ರಾಮ-ಸೀತೆ : ಒಂದು ಸಂಸಾರ ಸಾಗರದ ಕತೆ

ರಾವಣ ಸಂಹಾರದ ವಿಜಯಭಾವದಿಂದ ಪಟ್ಟಾಭಿಷೇಕದ ನಂತರ ಸೀತಾರಾಮರ ಅರಮನೆಯ ಜೀವನ ಕೆಲವು ವರ್ಷಗಳು ತುಂಬಾ ಚೆನ್ನಾಗಿಯೇ ಇತ್ತಂತೆ. ಅಗ್ನಿಪರೀಕ್ಷೆ ಎದುರಿಸಿಯೇ ಸೀತೆಯೆನಿಸಿದ್ದರೂ ಅವಳೂ ಹೆಣ್ಣಲ್ಲವೆ? ಈ ಸಂದರ್ಭದಲ್ಲಿ ಅವಳ ಸಚ್ಚಾರಿತ್ರ್ಯದ ಬಗ್ಗೆ ಅಯೋಧ್ಯಾ ಜನಮಾನಸದಲ್ಲಿ ಗುಸುಗುಸು. ಗಾಸಿಪ್ ಅಂತಾರಲ್ಲ ಅದು.
ರಾಜಧರ್ಮವೇ ಶ್ರೇಷ್ಠ ಪಾಲನೆಯೆಂದರಿತಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕಿವಿಗೆ ಇದು ಬೀಳದೆ ಇರುತ್ತದೆಯೇ? ಅರೆಘಳಿಗೆಯೂ ಧರ್ಮಭ್ರಷ್ಟನಾಗಲಾರದ ಯಜಮಾನ ಅವನು. ಜನರ ಮಾತು ಜನಾರ್ಧನನ ಆಜ್ಞೆ. ಇನ್ನೊಂದಷ್ಟೇ ಹಗಲುಗಳಲ್ಲಿ ರಾಮವಂಶದ ಕುಡಿಗೆ ಜನ್ಮನೀಡಲಿದ್ದ ಸೀತೆ ಆ ಕ್ಷಣದಲ್ಲಿ ಕೇವಲ ಧರ್ಮಪತ್ನಿ. ಅರೆಘಳಿಗೆಯೂ ನಿಧಾನಿಸಲಾರದೆ ರಾಮ ಅವಳನ್ನು ಕಾಡಿನ ಮಡಿಲಿಗೆ ಹಾಕಿಬಿಟ್ಟಿದ್ದ.
ವಾಲ್ಮಿಕಿ ಆಶ್ರಮದ ಆಶ್ರಯದಲ್ಲಿ ಸೀತೆಯ ಗರ್ಭದಿಂದುದಯಿಸಿದ ಮಕ್ಕಳು ಲವ ಕುಶ. ಬಾಲ್ಯದಿಂದಲೂ ವಾಲ್ಮೀಕಿಯ ಶಿಷ್ಯತ್ವದ ಸುಖ ಕಂಡವರು. ಕುಲಮೂಲವನ್ನರಿಯದೆ ಲವ ಕುಶರು ಅಸ್ತಿತ್ವವನ್ನು ಕಂಡುಕೊಂಡಿದ್ದು ವಾಲ್ಮೀಕಿಯಿಂದ. ರಾಮಕಥಾ ಚರಿತಾಮೃತವನ್ನು ರಾಗಬದ್ಧವಾಗಿ ಪಲುಕಲು ಕಲಿತ್ತಿದ್ದ ಅವಳಿ ಜವಳಿ ಮಕ್ಕಳು ಅವರಾಗಿದ್ದರು.
ರಾಮನ ಅಶ್ವಮೇಧ ಯಾಗದ ಸಂದರ್ಭ. ಸಾಗರೋಪಾದಿಯಲ್ಲಿ ನೆರೆದ ಜನರೆದುರು ಮಕ್ಕಳು ರಾಮಾಯಣದ ಗಾನಸುಧೆ ಹರಿಸಿದ್ದಾಗ, ಸೀತೆಯು ಅರಣ್ಯಪಾಲಾದ ಸಾಲುಗಳಿಗೆ ರಾಮ ಗದ್ಗದಿತನಾಗುತ್ತಾನೆ. ಆಗ, ವಾಲ್ಮೀಕಿಯು ಸೀತೆಯನ್ನು ತೋರುತ್ತಾರೆ. ಪತ್ನಿಯಾಗಿರದ, ತಾಯಿಯಾಗಿರಲೊಲ್ಲದ ಸೀತೆ “ಭೂಮಾತೆ ಬಾಯ್ಬಿಡಲೊಲ್ಲೆಯೇಕೆ?" ಎಂದು ಆರ್ತಳಾಗಿದ್ದೆ ತಡ, ಇಬ್ಭಾಗವಾದ ಧರಿತ್ರಿ ಜಾನಕಿಯನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾಳೆ.
ಸೀತೆ ಇನ್ನಿಲ್ಲವೆಂದಾದ ಮೇಲೆ ಲವ ಕುಶರು ತನ್ನ ಮಕ್ಕಳು ಎನ್ನುವ ಜ್ಞಾನೋದಯ ಶ್ರೀರಾಮನಿಗೆ ಉಂಟಾಗುತ್ತದೆ. ಅದೇ ಸಮಯಕ್ಕೆ ದೇವದೂತರ ಅಶರೀರವಾಣಿಯಿಂದ ರಾಮಾವತಾರದ ಉದ್ದೇಶ ಸಫಲವಾಗಿದ್ದು ತಿಳಿದುಬರುತ್ತೆ. ಅವತಾರಪುರುಷ ಶ್ರೀರಾಮಚಂದ್ರ ವೈಕುಂಠಕ್ಕೆ ಮರಳುತ್ತಾನೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications