ವಿನೋದ್ ಮೇಲೆ ಗುಂಡಿನ ದಾಳಿ ನಡೆದಿಲ್ಲ : ಬಿದರಿ
ಬೆಂಗಳೂರು ಫೆ 7 : ಚಿತ್ರನಟ ವಿನೋದ್ ರಾಜ್ ಮತ್ತು ಅವರ ಅಮ್ಮ ಹಿರಿಯ ನಟಿ ಲೀಲಾವತಿ ಮೇಲೆ ಗುಂಡಿನ ದಾಳಿ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಿಗ್ಗೆ 9.45ರಸುಮಾರಿಗೆ ತಮ್ಮ ಮೇಲೆ ಯಾರೋ ದಾಳಿ ನಡೆಸಿರುವುದಾಗಿ ವಿನೋದ್ ಮತ್ತು ಲೀಲಾವತಿ ಉಪ್ಪಾರ್ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಗಾಂಧಿನಗರದಿಂದ ಅಬ್ಬಯ್ಯ ನಾಯ್ಡು ಸ್ಟುಡಿಯೋಗೆ ಹೋಗುತ್ತಿದ್ದಾಗ ಅವರ ಕಾರಿನ ಮೇಲೆ ದಾಳಿ ನಡೆಸಲಾಗಿತ್ತು.
ಕಾರು ಗುಂಡುನಿರೋಧಕವಾಗಿದ್ದರಿಂದ ಬಚಾವಾದೆವು ಎಂದು ವಿನೋದ್ ರಾಜ್ ದೂರಿನಲ್ಲಿ ತಿಳಿಸಿದ್ದರು. ಕಾರಿನ ಹಿಂದಿನ ಬಲಭಾಗದ ಕಿಟಕಿ ಗಾಜು ಪೂರ್ತಿ ಪುಡಿಪುಡಿಯಾಗದೆ ಮೇಲ್ಭಾಗದಲ್ಲಿ ಮಾತ್ರ ತುಂಡಾಗಿತ್ತು. ಕಲ್ಲು ಅಥವಾ ಗುಂಡು ದಾಳಿ ನಡೆದಿರುವ ಬಗ್ಗೆ ಕಾರಿನ ಚಾಲಕನೂ ಅನುಮಾನ ವ್ಯಕ್ತಪಡಿಸಿದ್ದ.
ಪ್ರಥಮ ತನಿಖೆಯ ನಂತರ ಕಾರಿನ ಮೇಲೆ ಗುಂಡು ಹಾರಿಸಿಲ್ಲ ಎಂದು ತಿಳಿದುಬಂದಿದೆ. ಗುಂಡು ಹಾರಿಸಿದ್ದರೆ ಗಾಜು ಪೂರ್ತಿ ಛಿದ್ರವಾಗುತ್ತಿತ್ತು. ಅಲ್ಲದೆ, ಕಾರಿನಲ್ಲಿ ಲೆಡ್ ತುಣುಕುಗಳಾವುದೂ ಸಿಕ್ಕಿಲ್ಲ ಎಂದು ಬಿದರಿ ತಿಳಿಸಿದ್ದಾರೆ. ಅಲ್ಲದೆ, ಟೋಯೋಟಾ ಕಾರು ಗುಂಡು ನಿರೋಧಕ ಗಾಜು ಹೊಂದಿಲ್ಲ ಎಂದು ಬಿದರಿ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ?












Click it and Unblock the Notifications