ಬಿಜೆಪಿಗೆ ಸಡ್ಡು ಹೊಡೆದ ಆರ್ಎಸ್ಎಸ್, ಭಜರಂಗದಳ

Mahesndra Kumar
ಬೆಂಗಳೂರು ಎ 4: ಹಿರಿಯ ಆರ್ಎಸ್ಎಸ್ ಮುಖಂಡ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಜನಸಂಘ ಮತ್ತು ಸ್ವತಂತ್ರ ನೆಲೆಯಲ್ಲಿ ಎರಡೂ ನಾಮಪತ್ರವನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದಾರೆ. ಇತ್ತ ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಮಹೇಂದ್ರ ಕುಮಾರ್ ಶ್ರೀರಾಮ ಸೇನೆ ಸೇರಿದ್ದು ಭಾರತೀಯ ಜನಸಂಘದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಎರಡೂ ಬೆಳವಣಿಗೆ ಬಿಜೆಪಿಯ ಭದ್ರಕೋಟೆ ಮಂಗಳೂರು ಮತ್ತು ಉಡುಪಿಯಲ್ಲಿ ಪಕ್ಷಕ್ಕೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆಗಳಿವೆ.

ನಾನಾ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದ ರಾಮ್ ಭಟ್ ಕಳೆದ ಒಂದು ವರ್ಷಗಳಿಂದ ಬಿಜೆಪಿಯೊಂದಿಗೆ ಮುನಿಸಿಕೊಂಡು ಸಮಾನ ಮನಸ್ಕರ ಜೊತೆ ಸೇರಿ ಸ್ವಾಭಿಮಾನಿ ವೇದಿಕೆ ಸ್ಥಾಪಿಸಿದ್ದರು. ಜನಸಂಘವನ್ನು ಕಟ್ಟುವ ಜೊತೆಗೆ ಬಿಜೆಪಿಗೆ ಪಾಠ ಕಲಿಸುವುದು ತಮ್ಮ ಹೋರಾಟದ ಉದ್ದೇಶ ಎಂದಿದ್ದರೆ ರಾಮ್ ಭಟ್. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಹೇಂದ್ರ ಕುಮಾರ್, ಭಾರತೀಯ ಜನಸಂಘದಿಂದ ಸ್ಪರ್ಧೆಗೆ ತಾಂತ್ರಿಕ ತೊಂದರೆ ಎದುರಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+