ನಗೆ ಸಪ್ತಾಹದ ಹೂವು: ಚುಟುಕ ತಂದವರು ಜ್ಯೋತಿ ಮಹಾದೇವ್!

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಜ್ಯೋತಿ ಮಹಾದೇವ್ ಅವರ -'ನಾಲ್ಕು ಹನಿಗವನಗಳು"
ನಾಲ್ಕು ಹನಿಗವನಗಳು*ಜ್ಯೋತಿ ಮಹಾದೇವ್, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ
ಶ್ರೀ ಗುರುಭ್ಯೋ ನಮಃ
ನಮ್ಮೀ ಸಹೃದಯ ಮೇಷ್ಟ್ರು, ಭಾಳಾ ಸ್ಟ್ರಿಕ್ಟು,
ಮೊಂಡುತನದ ವಿದ್ಯಾರ್ಥಿಯನ್ನೂ ಹಿಡಿದಿಟ್ಟು-
ಹೋಂ-ವರ್ಕ್ ಮಾಡಿಸುವ ಘಟ್ಟಿತನದ ಗುಟ್ಟು ,
ಶ್ರೀ ಹರಿ-ಗುರು ಅವರೊಬ್ಬರಿಗೇ ಗೊತ್ತು .
ಬೆಕ್ಕಿನ ಕೊರಳಿಗೆ ಗಂಟೆ
ಪಕ್ಕದಲ್ಲೊಬ್ಬ ಗಂಡ,
ಮಡಿಲಲ್ಲೊಬ್ಬ ಗುಂಡ,
'ಓಹ್! ಜೀವನ ಸಾರ್ಥಕ!" ಅನ್ಕೊಂಡ್ರೆ-
ಹೆಣ್ಣೇ, ಬಾಳು ದಂಡ!!
ನಮ್ಮ ಬೆನ್ನ ಮೇಲೆ...
ಕನ್ನಡ ಕೂಟದ ಕಾರ್ಯಕ್ರಮ,
ಬಣ್ಣದ ಲೋಕದ ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ ನಡುವೆ-
ವೇದಿಕೆ ಮೇಲೆ ಏನಾಗ್ತಿದೆ, ಸ್ವಲ್ಪ ಹೇಳಮ್ಮ !
ಕಾರಣ
ಮದುವೆ ಛತ್ರದಲ್ಲಿ ಭಾರೀ ಸಡಗರ,
ಅಲ್ಲೊಂದು ಹೆಣ್ಣಿಲಿಗೊ, ಏನೋ ಮುಜುಗರ,
ಊಟದ್ಮನೆ ದಾಟ್ಕೊಂಡು ಉಗ್ರಾಣಕ್ಹೋಗ್ಬೇಕು,
ಭರ್ಜರಿ ಜರಿ ಸೀರೆ ಉಟ್ಟಿಲ್ಲಾಂತ ಅದಕ್ಕೆ ಬೇಸರ.
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications