ಸತ್ಯಂ ,ಮೇತಾಸ್ ಕಂಪನಿಗೆ ಶೋಕಾಸ್ ನೋಟೀಸ್
ಬೆಂಗಳೂರು, ಫೆ.3: ಕರ್ನಾಟಕದಲ್ಲಿ ಮೈತಾಸ್ ಇನ್ ಫ್ರಾ ಲಿಮಿಟೆಡ್ ಮತ್ತು ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಕೈಗೊಂಡಿವೆ. ಆದರೆ ಈ ಸಂಸ್ಥೆಗಳು ಅವ್ಯವಹಾರದಲ್ಲಿ ತೊಡಗಿಕೊಂಡಿದ್ದು ಬೆಳಕಿಗೆ ಬಂದ ನಂತರ ರಾಜ್ಯದಲ್ಲಿನ ಅವರ ಯೋಜನೆಗಳನ್ನು ಪರಿಶೀಲಿಸಲು ಜ.29ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದರು. ಸಭೆಯಲ್ಲಿ ಕೈಗೊಂಡ ಮುಖ್ಯ ನಿರ್ಣಯಗಳು ಹೀಗಿವೆ.
ರಾಜ್ಯದಲ್ಲಿ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳ ನಿರ್ಮಾಣದ ಗುತ್ತಿಗೆಯನ್ನು ಪಡೆದಿದ್ದ ಮೇತಾಸ್ ಇನ್ ಫ್ರಾ ಲಿಮಿಟೆಡ್ ಕಂಪನಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಯೋಜನಾ ಅಭಿವೃದ್ಧಿ ಒಪ್ಪಂದದ ಪ್ರಕಾರ ಮೇತಾಸ್ ಇನ್ ಫ್ರಾ ಯೋಜನೆಯನ್ನು ನಿಲ್ಲಿಸಿದ್ದರೂ ನೀವೇಕೆ ಅವರ ಮೇಲೆ ಕ್ರಮಕೈಗೊಂಡಿಲ್ಲ ಎಂದು ಡೆವಲಪರ್ ಗಳನ್ನು ಪ್ರಶ್ನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಇತರೆ ಹಣಕಾಸು ಯೋಜನೆಗಳನ್ನು ಮುಚ್ಚಿಟ್ಟಿರುವ ಬಗ್ಗೆಯೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೇತಾಸ್ ಯೋಜನೆಗಳ ಬಗ್ಗೆ ಹೇಳಿಕೆ ನೀಡಿ ಅಕ್ರಮ ವ್ಯವಹಾರಗಳಲ್ಲಿ ತೊಡಗಿರುವ ಯಾವುದೇ ಕಂಪನಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದಿದ್ದರು.
(ದಟ್ಸ್
ಕನ್ನಡ
ವಾರ್ತೆ)
ರಾಜ್ಯದಲ್ಲಿ
ಮೇತಾಸ್
ತಲೆ
ಹಾಕುವಂತಿಲ್ಲ