ಮನೆಯಲ್ಲೇ ಇರುವ ಕೊರೊನಾ ಸೋಂಕಿತರು ಏನೇನು ಅನುಸರಿಸಬೇಕು?
ನವದೆಹಲಿ, ಮೇ 5: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮುಂದುವರೆದಿದ್ದು, ಹಲವು ಆಸ್ಪತ್ರೆಗಳು ಹಾಸಿಗೆ, ಆಮ್ಲಜನಕ ಕೊರತೆಯನ್ನು ಅತೀವವಾಗಿ ಅನುಭವಿಸುತ್ತಿವೆ. ಕೊರೊನಾ ತಗುಲಿದ ರೋಗಿಗಳಿಗೆ ಅಥವಾ ಕೊರೊನಾ ಲಕ್ಷಣಗಳಿರುವವರಿಗೆ, ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು ಗೋಚರಿಸಿದವರಿಗೆ ಮನೆಯಲ್ಲೇ ಐಸೊಲೇಷನ್ನಲ್ಲಿರಲು ಸೂಚಿಸಲಾಗಿದೆ.
ಸೌಮ್ಯ ಲಕ್ಷಣಗಳು ಹೊಂದಿರುವವರು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಇದ್ದು, ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ ಸೋಂಕಿನಿಂದ ಗುಣಮುಖರಾಗಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗಿದ್ದರೆ ಮನೆಯಲ್ಲಿ ಐಸೊಲೇಷನ್ನಲ್ಲಿರುವವರು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು? ಏನೇನು ಮಾಡಬಾರದು ಎಂಬುದರ ಕುರಿತು ಇಲ್ಲಿದೆ ಮಾಹಿತಿ...

ಮನೆಯಲ್ಲಿರುವವರು ಏನು ಕ್ರಮಗಳನ್ನು ಅನುಸರಿಸಬೇಕು?
ಕೊರೊನಾ ಸೋಂಕು ತಗುಲಿದವರು ಅಥವಾ ಸೋಂಕು ಬರದಂತೆ ತಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕು.
* ಆಗಾಗ್ಗೆ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು
* ಅಗತ್ಯ ವಿಶ್ರಾಂತಿ ಪಡೆಯಬೇಕು
* ಮನೆಯಲ್ಲಿರುವ ಎಲ್ಲಾ ಸದಸ್ಯರೂ ಮಾಸ್ಕ್ ಧರಿಸಿರಬೇಕು
* ಉತ್ತಮ ಗಾಳಿ ಬೆಳಕು ಇರುವ ಕೋಣೆಯಲ್ಲಿ ಪ್ರತ್ಯೇಕವಾಗಿರಬೇಕು.

ಯಾವ ಅಂಶಗಳ ಮೇಲೆ ನಿಗಾ ವಹಿಸಬೇಕು?
ಕೊರೊನಾ ಸೋಂಕು ದೃಢಪಟ್ಟವರು ದೇಹದ ಉಷ್ಣತೆ ಕುರಿತು ನಿಗಾ ವಹಿಸಬೇಕು.
* ಪ್ರತಿ ನಾಲ್ಕು ಗಂಟೆಗೊಮ್ಮೆ ಉಷ್ಣತೆ ಪರೀಕ್ಷಿಸಬೇಕು.
* ದೇಹದಲ್ಲಿ ಆಮ್ಲಜನಕ ಪ್ರಮಾಣ ಗಮನಿಸುವುದು ತುಂಬಾ ಮುಖ್ಯ. ಆಕ್ಸಿಮೀಟರ್ ಮುಖಾಂತರ ಪ್ರತಿ ನಾಲ್ಕು ಗಂಟೆಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಇದರ ಪ್ರಮಾಣ 93ಕ್ಕಿಂತ ಕಡಿಮೆ ಬಂದರೆ ವೈದ್ಯರ ಬಳಿ ಹೋಗುವುದು ಅವಶ್ಯಕ.
* ಕುಟುಂಬದ ಇತರ ಸದಸ್ಯರೂ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮನೆಯಲ್ಲಿದ್ದವರು ಏನೇನು ಮಾಡಬಾರದು?
*ಮನೆಯಲ್ಲಿದ್ದವರು ಅನುಮತಿ ಇಲ್ಲದೇ ರೆಮ್ಡೆಸಿವಿರ್ ಔಷಧಿ ಬಳಸುವಂತಿಲ್ಲ
* ನೆಬ್ಯುಲೈಸರ್ ಬಳಸುವಂತಿಲ್ಲ
* ವೈದ್ಯರ ಸಲಹೆ ಹೊರತಾಗಿ ಆಮ್ಲಜನಕ ಸಿಲಿಂಡರ್ ಬಳಸುವಂತಿಲ್ಲ
Recommended Video

ಮನೆಯಲ್ಲಿದ್ದ ಸೋಂಕಿತರು ಏನು ಸೇವಿಸಬಹುದು?
* ಯಥೇಚ್ಛವಾಗಿ ನೀರು ಸೇವಿಸಬೇಕು. ಸೂಪ್, ಹಣ್ಣಿನ ರಸ, ಎಳನೀರು ಸೇವನೆ
* ಮಕಾಡೆ ಮಲಗಿ ಸರಾಗವಾಗಿ ಉಸಿರಾಡಿ
* ಆರು ಗಂಟೆಗಳ ಅಂತರದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಸೇವನೆ. ಕೆಮ್ಮಿದ್ದರೆ ಸಿರಪ್ ಸೇವಿಸಬೇಕು.
* ಮಲ್ಟಿ ವಿಟಮಿನ್ ಹಾಗೂ ಮಿನರಲ್ ಮಾತ್ರೆಗಳ ಸೇವನೆ
* ಸ್ಟೀಮ್ ತೆಗೆದುಕೊಳ್ಳುವುದು ಇಲ್ಲವೇ ದಿನಕ್ಕೆ ಮೂರು ಬಾರಿ ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದನ್ನು ಮಾಡಬೇಕು.
* ಇವೆಲ್ಲದರ ಹೊರತಾಗಿಯೂ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲವಾದರೆ ವೈದ್ಯರನ್ನು ತುರ್ತಾಗಿ ಕಾಣುವುದು ಅವಶ್ಯಕವಾಗಿರುತ್ತದೆ.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications