ಕನ್ನಡಿಗರ ಕ್ಷಮೆಯಾಚಿಸಿದ ಅಂಗಡಿ, ಪಾಟೀಲ್
ಬೆಳಗಾವಿ.
ಮಾ. 20 : ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುರೇಶ್ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ್ ಅವರು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಧ್ವಜವಿವಾದಕ್ಕೆ ಸಂಬಂಧಿಸಿದ ಪ್ರದರ್ಶನದಲ್ಲಿ ನಾವು ಪಾಲ್ಗೊಂಡಿದ್ದರಿಂದ ಹಿರಿಯ ಸಾಹಿತಿಗಳು ಹಾಗೂ ಕನ್ನಡ ಕಟ್ಟಾಳುಗಳಿಗೆ ನೋವಾಗಿರುವುದನ್ನು ಗಮನಿಸಿದ್ದೇವೆ. ಅವರ ನೋವು ಸಮಸ್ತ ಕನ್ನಡಿಗರ ನೋವು ಎಂದು ಭಾವಿಸಿ ಕ್ಷಮೆಯಾಚಿಸುತ್ತಿದ್ದೇವೆ ಎಂದು ಈ ಇಬ್ಬರೂ ಮುಖಂಡರು ಹೇಳಿದರು. id="toptextpromo">ಮಹಾನಗರ
ಪಾಲಿಕೆ ಹಳೆಯ ಕಟ್ಟಡದ ಮೇಲಿದ್ದಂತೆ ಸ್ಥಳಾಂತರಗೊಂಡಿರುವ ಪಾಲಿಕೆಯ ನೂತನ ಪ್ರಧಾನ ಕಾರ್ಯಾಲಯದ ಮೇಲೂ ಭಗವಾಧ್ವಜ ಹಾರಿಸಬೇಕು ಎಂದು ಒತ್ತಾಯಿಸಿ ಎಂಇಎಸ್ ಮುಖಂಡರು ಹಾಗೂ ಎಂಇಎಸ್ ಬೆಂಬಲಿತ ಸದಸ್ಯರು ಸೋಮವಾರ ನಗರದಲ್ಲಿ ನಡೆಸಿದ್ದ ಪ್ರದರ್ಶನದಲ್ಲಿ ಭಾಗವಹಿಸಿದ್ದಲ್ಲದೆ, ಅವರ ಬೇಡಿಕೆಗೆ ಬೆಂಬಲ ನೀಡಿದ ಕಾರಣ ಈ ಇಬ್ಬರೂ ಮುಖಂಡರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇವರ ನಿಲುವು ಖಂಡಿಸಿ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಇವರು ಕ್ಷಮೆಯಾಚಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)ಸಂಸದ ಸುರೇಶ್ ಅಂಗಡಿ ವಿರುದ್ದ ಕ್ರಿಮಿನಲ್ ಮೊಕದ್ದಮೆ












Click it and Unblock the Notifications