Diabetes: ಶಿಸ್ತುಬದ್ಧ ಜೀವನ ಕ್ರಮಗಳಿಂದ ಮಧುಮೇಹಕ್ಕೆ ಕಡಿವಾಣ ಹಾಕಿ
ಮೊದಲೆಲ್ಲ ಮಧುಮೇಹ ಬಂದಿದೆ ಎಂದಾಕ್ಷಣ ರೋಗಿಗಳು ನಮ್ಮ ಬದುಕು ಮುಗಿದೇ ಹೋಯಿತು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಿದ್ದರು. ಆದರೆ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವೈದ್ಯರು ಹೇಳುವ ಕ್ರಮಗಳನ್ನು ಅಳವಡಿಸಿಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನ ಸಾಗಿಸಲು ಸಾಧ್ಯವಿದೆ ಎಂಬುದನ್ನು ಬಹುತೇಕರು ತೋರಿಸಿಕೊಟ್ಟಿದ್ದಾರೆ.
ಮಧುಮೇಹ ಬಂದಿದೆ ಎಂಬುದು ಗೊತ್ತಾದ ಮೇಲೆಯೂ ನನಗೇನು ಆಗಿಲ್ಲ ಆರೋಗ್ಯವಾಗಿದ್ದೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ. ಹಾಗೆಯೇ ಶಿಸ್ತುಬದ್ಧ ಜೀವನಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಎಲ್ಲ ವಿಚಾರವನ್ನು ಕೂಲ್ ಆಗಿ ತೆಗೆದುಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ನಿಜ ಹೇಳಬೇಕೆಂದರೆ ಮಧುಮೇಹ ಬಂದ ಬಳಿಕ ಸಂಪೂರ್ಣವಾಗಿ ವಾಸಿ ಮಾಡುವುದು ಕಷ್ಟಸಾಧ್ಯವಾದರೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಪಥ್ಯಗಳನ್ನು ಅನುಸರಿಸುವುದರೊಂದಿಗೆ ಆಹಾರ, ವ್ಯಾಯಾಮ, ಯೋಗಾಸನ ಹೀಗೆ ದೈಹಿಕ ಶ್ರಮದೊಂದಿಗೆ ಶಿಸ್ತುಬದ್ಧ ಜೀವನ ಕ್ರಮಗಳಿಂದ ಮಧುಮೇಹವನ್ನು ನಿಯಂತ್ರಣಕ್ಕೆ ತಂದು ನೆಮ್ಮದಿಯ ಜೀವನ ನಡೆಸುವತ್ತ ಹೆಜ್ಜೆಯಿಡಬೇಕಾಗುತ್ತದೆ. ಇನ್ನು ವೈದ್ಯರು ಹೇಳುವಂತೆ ದಿನಕ್ಕೆ ಕನಿಷ್ಟ ಮೂವತ್ತು ನಿಮಿಷಗಳ ಕಾಲ ವ್ಯಾಯಾಮ, ವಾಯುವಿಹಾರ, ಯೋಗ ಮೊದಲಾದವುಗಳನ್ನು ರೂಢಿಸಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರ ಬಂದು ಕೆಲವು ಸಮಯವನ್ನು ನಿಶ್ಚಿಂತೆಯಿಂದ ಕಳೆಯಬೇಕು.
ವೈದ್ಯರು ಹೇಳಿದಂತೆ ಮಾಡಿ
ನಾವು ಒತ್ತಡ ಮಾಡಿಕೊಂಡಷ್ಟು ಆರೋಗ್ಯಕ್ಕೆ ಹಾನಿಯೇ ಜಾಸ್ತಿ. ಎಲ್ಲವನ್ನೂ ಸಮಾಧಾನದಿಂದ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅಯ್ಯೋ ನನಗೆ ಮಧುಮೇಹವಿದೆ ಎಂದು ಯೋಚಿಸುವುದನ್ನು ಬಿಟ್ಟು ಎಲ್ಲರೂ ಸೇವಿಸುವ ಸಾಮಾನ್ಯ ಆಹಾರವನ್ನೇ ಒಂದು ಸರಳ ಮತ್ತು ಆರೋಗ್ಯಕರ ರೀತಿಯಲ್ಲಿ ಸೇವಿಸಬೇಕು. ಆದರೆ ಆಹಾರ ಸೇವನೆಯಲ್ಲಿ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.
ಮಧುಮೇಹ ರೋಗಗಳು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆಹಾರ ಸೇವನೆಗೆ ಮುನ್ನ ಅದರತ್ತ ಎಚ್ಚರಿಕೆ ಇರಬೇಕು. ಅದು ಮಧುಮೇಹ ಉಲ್ಬಣಕ್ಕೆ ಸಹಕಾರಿಯಾಗುವಂತಿದ್ದರೆ, ಅಂತಹ ಪದಾರ್ಥಗಳನ್ನು ದೂರವಿಡಿ. ಯಾವುದೇ ಆಹಾರ ಸೇವನೆ ಮಾಡಬೇಕಾದರೂ ಅದು ಆರೋಗ್ಯಕ್ಕೆ ಪೂರಕವಾಗಿದ್ದರೆ ಮಾತ್ರ ಅದನ್ನು ಸೇವಿಸಿ ಇಲ್ಲದೆ ಹೋದರೆ ಅದನ್ನು ದೂರವಿಟ್ಟು ಬಿಡಿ. ಕಾಯಿಲೆಗೆ ಒಳಗಾದವರು ರಕ್ತ ಪರೀಕ್ಷೆ ಮಾಡಿಸಿ ವೈದ್ಯರು ಹೇಳುವ ಆಹಾರ ಕ್ರಮ, ಚಿಕಿತ್ಸೆಗೆ ಆದ್ಯತೆ ನೀಡಿ.

ನಿರ್ಲಕ್ಷ್ಯ ಮಾಡಿದರೆ ಆಪತ್ತು
ಮಧುಮೇಹವನ್ನು ನಿರ್ಲಕ್ಷ್ಯ ಮಾಡಿದಷ್ಟು ಆರೋಗ್ಯಕ್ಕೆ ಆಪತ್ತು ಖಚಿತ. ವೈದ್ಯರು ನೀಡುವ ಔಷಧಿಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತವೆ. ಔಷಧಿ ತೆಗೆದುಕೊಳ್ಳುವವರು ವೈದ್ಯರು ಹೇಳಿದ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ರೂಢಿಸಿಕೊಳ್ಳಿ. ವೈದ್ಯರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದೆಂದು ಹೇಳಿದ್ದಾರೋ ಅದನ್ನು ವರ್ಜಿಸಿ.
ನಾವೇನಾದರೂ ನಿರ್ಲಕ್ಷ್ಯವಹಿಸಿದರೆ ಮಧುಮೇಹ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ನಂತರ ಆಹಾರ, ವ್ಯಾಯಾಮ, ಮಾತ್ರೆಗಳಿಂದಲೂ ನಿಯಂತ್ರಣಕ್ಕೆ ತರುವುದು ಅಸಾಧ್ಯವಾಗಿ ಇನ್ಸುಲಿನ್ ತಾತ್ಕಾಲಿಕವಾಗಿ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಅಲ್ಲಿ ತನಕ ಹೋಗದಂತೆ ಎಚ್ಚರವಹಿಸುವುದು ಒಳ್ಳೆಯದು. ಮಧುಮೇಹ ಆರಂಭದ ಸೂಚನೆ ತಿಳಿದಾಗಲೇ ಅದನ್ನು ನಿಯಂತ್ರಿಸಲು ಮುಂದಾಗಬೇಕು.
ಮಧುಮೇಹವನ್ನು ಅಡಿಯಾಳಾಗಿಸಿ
ಮಧುಮೇಹ ಬಗ್ಗೆ ಮೊಂಡಾಟ ಮಾಡಿದರೆ ಮಾತ್ರ ಅದು ನಮ್ಮ ಪಾಲಿಗೆ ಶತ್ರುವಂತೆ. ಅದನ್ನು ಅರಿತು ನಡೆದುಕೊಂಡರೆ ಅದು ನಮ್ಮ ಅಡಿಯಾಳಂತೆ. ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿದ್ದೇ ಆದರೆ ಸುಲಭವಾಗಿ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದಲ್ಲದೆ, ಯಾವುದೇ ಚಿಂತೆಯಿಲ್ಲದೆ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.
ಇನ್ನು ಮಧುಮೇಹದ ಬಗ್ಗೆ ಚಿಂತೆ ಮಾಡಿದಷ್ಟು ಹೆಚ್ಖಳವಾಗುತ್ತದೆ. ಬಹಳಷ್ಟು ಜನರು ಕಾಯಿಲೆ ಬಂದ ತಕ್ಷಣ ಅದರ ಬಗ್ಗೆಯೇ ಚಿಂತೆ ಮಾಡುತ್ತಾರೆ. ಈ ಚಿಂತೆ ಕಾಯಿಲೆಯನ್ನು ನಿಯಂತ್ರಿಸುವ ಬದಲು ಉಲ್ಬಣ ಮಾಡುತ್ತದೆ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಔಷಧಿ ಸೇರಿದಂತೆ ಏನೇನು ಕ್ರಮಗಳನ್ನು ಅನುಸರಿಸ ಬೇಕೋ ಅದನ್ನು ಅನುಸರಿಸಿಕೊಂಡು ತಮ್ಮ ಪಾಡಿಗೆ ಕೆಲಸಗಳನ್ನು ಮಾಡುತ್ತಾ ಕಾಯಿಲೆಯನ್ನು ಮರೆತು ಬಿಟ್ಟರೆ ಇದ್ದಷ್ಟು ದಿನ ಆರೋಗ್ಯವಾಗಿ ಬದುಕಲು ಸಾಧ್ಯವಾಗುತ್ತದೆ.
ಮಧುಮೇಹ ಹೇಗೆ ಬರುತ್ತದೆ?
ಇದೆಲ್ಲದರ ನಡುವೆಯೂ ಮಧುಮೇಹ ಹೇಗೆ ಬರುತ್ತದೆ ಎಂಬುದರ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದೇ ಮಧುಮೇಹ ಕಾಯಿಲೆಯಾಗಿದೆ. ವೈದ್ಯರು ಹೇಳುವ ಪ್ರಕಾರ ಶರೀರಕ್ಕೆ ತನ್ನ ಎಲ್ಲ ಕಾರ್ಯನಿರ್ವಹಣೆಗೆ ಶಕ್ತಿಬೇಕು. ಈ ಶಕ್ತಿ ಬರಬೇಕಾದರೆ ಆಹಾರ ಸೇವಿಸಬೇಕು. ನಾವು ಸೇವಿಸುವ ಆಹಾರ ಜೀರ್ಣವಾಗಿ ಬಳಿಕ ಕಡೆಯದಾಗಿ ಸಕ್ಕರೆಯಾಗಿ ಶರೀರಕ್ಕೆ ಸೇರುತ್ತದೆ. ಈ ಸಕ್ಕರೆಯೇ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ಮೇಧೋಜಿರಕ ಗ್ರಂಥಿಯು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೆ ತಕ್ಕಷ್ಟು ಇನ್ಸುಲಿನ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಈ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಜೀವಕೋಶಗಳ ಒಳಗೆ ಸೇರಿಸಲು ಸಹಕರಿಸಿ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಒಂದು ವೇಳೆ ಮೇಧೋಜಿರಕ ಗ್ರಂಥಿಯ ಮಾಮೂಲಿನ ಕಾರ್ಯಕ್ಷಮತೆ ಕಡಿಮೆಯಾಗಿ ಅಥವಾ ಇನ್ಸುಲಿನ್ ಉತ್ಪಾದನೆ ನಿಂತು ಹೋದರೆ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಸಕ್ಕರೆ ಪ್ರಮಾಣ ಹೆಚ್ಚಾಗುವುದೇ ಮಧುಮೇಹ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ. ಅದು ಏನೇ ಇರಲಿ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಸದಾ ಎಚ್ಚರವಾಗಿರ ಬೇಕಷ್ಟೆ.
-
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ












Click it and Unblock the Notifications