜನ್ಸೀಸ್)












Click it and Unblock the Notifications