ಮನೆ ಕೆಲಸ ಮಾಡಿದ ಪತ್ನಿಗೆ ಪತಿಯಿಂದ 76 ಲಕ್ಷ ರೂಪಾಯಿ ಸಂಬಳ
ರಜೆ ಇಲ್ಲದೇ ದುಡಿಯುವ ಕೆಲಸ ಎಂದರೆ ಅದು ಗೃಹಿಣಿ. ವಾರದ ಏಳೂ ದಿನಗಳು ಕರ್ತವ್ಯ ಎಂದುಕೊಂಡು ಮನೆಯ ಕೆಲಸಗಳನ್ನು ಮಾಡುವ ಮಹಿಳೆಗೆ ಸಂಬಳ ಬೇಡವೇ..? ಅಡುಗೆ ಮಾಡುವುದು, ಮಕ್ಕಳ ಪಾಲನೆ ಪೋಷಣೆ ಮಾಡುವುದು, ಮನೆಯವರ ಬೇಕು ಬೇಡಗಳನ್ನು ನೋಡಿಕೊಳ್ಳುವದು, ಬೆಲೆ ಹೆಚ್ಚಾದರೂ, ಕಡಿಮೆಯಾದರೂ ಮನೆಯಲ್ಲಿ ಏನೂ ಕೊರತೆಯಾಗದಂತೆ ನೋಡಿಕೊಳ್ಳುವುದು, ಹೀಗೆ ಗೃಹಿಣಿಯ ಕರ್ತವ್ಯ ಒಂದಾ..ಎರಡಾ..?
ಒಳ್ಳೆ ಉದ್ಯೋಗದಲ್ಲಿರುವ ಮಹಿಳೆಯರು ಮದುವೆಯಾದ ಬಳಿಕ ಮನೆ ಜವಾಬ್ದಾರಿ ಎಂದು ಕೆಲಸ ಬಿಡುತ್ತಾರೆ. ಗಂಡ, ಮಕ್ಕಳನ್ನು ನೋಡಿಕೊಳ್ಳಬೇಕು, ಅವರಿಗೆ ಬೇಕಾದುದನೆಲ್ಲಾ ಸಮಯಕ್ಕೆ ಸರಿಯಾಗಿ ಒದಗಿಸಬೇಕು ಎನ್ನುವ ಕಾರಣಕ್ಕೆ ಕೈಯಲ್ಲಿರುವ ಕೆಲಸ ಬಿಟ್ಟು ಸಂಪೂರ್ಣವಾಗಿ ಮನೆ ಹಾಗೂ ಮನೆ ಮಂದಿಯ ಜವಾಬ್ದಾರಿ ವಹಿಸಿಕೊಳ್ಳು ಗೃಹಿಣೆಗೆ ಸಂಬಳ ಬೇಡವೇ..? ಎನ್ನುವುದು ಕೊನೆ ಇಲ್ಲದ ಚರ್ಚೆ.

ತಾನು ಮನೆಕೆಲಸದವಳಂತೆ ದುಡಿಯುತ್ತಿದ್ದೇನೆ. ವಾರದ ಏಳೂ ದಿನವೂ ರಜೆ ಇಲ್ಲದೇ , ಸಂಬಳವಿಲ್ಲದೆ ದುಡಿಯುತ್ತೇನೆ, ನನಗೆ ಸಂಬಳ ಕೊಡಿ ಎಂದು ನೇರವಾಗಿ ಕೇಳುವ ಮಹಿಳೆಯರಿದ್ದಾರೆ. ಆದರೆ ಆಕೆಗೆ ಸಂಬಳ ಕೊಡಬೇಕಾ ಬೇಡವಾ ಎನ್ನುವುದು ಬರೀ ಚರ್ಚೆಯಲ್ಲೇ ಮುಗಿದು ಹೋಗುತ್ತದೆ. ಆದರೆ ಇಲ್ಲೊಬ್ಬಳು ಗೃಹಿಣಿ ತನ್ನ ಸಂಬಳಕ್ಕಾಗಿ ಪಟ್ಟು ಹಿಡಿದು ಹೋರಾಡಿ, ಒಂದಲ್ಲಾ..ಎರಡಲ್ಲಾ..ಬರೋಬ್ಬರಿ 76 ಲಕ್ಷ ರೂಪಾಯಿ ಸಂಬಳವನ್ನು ಗಂಡನಿಂದ ಪಡೆದಿದ್ದಾಳೆ.
ಸ್ಪೇನ್ನ ಮಹಿಳೆ ಮನೆಗೆಲಸಕ್ಕೆ ಸಂಬಳ ಬೇಕೆಂದು ಪಟ್ಟು ಹಿಡಿದಿದ್ದು, ಪತಿಯಿಂದ ಪರಿಹಾರಕ್ಕಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ಗೃಹಿಣಿಯಾಗಿ ದುಡಿದ ತನಗೆ ಸಂಬಳ ರೂಪದಲ್ಲಿ ಹಣ ನೀಡಲೇಬೇಕೆಂದು ನ್ಯಾಯಧೀಶರ ಮುಂದೆ ವಾದ ಮಾಡಿದ್ದಾಳೆ. ಕೊನೆಯಲ್ಲಿ ಕೋರ್ಟ್ ಈ ಮಹಿಳೆ 26 ವರ್ಷದ ಮನೆ ಕೆಲಸ ಮಾಡಿದ್ದಕ್ಕಾಗಿ 76 ಲಕ್ಷ ರೂಪಾಯಿ ನೀಡುವಂತೆ ಪತಿಗೆ ಆದೇಶ ನೀಡಿದೆ. ಈ ಘಟನೆ ನಡೆದು ವರ್ಷಗಳು ಕಳೆದರೂ ಮತ್ತೆ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಮಹಿಳೆಯ ದಿಟ್ಟ ತನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಪತಿಯ ಸ್ಥಿತಿಗೆ ಅಯ್ಯೋ ಪಾಪ ಎಂದಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications