ವಿಶ್ವಯುದ್ಧವನ್ನೆಲ್ಲ ನೋಡಿಬಂದ ಇಡ್ಲಿ, ನಿನ್ನ ಮಹಿಮೆ ನಾನೆಂತು ಪೇಳಲಿ!
"ಬೆಳಗ್ಗೆ ತಿಂಡಿಗೆ ಇಡ್ಲಿಯಾದೆ, ಸಂಜೆ ಸ್ನ್ಯಾಕ್ಸಿಗೆ ಬೋಂಡಾವಾದೆ... ರಾತ್ರಿ ಊಟಕ್ಕೆ ಉಪ್ಪಿಟ್ಟಾದೆ... ನೀ ಯಾರಿಗಾದೆಯೋ...." ಹೌದು, ಇದು ಮಲ್ಲಿಗೆ ಬಣ್ಣದ ಇಡ್ಲಿಯ ಮಹಿಮೆ.
ಬೆಳಗ್ಗೆ ತಿಂಡಿಗೆ ಮೂಲರೂಪದಲ್ಲಿ ಇಡ್ಲಿಯೇ ಆದರೂ, ಸಂಜೆಯಾಗುತ್ತ ರೂಪಾಂತರವಾಗಿ ಇಡ್ಲಿ ಬೋಂಡಾ, ಇಡ್ಲಿ ಉಪ್ಪಿಟ್ಟು ಎಂದೆಲ್ಲ ಬದಲಾಗಿ ನಾಲಿಗೆಗೆ ಮತ್ತಷ್ಟು ರುಚಿ ನೀಡುವ ಇಡ್ಲಿಯ ಮಹಿಮೆ, ರುಚಿ ಬಲ್ಲವನೇ ಬಲ್ಲ!
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಾರ್ಚ್ 30 ವಿಶ್ವ ಇಡ್ಲಿ ದಿನವಂತೆ! ಭಾರತದ, ಅದರಲ್ಲೂ ದಕ್ಷಿಣ ಭಾರತದ ಈ ರುಚಿಕರ ಖಾದ್ಯ ಅದರಕ್ಕೂ ಸಿಹಿ, ಉದರಕ್ಕೂ ಸಿಹಿ ಎಂಬ ಕಾರಣಕ್ಕೆ ಮತ್ತಷ್ಟು ಜನಪ್ರಿಯತೆ ಗಳಿಸಿದೆ.
ತೀರಾ ಹಸಿವಾಗಿ ಹೊಟೆಲ್ ಗೆ ಕಾಲಿಟ್ಟರೆ ಸುರಕ್ಷಿತ ಆಹಾರ ಎನ್ನಿಸುವ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣುವ ಹೆಸರು ಇಡ್ಲಿಯದ್ದೇ! "ಮೈಯಲ್ಲಿ ಹುಷಾರಿಲ್ಲ, ಹಾಳು-ಮೂಳು ತಿನ್ನೋದು ಬೇಡ" ಅಂದಾಗ ಥಟ್ಟಂಥ ನೆನಪಾಗೋದು ಇದೇ ಇಡ್ಲಿ! ಆಸ್ಪತ್ರೆ ಸೇರಿರುವ ಪೇಶಂಟಿಗೂ ವೈದ್ಯರು ಸಲಹೆ ನೀಡುವ ತಿಂಡಿಯೂ ಇಡ್ಲಿಯೇ! ನಾಳೆ ಏನು ತಿಂಡಿ ಮಾಡ್ಲಿ ಎಂದು ತಲೆಕೆಡಿಸಿಕೊಳ್ಳುವಾಗ ಅತ್ಯಂತ ಸುಲಭ ಖಾದ್ಯವಾಗಿ ಕಾಣೋದು ಈ ಇಡ್ಲಿ ಸಾಂಬಾರೇ!
