ದೀಪಾವಳಿಗೆ ನಿಮ್ಮ ಮನೆಯಲ್ಲಿ ಏನು ಸ್ಪೆಷಲ್?

ಯಾವುದೇ ಸಮಾರಂಭವನ್ನು ನೆನಪಿಸಿಕೊಳ್ಳುವುದು ಅಂದು ಹೊಟ್ಟೆಸೇರಿದ ರುಚಿಯಾದ ಭೋಜನದಿಂದ. 'ಹೋಳಿಗೆ ಯಾವಾಗ ಹಾಕಿಸ್ತಿಯಾ'ದಿಂದ ಹಿಡಿದು 'ಅವತ್ತು ನಿಮ್ಮ ಅಮ್ಮ ಮಾಡಿದ ಹೋಳಿಗೆ, ಕಟ್ಟಿನ ಸಾರು ಸಖತ್ತಾಗಿತ್ತಮ್ಮ' ಎಂಬವರೆಗೆ ಮಾತುಗಳಲ್ಲೇ ಸಮಾರಂಭಗಳನ್ನು ಅಳೆದುತೂಗುವರು ಜಾಸ್ತಿ.
ಇನ್ನು ದೀಪಾವಳಿಯ ಸಂದರ್ಭದಲ್ಲಿ ನರಕ ಚತುರ್ದಶಿ, ಮಹಾಲಯ ಅಮವಾಸ್ಯೆ ಮತ್ತು ಬಲಿ ಪಾಡ್ಯಮಿ ಮೂರು ದಿನಗಳ ಕಾಲ, ಮನೆಯಲ್ಲಿ, ನೆಂಟರಿಷ್ಟರಲ್ಲಿ ಭೋಜನಗಳದ್ದೇ ಕಾರುಬಾರು. ಚಟಪಟ ಪಟಾಕಿಗಳು ಹೊರಗಡೆ ಸಿಡಿಯುತ್ತಿರುವಾಗ, ಒಳಗಡೆ ಮಾತಿನ ಚಟಾಕಿ ಹಾರಿಸಿಕೊಂಡು ಚುರುಗುಟ್ಟುವ ಹೊಟ್ಟೆಗೆ ಹೋಳಿಗೆ ಊಟ ಇಳಿಸುತ್ತಿದ್ದರೆ ಆ ಆನಂದವೇ ಬೇರೆ.
ದೀಪಾವಳಿಯ ಮೊದಲ ದಿನ ಸೂರ್ಯ ತನ್ನ ಕಿರಣಗಳನ್ನು ಭೂಮಿಯ ಮೇಲೆ ಬೀಳಿಸುವ ಮುನ್ನವೇ ಹಿಂದೂ ಧರ್ಮೀಯರ ಮನೆಯಲ್ಲಿ ಹೊಸಬಟ್ಟೆ ತೊಟ್ಟ ಕುಟುಂಬದವರಿಗೆಲ್ಲ ಆರತಿ ಮಾಡುವ ಪದ್ಧತಿಯಿದೆ. ನಂತರ ಅಭ್ಯಂಜನ ಮಾಡಿದ ಮೇಲೆ ನೆಂಟರಿಷ್ಟರನ್ನು ಮನೆಗೆ ಕರೆದು ವೈವಿಧ್ಯಮಯ ತಿಂಡಿತಿನಿಸುಗಳನ್ನು ಮಾಡಿ ಸಂತುಷ್ಟಗೊಳಿಸುವ ಪರಿಪಾಠವೂ ಬೆಳೆದುಕೊಂಡು ಬಂದಿದೆ.
ಬೇಸನ್ ಉಂಡೆ, ಕೋಡುಬಳೆ, ಚಕ್ಕುಲಿ, ಕರ್ಚಿಕಾಯಿ, ಉಪ್ಪಿಟ್ಟು, ಸಿರಾ, ಅವಲಕ್ಕಿ, ಚಟ್ನಿಪುಡಿ, ಜೊತೆಗೊಂದಿಷ್ಟು ಮೊಸರು ಎಲ್ಲ ತಯಾರಿಸಿ ಬಾಳೆಎಲೆಯ ಮೇಲೆ ಕುಳಿತು ಪಟ್ಟಾಗಿ ತಿಂಡಿ ಬಡಿಸುತ್ತಾರೆ. ಬೆಳಕಿನ ಜೊತೆ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು, ಹೊಟ್ಟೆತುಂಬ ಉಂಡು ಬಂಧುಬಳಗದೊಂದಿಗೆ ಹರ್ಷದ ಕ್ಷಣಗಳನ್ನು ಕಳೆಯುವುದು ಈ ಸಮಾವೇಶಗಳ ಮೂಲ ಉದ್ದೇಶ.
ವರುಷಕ್ಕೊಮ್ಮೆ ಬೆಳಕನ್ನೀಯುವ ದೀಪಾವಳಿ ಎಂದ ಮೇಲೆ ವಿಶೇಷ ತಿಂಡಿ ತಿನಿಸು ಇರಲೇಬೇಕು. ಆದರೆ ಈ ಬಾರಿ ದೀಪಾವಳಿಗೆ ವಿಶೇಷವಾಗಿ, ವಿಭಿನ್ನವಾಗಿ ಏನನ್ನು ತಯಾರಿಸಬಹುದು ಎಂದು ನೀವು ಯೋಚಿಸುತ್ತಿದ್ದರೆ ನಿಮಗೆ ಅನುವು ಮಾಡಿಕೊಡಲೆಂದು ನಾಲ್ಕು ಬಗೆಯ ಅಡುಗೆಗಳು ಕಾದಿವೆ. ಅವೇನೆಂದು ಕಾದುನೋಡಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications