ವಿಶ್ವ ಹಿಂದು ಪರಿಷತ್ನಿಂದ ಒಂದು ಲಕ್ಷ ಏಕೋಪಾಧ್ಯಾಯ ಶಾಲೆ
ವಿಜಯವಾಡ : ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದು ಲಕ್ಷ ಏಕೋಪಾಧ್ಯಾಯ ಶಾಲೆಗಳನ್ನು ( ಏಕಾಲ್ ವಿದ್ಯಾಲಯ ) ತೆರೆಯುವ ಕಾರ್ಯಕ್ರಮವನ್ನು ವಿಶ್ವಹಿಂದು ಪರಿಷತ್ ಹಮ್ಮಿಕೊಂಡಿದೆ. ದೇಶಾದ್ಯಂತ ಸ್ಥಾಪಿಸಲಾಗುವ ಈ ಶಾಲೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶ, ಬುಡಕಟ್ಟು ಪ್ರದೇಶ ಹಾಗೂ ಕೊಳಗೇರಿಗಳಲ್ಲಿ ತಲೆ ಎತ್ತಲಿವೆ. ಜತೆಗೆ , ಇದೇ ಅವಧಿಯಲ್ಲಿ ಗ್ರಾಮ ರಕ್ಷಕ ಸಮಿತಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಇರಾದೆಯನ್ನೂ ಪರಿಷತ್ ಪ್ರಕಟಿಸಿದೆ. ಸದ್ಯ ದೇಶದಲ್ಲಿ ಇಂಥ 25 ಸಾವಿರ ಸಮಿತಿಗಳು ಕೆಲಸ ಮಾಡುತ್ತಿವೆ.
ಪಶ್ಚಿಮದಿಂದ ಆಗುತ್ತಿರುವ ಸಾಂಸ್ಕೃತಿಕ ಆಕ್ರಮಣವನ್ನು ತಡೆಗಟ್ಟುವುದು, ಮುಗ್ಧ, ಬಡವ, ಮತ್ತು ತಿಳವಳಿಕೆ ರಹಿತ ಹಿಂದು ಸಮುದಾಯಕ್ಕೆ ಏಕತೆಯ ಭಾವವನ್ನು ಕಟ್ಟಿಕೊಡುವುದೇ ಏಕೋಪಾಧ್ಯಾಯ ಶಾಲೆ ಮತ್ತು ಗ್ರಾಮ ರಕ್ಷಕ ಸಮಿತಿಗಳ ಉದ್ದೇಶ ಎಂದು ಪರಿಷತ್ತಿನ ಅಖಿಲ ಭಾರತ ಕಾರ್ಯದರ್ಶಿ ವೈ. ರಾಘವುಲು ವಿಜಯವಾಡದಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಬಿಹಾರ, ಒರಿಸ್ಸ, ರಾಜಸ್ಥಾನ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಈಶಾನ್ಯ ಭಾರತದಲ್ಲಿ 5,000 ಏಕಾಲ್ ವಿದ್ಯಾಲಯಗಳನ್ನು ಈಗಾಗಲೇ ತೆರೆಯಲಾಗಿದೆ. ಸ್ವಂತ ಉದ್ಯೋಗ ಆಧಾರಿತ ಈ ವಿದ್ಯಾಭ್ಯಾಸ ಕಾರ್ಯಕ್ರಮವು ದೇಶದ 70 ದಶಲಕ್ಷ ಬುಡಕಟ್ಟು ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಆರಂಭಿಕ ಹೆಜ್ಜೆ ಮಾತ್ರ ಎಂದು ಪರಿಷತ್ತಿನ ಕಾರ್ಯದರ್ಶಿ ಹೇಳಿದರು.
ಬುಡಕಟ್ಟು ಜನರ ಇಷ್ಟೊಂದು ದೊಡ್ಡ ಸಮುದಾಯದಲ್ಲಿ ಓದು-ಬರಹ ಬಲ್ಲವರ ಸಂಖ್ಯೆ ಪ್ರತಿಶತ 8 ಮಾತ್ರ. ಬಡವರು, ಓದುಬರಹ ಗೊತ್ತಿಲ್ಲದವರು ದೇಶವಿರೋಧಿ ಶಕ್ತಿಗಳಿಗೆ ಸುಲಭವಾಗಿ ಈಡಾಗಿಬಿಡುತ್ತಾರೆ ಎಂದ ರಾಘವುಲು, ಏಕಾಲ್ ಶಾಲೆ ಮತ್ತು ಗ್ರಾಮ ರಕ್ಷಕ ಸಮಿತಿಗಳು ಇಂಥ ಆಕ್ರಮಣಗಳನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಿರುತ್ತವೆ ಎಂದು ಸಮರ್ಥಿಸಿಕೊಂಡರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications