ರಾಮ-ಸೀತೆ : ಒಂದು ಸಂಸಾರ ಸಾಗರದ ಕತೆ

ರಾವಣ ಸಂಹಾರದ ವಿಜಯಭಾವದಿಂದ ಪಟ್ಟಾಭಿಷೇಕದ ನಂತರ ಸೀತಾರಾಮರ ಅರಮನೆಯ ಜೀವನ ಕೆಲವು ವರ್ಷಗಳು ತುಂಬಾ ಚೆನ್ನಾಗಿಯೇ ಇತ್ತಂತೆ. ಅಗ್ನಿಪರೀಕ್ಷೆ ಎದುರಿಸಿಯೇ ಸೀತೆಯೆನಿಸಿದ್ದರೂ ಅವಳೂ ಹೆಣ್ಣಲ್ಲವೆ? ಈ ಸಂದರ್ಭದಲ್ಲಿ ಅವಳ ಸಚ್ಚಾರಿತ್ರ್ಯದ ಬಗ್ಗೆ ಅಯೋಧ್ಯಾ ಜನಮಾನಸದಲ್ಲಿ ಗುಸುಗುಸು. ಗಾಸಿಪ್ ಅಂತಾರಲ್ಲ ಅದು.
ರಾಜಧರ್ಮವೇ ಶ್ರೇಷ್ಠ ಪಾಲನೆಯೆಂದರಿತಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕಿವಿಗೆ ಇದು ಬೀಳದೆ ಇರುತ್ತದೆಯೇ? ಅರೆಘಳಿಗೆಯೂ ಧರ್ಮಭ್ರಷ್ಟನಾಗಲಾರದ ಯಜಮಾನ ಅವನು. ಜನರ ಮಾತು ಜನಾರ್ಧನನ ಆಜ್ಞೆ. ಇನ್ನೊಂದಷ್ಟೇ ಹಗಲುಗಳಲ್ಲಿ ರಾಮವಂಶದ ಕುಡಿಗೆ ಜನ್ಮನೀಡಲಿದ್ದ ಸೀತೆ ಆ ಕ್ಷಣದಲ್ಲಿ ಕೇವಲ ಧರ್ಮಪತ್ನಿ. ಅರೆಘಳಿಗೆಯೂ ನಿಧಾನಿಸಲಾರದೆ ರಾಮ ಅವಳನ್ನು ಕಾಡಿನ ಮಡಿಲಿಗೆ ಹಾಕಿಬಿಟ್ಟಿದ್ದ.
ವಾಲ್ಮಿಕಿ ಆಶ್ರಮದ ಆಶ್ರಯದಲ್ಲಿ ಸೀತೆಯ ಗರ್ಭದಿಂದುದಯಿಸಿದ ಮಕ್ಕಳು ಲವ ಕುಶ. ಬಾಲ್ಯದಿಂದಲೂ ವಾಲ್ಮೀಕಿಯ ಶಿಷ್ಯತ್ವದ ಸುಖ ಕಂಡವರು. ಕುಲಮೂಲವನ್ನರಿಯದೆ ಲವ ಕುಶರು ಅಸ್ತಿತ್ವವನ್ನು ಕಂಡುಕೊಂಡಿದ್ದು ವಾಲ್ಮೀಕಿಯಿಂದ. ರಾಮಕಥಾ ಚರಿತಾಮೃತವನ್ನು ರಾಗಬದ್ಧವಾಗಿ ಪಲುಕಲು ಕಲಿತ್ತಿದ್ದ ಅವಳಿ ಜವಳಿ ಮಕ್ಕಳು ಅವರಾಗಿದ್ದರು.
ರಾಮನ ಅಶ್ವಮೇಧ ಯಾಗದ ಸಂದರ್ಭ. ಸಾಗರೋಪಾದಿಯಲ್ಲಿ ನೆರೆದ ಜನರೆದುರು ಮಕ್ಕಳು ರಾಮಾಯಣದ ಗಾನಸುಧೆ ಹರಿಸಿದ್ದಾಗ, ಸೀತೆಯು ಅರಣ್ಯಪಾಲಾದ ಸಾಲುಗಳಿಗೆ ರಾಮ ಗದ್ಗದಿತನಾಗುತ್ತಾನೆ. ಆಗ, ವಾಲ್ಮೀಕಿಯು ಸೀತೆಯನ್ನು ತೋರುತ್ತಾರೆ. ಪತ್ನಿಯಾಗಿರದ, ತಾಯಿಯಾಗಿರಲೊಲ್ಲದ ಸೀತೆ “ಭೂಮಾತೆ ಬಾಯ್ಬಿಡಲೊಲ್ಲೆಯೇಕೆ?" ಎಂದು ಆರ್ತಳಾಗಿದ್ದೆ ತಡ, ಇಬ್ಭಾಗವಾದ ಧರಿತ್ರಿ ಜಾನಕಿಯನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾಳೆ.
ಸೀತೆ ಇನ್ನಿಲ್ಲವೆಂದಾದ ಮೇಲೆ ಲವ ಕುಶರು ತನ್ನ ಮಕ್ಕಳು ಎನ್ನುವ ಜ್ಞಾನೋದಯ ಶ್ರೀರಾಮನಿಗೆ ಉಂಟಾಗುತ್ತದೆ. ಅದೇ ಸಮಯಕ್ಕೆ ದೇವದೂತರ ಅಶರೀರವಾಣಿಯಿಂದ ರಾಮಾವತಾರದ ಉದ್ದೇಶ ಸಫಲವಾಗಿದ್ದು ತಿಳಿದುಬರುತ್ತೆ. ಅವತಾರಪುರುಷ ಶ್ರೀರಾಮಚಂದ್ರ ವೈಕುಂಠಕ್ಕೆ ಮರಳುತ್ತಾನೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications