18ನೇ ಶತಮಾನದ ಭಾರತೀಯನಿಗೆ ಸಂತ ಪದವಿ, ಈತನ ಪವಾಡವೇನು?
ಸುದೀರ್ಘ ಚರ್ಚೆಗಳ ಬಳಿಕ ಕೇರಳದ ದೇವಸಹಾಯಮ್ ಎಂಬುವವರನ್ನು ಸಂತ ಎಂದು ಕ್ರೈಸ್ತ ಧರ್ಮದ ಪೋಪ್ ಫ್ರಾನ್ಸಿಸ್ ಘೋಷಿಸಿದ್ದಾರೆ. ರೋಮನ್ ಕ್ಯಾಥೋಲಿಕ್ ಧರ್ಮದಲ್ಲಿ ಸಂತ ಪದವಿ ಪಡೆದ ಭಾರತದ ಮೊದಲ ಸಾಮಾನ್ಯ ವ್ಯಕ್ತಿ ಎಂಬ ಶ್ರೇಯಸ್ಸು ದೇವಸಹಾಯಮ್ಗೆ ಸಿಕ್ಕಿದೆ.
ಚೆನ್ನೈ, ಮೇ 15: ಸುದೀರ್ಘ ಚರ್ಚೆಗಳ ಬಳಿಕ ಕೇರಳದ ದೇವಸಹಾಯಮ್ ಎಂಬುವವರನ್ನು ಸಂತ ಎಂದು ಕ್ರೈಸ್ತ ಧರ್ಮದ ಪೋಪ್ ಫ್ರಾನ್ಸಿಸ್ ಘೋಷಿಸಿದ್ದಾರೆ. ರೋಮನ್ ಕ್ಯಾಥೋಲಿಕ್ ಧರ್ಮದಲ್ಲಿ ಸಂತ ಪದವಿ ಪಡೆದ ಭಾರತದ ಮೊದಲ ಸಾಮಾನ್ಯ ವ್ಯಕ್ತಿ ಎಂಬ ಶ್ರೇಯಸ್ಸು ದೇವಸಹಾಯಮ್ಗೆ ಸಿಕ್ಕಿದೆ. 18ನೇ ಶತಮಾನದಲ್ಲಿ ಜೀವಿಸಿದ್ದ ದೇವಸಹಾಯಂ ಜಾತಿಪದ್ಧತಿ ವಿರುದ್ಧ ಹೋರಾಟ ನಡೆಸಿದ್ದರು. ಹಾಗೆಯೇ, ಕೋಮು ಸೌಹಾರ್ದತೆಯ ವಾತಾರಣ ಮೂಡಿಸಲು ಪ್ರಯತ್ನ ಮಾಡಿದ್ದರು. ಅಂದಿನ ಸಾಂಪ್ರದಾಯಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಇವರು ಕೊಲೆಯಾದರು ಎಂದು ಹೇಳಲಾಗುತ್ತದೆ.
ಅಂದಿನ ತಿರುವನಂತಪುರಂ ಸಾಮ್ರಾಜ್ಯದಲ್ಲಿ ಮೂಲತಃ ಹಿಂದೂ ಆಗಿದ್ದ ದೇವಸಹಾಯಂ ಹುಟ್ಟು ಹೆಸರು ನೀಲಕಂಡನ್ ಪಿಳ್ಳೈ. ಕನ್ಯಾಕುಮಾರಿಯಲ್ಲಿ ಜನಿಸಿದ ಅವರು 1745ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ದೇವಸಹಾಯಂ ಮತ್ತು ಲೆಜಾರಸ್ ಎಂಬ ಹೆಸರುಗಳಿಂದ ಗುರುತಿಸಿಕೊಂಡರು. ಅಂದಿನ ಸಂಪ್ರದಾಯಬದ್ಧ ಸಮಾಜದಲ್ಲಿ ಬಹಳ ಕಷ್ಟಕಾರ್ಪಣ್ಯಗಳನ್ನು ಎದುರಿಸಿದರೂ ದೇವಸಹಾಯಮ್ ಅವರ ಧರ್ಮಸೇವೆ ಮತ್ತು ಸಮಾಜಸೇವೆ ಅಬಾಧಿತವಾಗಿ ಮತ್ತು ಬದ್ಧತೆಯಿಂದ ನಡೆದಿತ್ತು ಎಂದು ಕ್ರೈಸ್ತ ಧರ್ಮೀಯರು ಸ್ಮರಿಸುತ್ತಾರೆ.
ಸಂತನಾಗಲು ಬೇಕಿತ್ತು ಪವಾಡ:
ಹಲವು ಚರ್ಚೆ, ಪ್ರಕ್ರಿಯೆ ಮೂಲಕ 2012ರಲ್ಲಿ ದೇವಸಹಾಯಮ್ ಅವರ ಬಲಿದಾನವನ್ನು ವ್ಯಾಟಿಕಾನ್ ಅಧಿಕೃತವಾಗಿ ಗುರುತಿಸಿತು. ಸಂತನೆಂದು ಘೋಷಿಸಲು ಪವಾಡ ಘಟನೆಗಳ ಅಗತ್ಯ ಇತ್ತು. 2012ರಲ್ಲಿ ಒಬ್ಬ ಮಹಿಳೆ ತನಗೆ ದೇವಸಹಾಯಮ್ ಪ್ರಾರ್ಥನೆಯಿಂದ ಪವಾಡದ ಅನುಭವವಾಯಿತು ಎಂದು ಹೇಳಿಕೊಂಡಿದ್ದಳು. ಏಳು ತಿಂಗಳ ಗರ್ಭಿಣಿಯಾಗಿದ್ದ ಆಕೆಯ ಭ್ರೂಣ ವೈದ್ಯಕೀಯವಾಗಿ ಸತ್ತಿದೆ ಎಂದು ಘೋಷಿಸಲಾಗಿತ್ತು. ಆಗ ಆ ಮಹಿಳೆ ದೇವಸಹಾಯಂ ಅವರನ್ನು ಪ್ರಾರ್ಥಿಸಿದ ಬಳಿಕ ಗರ್ಭದೊಳಗೆ ಮಗುವಿನ ಚಲನೆ ಆಯಿತಂತೆ. ಹಾಗಂತ ಆ ಮಹಿಳೆ ವಿವರಿಸಿದ ಪವಾಡದ ಘಟನೆ ಇತ್ಯಾದಿಯನ್ನು ಪರಿಗಣಿಸಿ ದೇವಸಹಾಯಂಗೆ ಸಂತಪದವಿ ನೀಡಲು ವ್ಯಾಟಿಕನ್ ನಿರ್ಧರಿಸಿತೆನ್ನಲಾಗಿದೆ.

ಜಾತಿ ವಿರುದ್ಧ ಹೋರಾಡಿದವನಿಗೆ ಜಾತಿ ಹೆಸರು:
ವ್ಯಾಟಿಕನ್ ನಗರದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ದೇವಸಹಾಯಂಗೆ ಸಂತಪದವಿ ಘೋಷಣೆ ಮಾಡಲಾಗಿದೆ. ಕುತೂಹಲವೆಂದರೆ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ದೇವಸಹಾಯಂರ ಮೂಲ ಜಾತಿ ಹೆಸರಾದ ಪಿಳ್ಳೈ ಅನ್ನು ನಮೂದಿಸಲಾಗಿತ್ತು. ಇದಕ್ಕೆ ಭಾರತದ ಹಲವು ಕ್ರೈಸ್ತರು ವಿರೋಧಿಸಿ ಪ್ರತಿಭಟಿಸಿದ್ದರು. ಜಾತಿ ಹೆಸರು ಬರೆಯುವ ಮೂಲಕ ದೇವಸಹಾಯಂರ ಮೂಲ ಆಶಯವನ್ನೇ ಗಾಳಿಗೆ ತೂರುತ್ತಿದ್ದೀರಿ ಎಂಬುದು ಪ್ರತಿಭಟನಾಕಾರರ ಅಸಮಾಧಾನವಾಗಿತ್ತು. ನಂತರ ಜಾತಿ ಹೆಸರನ್ನು ಆಹ್ವಾನ ಪತ್ರಿಕೆಯಿಂದ ತೆಗೆದುಹಾಕಲಾಯಿತು.
ಜನಾಂದಲೋಲನ ಅವಕಾಶ ಕೈತಪ್ಪಿತು:
"ಸಂತ ದೇವಸಹಾಯಂ ಅವರು ಸಮಾನತೆಗಾಗಿ ಬದ್ಧರಾದವರು. ಜಾತೀಯತೆ ಮತ್ತು ಕೋಮುವಾದದ ವಿರುದ್ಧ ಹೋರಾಡಿದವರು. ಭಾರತದಲ್ಲಿ ಕೋಮುವಾದ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರಿಗೆ ಸಂತ ಪದವಿ ಕೊಡಲಾಗಿದೆ. ಸಮಾಜದಲ್ಲಿ ಹೊಗೆಯಾಡುತ್ತಿರುವ ಕೋಮು ವಿಷ ಬೀಜದ ವಿರುದ್ಧ ಎದ್ದುನಿಲ್ಲಲು ಇದನ್ನು ಒಂದು ಜನಾಂದೋಲನವಾಗಿ ಮಾಡುವ ಅವಕಾಶವನ್ನು ಚರ್ಚ್ ಕೈಚೆಲ್ಲಿದೆ" ಎಂದು ದೇವಸಹಾಯಂ ಹೆಸರಿನವರೇ ಆದ ಕೇರಳದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಹತಾಶೆ ತೋಡಿಕೊಂಡಿದ್ಧಾರೆ.
ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಇದೂವರೆಗೆ ಸುಮಾರು 20 ಮಂದಿ ಭಾರತೀಯರಿಗೆ ಸಂತ ಅಥವಾ ಉಚ್ಚ ಪದವಿ ಕೊಡಲಾಗಿದೆ. ಇವರಲ್ಲಿ ಮದರ್ ತೆರೇಸಾ ಕೂಡ ಒಳಗೊಂಡಿದ್ಧಾರೆ. ಭಾರತೀಯ ಸಮುದಾಯಕ್ಕೆ ಸೇರಿದ ನಾಲ್ವರಿಗೆ ಇದುವರೆಗೆ ಸಂತ ಪದವಿ ಸಿಕ್ಕಿರುವ ಮಾಹಿತಿ ಇದೆ.
(ಒನ್ಇಂಡಿಯಾ ಸುದ್ದಿ)
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications