ಕಳಸಾ-ಬಂಡೂರಿ ಕಾಮಗಾರಿ ಅ.2ರೊಳಗೆ ಆರಂಭ
ಕಳಸಾ-ಬಂಡೂರಿ ಕಾಮಗಾರಿ ಅ.2ರೊಳಗೆ ಆರಂಭ
ಭದ್ರಾ ಮೇಲ್ದಂಡೆ ಯೋಜನೆ ಆರಂಭಕ್ಕೂ ಬದ್ಧ -ಕೆ.ಎಸ್.ಈಶ್ವರಪ್ಪ
ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸರ್ಕಾರವು ಈ ಯೋಜನೆಗೆ ಸಮ್ಮತಿಸಿದೆ. ಗೋವಾ ಸರ್ಕಾರದ ಮನವೊಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸುವ ಪ್ರಯತ್ನವೂ ನಡೆದಿದೆ. ಹಿಂದಿನ ರಾಜ್ಯ ಸರ್ಕಾರ ಈ ಯೋಜನೆಗಾಗಿ 100 ಕೋಟಿ ರೂ. ತೆಗೆದಿರಿಸಿದೆ ಎಂದರು.
ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಯೂ ಜಾರಿಗೆ ಬರಲಿದೆ. ವಾರದೊಳಗೆ ಯೋಜನೆಗೆ ಅಂತಿಮ ರೂಪುರೇಷೆ ಸಿದ್ಧವಾಗಲಿದೆ. ಈ ಯೋಜನೆಗೆ 1000 ಕೋಟಿ ರೂ.ಗಳ ಅಗತ್ಯವಿದೆ. ಹೇಗೋ ಸಂಪನ್ಮೂಲ ಕ್ರೋಡೀಕರಿಸುವುದಾಗಿ ಈಶ್ವರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications