ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಹಾರ್ ನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನೆಕಾರರು
ದಾನಾಪುರ - ದರ್ಬಾಂಗ್ ನಡುವೆ ಸಂಚರಿಸುವ ಇಂಟರ್ ಸಿಟಿ ರೈಲಿನ ಹವಾನಿಯಂತ್ರಿತ ಬೋಗಿಗೆ ಬೆಂಕಿ ಹಚ್ಚಿರುವ ಪ್ರತಿಭಟನಾಕಾರರು ಪಾಟ್ನಾದಿಂದ 32 ಕಿ.ಮೀ ದೂರದಲ್ಲಿ ರೈಲ್ವೆ ಲೈನ್ ನನ್ನು ಕೂಡಾ ಹಳಿತಪ್ಪಿಸಿದ್ದಾರೆ. ರೈಲ್ವೆ ಇಲಾಖೆ ದೆಹಲಿ ಮತ್ತು ಪಾಟ್ನಾದ ನಡುವೆ ಸಂಚರಿಸುವ ಶ್ರಮಜೀವಿ ಎಕ್ಸಪ್ರೆಸ್ ರೈಲನ್ನು ಖುಸೃಪುರ ನಿಲ್ದಾಣದಲ್ಲಿ ನಿಲುಗಡೆಯನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರುವ ಪ್ರತಿಭಟನಕರಾರು ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ.
ದಿನಪತ್ರಿಕೆಯಲ್ಲಿ ಕೆಲವೊಂದು ರೈಲು ನಿಲುಗಡೆ ರದ್ದುಗೊಳಿಸಿದ ಪೂರ್ವ ರೈಲ್ವೆ ಇಲಾಖೆಯ ಪ್ರಕಟಣೆಯಿಂದ ರೊಚ್ಚಿಗೆದ್ದ ಪಕ್ಕದ ನೂರಾರು ಗ್ರಾಮಸ್ಥರು ಈ ದಾಂಧಲೆ ನಡೆಸಿದ್ದಾರೆ. ನಿಲ್ದಾಣದಲ್ಲಿ ಭಾರಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು , ಈ ವಿಭಾಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ರೈಲ್ವೆ ಪೋಲಿಸ್ ಅಧೀಕ್ಷಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
(ಏಜೆನ್ಸೀಸ್)
Comments
Story first published: Monday, June 1, 2009, 14:26 [IST]