ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿಯಲ್ಲಿ ಮತ್ತೆ ರೆಡ್ಡಿಗಳ ಗುಪ್ತ ಸಭೆ
ರಾಜ್ಯ ಬಿಜೆಪಿಯಲ್ಲೀನ ಭಿನ್ನಮತ ಶಮನವಾಯಿತು ಎನ್ನುವಾಗಲೇ ಮತ್ತೆ ಭಿನ್ನಮತ ಶುರುವಾಗಿದ್ದು, ಸಚಿವ ಜನಾರ್ದನರೆಡ್ಡಿ ಅವರ ಗೃಹ ಕಚೇರಿ ಕುಟೀರದಲ್ಲಿ ಕೆಲವು ಸಚಿವರು ಹಾಗೂ ಶಾಸಕರು ಭಾಗವಹಿಸಿ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಗ್ರಾಸವಾಗಿದೆ. ಶನಿವಾರ ಸಂಜೆ 6 ಗಂಟೆಗೆ ಸುಮಾರಿಗೆ ಹಿರಿಯೂರು ಮಾರ್ಗವಾಗಿ ಒಂದೇ ವಾಹನದಲ್ಲಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಡಿ ಸುಧಾಕರ್ ತರಾತುರಿಯಲ್ಲಿ ಆಗಮಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬಳ್ಳಾರಿಯ ಸಚಿವರನ್ನೋಳಗೊಂಡಂತೆ ಒಟ್ಟು 8 ಸಚಿವರು ಹಾಗೂ ಹತ್ತು ಜನ ಶಾಸಕರು ಜನಾರ್ದನರೆಡ್ಡಿ ಅವರೊಂದಿಗೆ ಗಂಭೀರ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ. ಸಚಿವರು ರೆಡ್ಡಿ ಗೃಹ ಕಚೇರಿಗೆ ಆಗಮಿಸಿದೊಡನೆ ಅವರು ಸರಕಾರಿ ವಾಹನವನ್ನು ಹೊರಗಡೆಗೆ ಕಾಣಿಸುವಂತೆ ನಿವಾಸದೊಳಗೆ ನಿಲ್ಲಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, June 21, 2009, 12:42 [IST]