ಜಮಾನಾ ಕಾರುಗಳ ದೀವಾನಾ
ಬೆಂಗಳೂರು : ಭಾನುವಾರ ನೀವು ಫ್ರೀ ಇದ್ದೀರಾ ? ಬೆಳ್ಳಂಬೆಳಿಗ್ಗೆ ಶಾಲು ಹೊದ್ದುಕೊಂಡು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲಿನ ಮುಂದೆ ವಾಕಿಂಗ್ ಹೋದರೆ ನೀವು ಏಳೆಂಟು ದಶಕಗಳ ಹಿಂದಿನ 70-80 ವರ್ಷ ವಯಸ್ಸಾದ ಸುಂದರಿಯರು ಅಲ್ಲಿ ನಸುನಗುತ್ತಾ ನಿಂತಿರುತ್ತಾರೆ. ನೀವು ನೋಡುನೋಡುತ್ತಿದ್ದಂತೆಯೇ ಅವರೆಲ್ಲ ನಿಮ್ಮ ನೆನಪುಗಳಿಗೆ ಕಚಗುಳಿ ಇಟ್ಟು ಗಂಭೀರವಾಗಿ ಉರುಳುತ್ತಾ ಹಾಗೆ , ಕಣ್ಮರೆಯಾಗಿಬಿಡುತ್ತಾರೆ.
ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್(ಕೆವಿಸಿಸಿಸಿ), ಪ್ರತಿ ವರ್ಷದಂತೆ ಹಳೆಯ ಸೌಂದರ್ಯ ಮತ್ತೆ ಬೆಂಗಳೂರಿಗೆ ಬರಲಿ ಎನ್ನುವ ಘೋಷಣೆಯಾಂದಿಗೆ ‘ವಿಂಡ್ಸರ್ ಮ್ಯಾನರ್ ವಿಂಟೇಜ್ ರ್ಯಾಲಿ -2000’ ಭಾನುವಾರ (29-10-2000) ಆಯೋಜಿಸಿದೆ. 15 ವರ್ಷಗಳಿಗಿಂತ ಹಳೆ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕೆಂದು ಸರಕಾರ ಹೊರಡಿಸಿದ ಆದೇಶ ಜಾರಿಗೆ ಬರುತ್ತಿರುವಾಗಲೇ ದಶಕಗಳ ಹಿಂದಿನ ಕಾರುಗಳು ಬೆಂಗಳೂರು ರಸ್ತೆಯಲ್ಲಿ ರಾಜಗಾಂಭೀರ್ಯದಲ್ಲಿ ಸಾಗಲಿವೆ. ಮೊನ್ನೆಯಷ್ಟೇ ಬಂದಿರುವ ಹೊಸಹೊಸ ಕಾರುಗಳೇ ಮಳೆಯ ಒನಕೆಧಾರೆಗೆ ಶೆಡ್ನಿಂದ ಆಚೆಗೆ ಬರಲು ಹಠ ಮಾಡುತ್ತಿರುವಾಗ ಈ ಕಾರುಗಳು ತಾವು ಕ್ರಮಿಸಿದ ರಸ್ತೆಗಳ, ಎದುರು ಹಾಕಿದ ಕಾಡಾನೆ, ಕಾಡೆಮ್ಮೆಗಳ ನೆನಪುಗಳೊಂದಿಗೆ ರಸ್ತೆಗಳಿಯಲಿವೆ. ಆದರೆ ಅವುಗಳ ಕಣ್ಣಿಗೆ ಈಗ ಬೆಳ್ಳನೆ ಹೊಳೆವ ಗಾಜಿನ ಬಿಲ್ಡಿಂಗ್ಗಳು....ಕಿರುಚುವ ಬಿಟಿಎಸ್ ಬಸ್ಸುಗಳು ಮಾತ್ರ ಕಾಣಸಿಗುತ್ತವೆ.
ಜಮಾನಾ ಕಾರುಗಳ ದೀವಾನಾ : ಕೆಲವು ಕಾರುಗಳ ನಂಬರ್ ಪ್ಲೇಟಿನ ಬಳಿ ಇಂಗ್ಲೆಂಡ್ನ ಧ್ವಜ, ಮತ್ತೆ ಕೆಲವು ಕಾರುಗಳ ಮೂಗಿನ ಬಳಿ ಗರುಡ..., ದೊಡ್ಡ ಇಂಜಿನ್ಗಳ, ಛಾವಣಿಯಿಲ್ಲದ , ಕುಳ್ಳಗಿರುವ ...ಕಾರುಗಳನ್ನು ನೋಡುವಾಗ ಕಾರಿನ ಮೇಲೆ ರಾಜ ರಾಣಿಯರಿದ್ದರೆ ಇನ್ನಷ್ಟು ಚಂದ ಎನಿಸಿಬಿಡುತ್ತದೆ. ಛಾವಣಿ ಮುಚ್ಚಿರುವ, ಹುಬ್ಬು ಗಂಟಿಕ್ಕಿದ ಜೀಪಿನಂತಿರುವ ಕಾರು, ಎತ್ತಿನ ಗಾಡಿಯ ಚಕ್ರದಂತಿರುವ ಟೈರುಗಳ, ಗ್ಯಾಸ್ ಲೈಟನ್ನು ನೆನಪಿಗೆ ತರುವ ಫೋಕಸ್ ಲೈಟುಗಳ ಕಾರುಗಳು ... ನಮ್ಮ ಹಿಂದಿನವರು ಇದರ ಮೇಲೆ ಕುಳಿತು ಏನೆಲ್ಲಾ ಸಾಹಸ, ವ್ಯವಹಾರಗಳನ್ನು ಮಾಡಿರಬಹುದಪ್ಪಾ ಎಂಬ ಕಲ್ಪನೆಯಾಳಗೆ ನಿಮ್ಮನ್ನೆಳೆದುಕೊಂಡುಬಿಡುತ್ತದೆ. ಹೆಸರಿಗೆ ಕಾರ್ ರ್ಯಾಲಿಯಾದರೂ ಮೋಟಾರ್ ಸೈಕಲ್ಗಳು, ಉದ್ದ ಮೂತಿಯ ಮಿಲಿಟರಿ ಜೀಪುಗಳು ರ್ಯಾಲಿಯಲ್ಲಿ ಸದ್ದು ಮಾಡಿ ತಮ್ಮ ಘೋಷಣೆ ಕೂಗಲಿವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications