ಅಂಗವೈಕಲ್ಯ ಮೆಟ್ಟಿನಿಂತ ಕ್ರೀಡಾಪಟು ಮಾಲತಿ ಈಗ ಏನ್ಮಾಡ್ತಿದಾರೆ?
ಬೆಂಗಳೂರು : ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಲಿ ಕುರ್ಚಿಯ ಕ್ರೀಡಾಪಟು ಮಾಲತಿ ಹೊಳ್ಳ ಈಗೇನು ಮಾಡುತ್ತಿದ್ದಾರೆ ?
ಮಾಲತಿ ಈಗ ಸಮಾಜ ಸೇವಕಿ. ಅಪಘಾತಗಳಲ್ಲಿ ಬೆನ್ನು ಮೂಳೆ ಮುರಿದುಕೊಂಡು ಒದ್ದಾಡುತ್ತಿರುವವರಿಗಾಗಿ ಒಂದು ಪ್ರತ್ಯೇಕ ಮನೆ ಕಟ್ಟುತ್ತಿದ್ದಾರೆ. ವಿವಿಧ ನಮೂನೆಯ ಅಫಘಾತಗಳಲ್ಲಿ ಬೆನ್ನು ಮೂಳೆ ಮುರಿದುಕೊಂಡು ಓಡಾಡಲಾಗದೇ ಗಾಲಿ ಕುರ್ಚಿಯನ್ನು ಅವಲಂಬಿಸಿದವರಿಗಾಗಿ ಮಾಲತಿ ನಿರ್ಮಿಸುತ್ತಿರುವ ಮನೆ-ಬದುಕಿನ ಆಶಾಕಿರಣವಾಗಲಿದೆ.
ಬೆನ್ನು ಮೂಳೆ ಮುರಿದುಕೊಂಡು ಅನಿರೀಕ್ಷಿತವಾಗಿ ಅಂಗವಿಕಲರಾದವರು ಗಾಲಿ ಕುರ್ಚಿಯನ್ನು ಅವಲಂಬಿಸುವಾಗ ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತದೆ. ಬೆನ್ನು ಮೂಳೆ ಮುರಿದುಕೊಂಡವರಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಇಂತಹ ಅಪಘಾತಗಳಿಂದಾಗಿ ಜೀವನದಲ್ಲಿ ಸಾಧನೆ ಮಾಡುವ ಧ್ಯೇಯ ಹೊಂದಿರುವವರು ಧೈರ್ಯ ಕುಂದದಂತೆ ನೋಡಿಕೊಳ್ಳುವುದು ಮಾಲತಿ ನಿರ್ಮಿಸುತ್ತಿರುವ ಮನೆಯ ಉದ್ದೇಶ. ಈ ಮನೆಯಲ್ಲಿ ಟಿವಿ, ಫೋನ್, ಹಾಸಿಗೆಗಳಲ್ಲಿ ಯಾರನ್ನೂ ಅವಲಂಬಿಸದೇ ಬದುಕುವುದು ಹೇಗೆ ಎಂಬ ಬಗ್ಗೆ ರೋಗಿಗಳಿಗೆ ಹೇಳಳಿಕೊಡಲಾಗುವುದು.
ಇದೇ ಮಾದರಿಯಲ್ಲಿ ರಜಾ ಕಾಲೀನ ವಸತಿ ಗೃಹಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಹೆಚ್ಚಿನ ಶಿಕ್ಷಣ ಪಡೆಯಲು ಇಚ್ಚಿಸುವವರಿಗೆ ನೆರವಾಗುವ ಬಗ್ಗೆಯೂ ಮಾಲತಿ ಯೋಚಿಸುತ್ತಿದ್ದಾರೆ. ಈ ಹೊಸ ಯೋಜನೆಗೆ ಮೊತ್ತ ಮೊದಲನೆಯದಾಗಿ ನಿಧಿ ಸಂಗ್ರಹ ನಡೆಯಬೇಕು. ನಿಧಿ ಸಂಗ್ರಹವಾದ ನಂತರ ಬೆನ್ನು ಮೂಳೆ ಮುರಿದುಕೊಂಡ ಅಂಗವಿಕಲರಿಗೆ ನಿರ್ಮಿಸುವ ಮನೆಯ ರೂಪು ರೇಷೆಗಳು ಸ್ಪಷ್ಟವಾಗಲಿದೆ.
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ











Click it and Unblock the Notifications