ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೂಬಾಯಿಗೆ ಭಾರತರತ್ನ ನೀಡಿಲು ಸಿಎಂ ಒತ್ತಾಯ

By Staff
|
Google Oneindia Kannada News

ಹುಬ್ಬಳ್ಳಿ, ಜೂ. 17 : ಗಾನವಿದುಷಿ ಡಾ ಗಂಗೂಬಾಯಿ ಹಾನಗಲ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ. ಇದಕ್ಕಾಗಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗೂಬಾಯಿಯವರನ್ನು ಮಂಗಳವಾರ ಭೇಟಿಯಾದ ನಂತರ ಅವರ ಸುದ್ದಿಗಾರರೊಂದಿಗೆ ಮಾತನಾಡಿದರು. ಗಂಗೂಬಾಯಿ ರಾಜ್ಯಕ್ಕಷ್ಟೇ ಅಲ್ಲ, ದೇಶದ ಸಾಂಸ್ಕೃತಿಕ ಆಸ್ತಿ. ಅವರ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಅವರು ಭರವಸೆ ನೀಡಿದರು. 97 ವರ್ಷಗಳ ಕಾಲ ಸಂಗೀತ ಸೇವೆಯಲ್ಲಿ ಹಿರಿಯ ಚೇತನ ಗಂಗೂಬಾಯಿ ಶೀಘ್ರ ಗುಣಮುಖರಾಗಲಿ. ಇನ್ನು ಹತ್ತಾರು ವರ್ಷಗಳ ಕಾಲ ಬಾಳಿ ನಮ್ಮನ್ನೆಲ್ಲಾ ಹರಿಸಲಿ ಎಂದು ಯಡಿಯೂರಪ್ಪ ನುಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X