ಇಂಥ ಇಡ್ಲಿ, ಆಧುನಿಕ ಯುಗದಲ್ಲಿ ಮೊಟ್ಟ ಮೊದಲಬಾರಿಗೆ ಚಾಲ್ತಿಗೆ ಬಂದಿದ್ದು ವಿಶ್ವಯುದ್ಧದಲ್ಲಿ ಎಂದರೆ ನಂಬುತ್ತೀರಾ? ವಿಶ್ವಯುದ್ಧದ ಸಮಯದಲ್ಲಿ ಅಕ್ಕಿಯ ಪೂರೈಕೆ ಹೆಚ್ಚಿಲ್ಲದ ಕಾರಣ, ಅಕ್ಕಿಗೆ ಪರ್ಯಾಯವಾಗಿ ಕಂಡಿದ್ದು ಇಡ್ಲಿ! ಆಗಿನಿಂದ ಆಹಾರ ಸಂಸ್ಕೃತಿಯ ಪಯಣದಲ್ಲಿ ಆರಂಭವಾದ ಇಡ್ಲಿಯ ಜೈತ್ರಯಾತ್ರೆ ಇಂದಿಗೂ ಮುಗಿದಿಲ್ಲ... ಆಹಾರ ಸಂಸ್ಕೃತಿಯ ಅನಭಿಷಿಕ್ತ ದೊರೆಯಾಗಿ ಇಂದಿಗೂ ಇಡ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಇಂದಿನ ಇಡ್ಲಿ ದಿನ ಟ್ವಿಟ್ಟರ್ ನಲ್ಲೂ ಟಾಪ್ ಟ್ರೆಂಡಿಂಗ್ ಆಗಿದ್ದು, ಇಡ್ಲಿ ಪ್ರಿಯರು ವಿಶ್ವ ಇಡ್ಲಿದಿನಕ್ಕೆ ಶುಭಾಶಯ ಕೋರಿದ್ದಾರೆ!
| Array |
ಭಾರತದ ಎವ್ವರ್ ಗ್ರೀನ್ ತಿಂಡಿ!
ಕೆಲವರು ಇಡ್ಲಿಯನ್ನು ಅರಬ್ ವ್ಯಾಪಾರಿಗಳು ಭಾರತಕ್ಕೆ ತಂದರು ಎನ್ನುತ್ತಾರೆ, ಇನ್ನು ಕೆಲವರು ಇಡ್ಲಿ ಇಂಡೋನೇಶ್ಯಾದಿಂದ ಶುರುವಾಯ್ತು ಎನ್ನುತ್ತಾರೆ. ಅದೇನೇ ಇದ್ದಿರಲಿ, ಇಡ್ಲಿಯಂತೂ ಭಾರತದ ಎಂದಿನ ನೆಚ್ಚಿನ ಖಾದ್ಯವಾಗಿ ನಮ್ಮ ಬಾಯಲ್ಲಿ ನೀರೂರಿಸಿದೆ- ಗೀತಿಕಾ ಸ್ವಾಮಿ
|
ಬೆಂಗಳೂರಿನ ಐದು ಇಡ್ಲಿ ಹೊಟೇಲ್
ಈ ಇಡ್ಲಿದಿನದಂದು ಬೆಂಗಳೂರು ಐದು ಅತ್ಯುತ್ತಮ ಇಡ್ಲಿ ಹೊಟೇಲ್ ಗಳನ್ನು ನಾನು ಪಟ್ಟಿ ಮಾಡುತ್ತೇನೆ.
ಸುವರ್ಣ ಇಡ್ಲಿ, ರಾಜಾಜೀನಗರ
ತಾಜಾ ತಿಂಡಿ, ಜಯನಗರ
ಬ್ರಾಹ್ಮಿನ್ಸ್, ಶಂಕರಪುರ
ಐಡಿಸಿ ಕಿಚನ್, ಗಾಂಧಿನಗರ
ಹೊಟೆಲ್ ಹೊಯ್ಸಳ, ಶೇಷಾದ್ರಿಪುರಂ
ಎಂದು ತೇಜಮ್ಮ ಎಂಬುವವರು ಪಟ್ಟಿ ಮಾಡಿದ್ದಾರೆ.
|
ಆಹಾರಗಳ ರಾಜ!
ಇಂದು ಇಡ್ಲಿದಿನ- ಆಹಾರಗಳ ರಾಜನ ದಿನ! ನಾಣು ಎಂದಿಗೂ ಇಡ್ಲಿ ಇಲ್ಲದೆ ದಿನವನ್ನು ಆರಂಭಿಸೋಲ್ಲ ಎಂದಿದ್ದಾರೆ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್.
|
ಪ್ರತಿದಿನ ತಿಂದರೂ ಬೇಜಾರಿಲ್ಲ!
ಇಡ್ಲಿ ಮಾತ್ರವೇ ಪ್ರತಿದಿನವೂ ತಿಂದರೂ ಬೇಜಾರಾಗದ ತಿಂಡಿ. ವಿಶ್ವ ಇಡ್ಲಿದಿನದ ಶುಭಾಶಯಗಳು ಎಂದಿದ್ದಾರೆ ಶಿಲ್ಪಾ ಚಾವ್ಲಾ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications