ನಗೆ ಸಪ್ತಾಹದ ಹೂವು: ಚುಟುಕ ತಂದವರು ಜ್ಯೋತಿ ಮಹಾದೇವ್!

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಜ್ಯೋತಿ ಮಹಾದೇವ್ ಅವರ -'ನಾಲ್ಕು ಹನಿಗವನಗಳು"
ನಾಲ್ಕು ಹನಿಗವನಗಳು*ಜ್ಯೋತಿ ಮಹಾದೇವ್, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ
ಶ್ರೀ ಗುರುಭ್ಯೋ ನಮಃ
ನಮ್ಮೀ ಸಹೃದಯ ಮೇಷ್ಟ್ರು, ಭಾಳಾ ಸ್ಟ್ರಿಕ್ಟು,
ಮೊಂಡುತನದ ವಿದ್ಯಾರ್ಥಿಯನ್ನೂ ಹಿಡಿದಿಟ್ಟು-
ಹೋಂ-ವರ್ಕ್ ಮಾಡಿಸುವ ಘಟ್ಟಿತನದ ಗುಟ್ಟು ,
ಶ್ರೀ ಹರಿ-ಗುರು ಅವರೊಬ್ಬರಿಗೇ ಗೊತ್ತು .
ಬೆಕ್ಕಿನ ಕೊರಳಿಗೆ ಗಂಟೆ
ಪಕ್ಕದಲ್ಲೊಬ್ಬ ಗಂಡ,
ಮಡಿಲಲ್ಲೊಬ್ಬ ಗುಂಡ,
'ಓಹ್! ಜೀವನ ಸಾರ್ಥಕ!" ಅನ್ಕೊಂಡ್ರೆ-
ಹೆಣ್ಣೇ, ಬಾಳು ದಂಡ!!
ನಮ್ಮ ಬೆನ್ನ ಮೇಲೆ...
ಕನ್ನಡ ಕೂಟದ ಕಾರ್ಯಕ್ರಮ,
ಬಣ್ಣದ ಲೋಕದ ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ ನಡುವೆ-
ವೇದಿಕೆ ಮೇಲೆ ಏನಾಗ್ತಿದೆ, ಸ್ವಲ್ಪ ಹೇಳಮ್ಮ !
ಕಾರಣ
ಮದುವೆ ಛತ್ರದಲ್ಲಿ ಭಾರೀ ಸಡಗರ,
ಅಲ್ಲೊಂದು ಹೆಣ್ಣಿಲಿಗೊ, ಏನೋ ಮುಜುಗರ,
ಊಟದ್ಮನೆ ದಾಟ್ಕೊಂಡು ಉಗ್ರಾಣಕ್ಹೋಗ್ಬೇಕು,
ಭರ್ಜರಿ ಜರಿ ಸೀರೆ ಉಟ್ಟಿಲ್ಲಾಂತ ಅದಕ್ಕೆ ಬೇಸರ.
More From
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications