ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆ ಸಪ್ತಾಹದ ಹೂವು: ಚುಟುಕ ತಂದವರು ಜ್ಯೋತಿ ಮಹಾದೇವ್‌!

By Super Admin
|
Google Oneindia Kannada News

Jyothi Mahadev
ಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಶೇಷವೇ'ಚೈತ್ರೋಲ್ಲಾಸ". 500 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದ ಈ ಕಾರ್ಯಕ್ರಮದ ಹೈಲೈಟ್‌ 'ಕವಯತ್ರಿಯರ ಹಾಸ್ಯ ಕವಿಗೋಷ್ಠಿ ". ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಯುಗಾದಿ ಸಂಜೆಗೆ ಹಾಸ್ಯದ ಘಮಲೇರಿಸಿದರು. ಅಲಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯನ್ನು ನಾಗಲಕ್ಷ್ಮಿ ಅವರು ಕವಿತೆ ಓದುವುದರೊಂದಿಗೆ ಉದ್ಘಾಟಿಸಿದರು.

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಜ್ಯೋತಿ ಮಹಾದೇವ್‌ ಅವರ -'ನಾಲ್ಕು ಹನಿಗವನಗಳು"

ನಾಲ್ಕು ಹನಿಗವನಗಳು*ಜ್ಯೋತಿ ಮಹಾದೇವ್‌, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ

ಶ್ರೀ ಗುರುಭ್ಯೋ ನಮಃ
ನಮ್ಮೀ ಸಹೃದಯ ಮೇಷ್ಟ್ರು, ಭಾಳಾ ಸ್ಟ್ರಿಕ್ಟು,
ಮೊಂಡುತನದ ವಿದ್ಯಾರ್ಥಿಯನ್ನೂ ಹಿಡಿದಿಟ್ಟು-
ಹೋಂ-ವರ್ಕ್‌ ಮಾಡಿಸುವ ಘಟ್ಟಿತನದ ಗುಟ್ಟು ,
ಶ್ರೀ ಹರಿ-ಗುರು ಅವರೊಬ್ಬರಿಗೇ ಗೊತ್ತು .

ಬೆಕ್ಕಿನ ಕೊರಳಿಗೆ ಗಂಟೆ
ಪಕ್ಕದಲ್ಲೊಬ್ಬ ಗಂಡ,
ಮಡಿಲಲ್ಲೊಬ್ಬ ಗುಂಡ,
'ಓಹ್‌! ಜೀವನ ಸಾರ್ಥಕ!" ಅನ್ಕೊಂಡ್ರೆ-
ಹೆಣ್ಣೇ, ಬಾಳು ದಂಡ!!

ನಮ್ಮ ಬೆನ್ನ ಮೇಲೆ...
ಕನ್ನಡ ಕೂಟದ ಕಾರ್ಯಕ್ರಮ,
ಬಣ್ಣದ ಲೋಕದ ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ ನಡುವೆ-
ವೇದಿಕೆ ಮೇಲೆ ಏನಾಗ್ತಿದೆ, ಸ್ವಲ್ಪ ಹೇಳಮ್ಮ !

ಕಾರಣ
ಮದುವೆ ಛತ್ರದಲ್ಲಿ ಭಾರೀ ಸಡಗರ,
ಅಲ್ಲೊಂದು ಹೆಣ್ಣಿಲಿಗೊ, ಏನೋ ಮುಜುಗರ,
ಊಟದ್ಮನೆ ದಾಟ್ಕೊಂಡು ಉಗ್ರಾಣಕ್ಹೋಗ್ಬೇಕು,
ಭರ್ಜರಿ ಜರಿ ಸೀರೆ ಉಟ್ಟಿಲ್ಲಾಂತ ಅದಕ್ಕೆ ಬೇಸರ.

;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X