"ರಾಕಿಭಾಯ್, ಪುಷ್ಪ ತರ ಹೀರೋಗಳು ಸಿಕ್ಕರೆ ಲಾಠಿ ರುಚಿ ತೋರಿಸ್ತೀವಿ"
ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ "ಕೆಜಿಎಫ್" ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸೌಂಡ್ ಮಾಡಿತ್ತು. ಇದರಲ್ಲಿ ಯಶ್ ಮಾಡಿದ್ದ ರಾಕಿಭಾಯ್ ಪಾತ್ರಕ್ಕೆ ದೊಡ್ಡ ಫ್ಯಾನ್ ಬೇಸ್ ಇದೆ. ಯಶ್ ಅವರನ್ನು ಈಗೆಲ್ಲ ರಾಕಿಭಾಯ್ ಅಂತಲೇ ಜನ ಕರೆಯುತ್ತಾರೆ. ಇನ್ನು ನಟ ಅಲ್ಲು ಅರ್ಜುನ್ ನಟನೆಯ "ಪುಷ್ಪ" ಸಿನಿಮಾ ಕೂಡ ದೊಡ್ಡ ಹಿಟ್ ಕಂಡಿತ್ತು. ಅಲ್ಲು ಅವರ ಪುಷ್ಪ ಪಾತ್ರ, ಡೈಲಾಗ್ಗಳು ಕೂಡ ಜನರ ಬಾಯಲ್ಲೇ ಇದೆ. ರಾಕಿಭಾಯ್ ಗ್ಯಾಂಗ್ಸ್ಟರ್ ಪಾತ್ರವಾದರೆ, ಪುಷ್ಪ ಸ್ಮಗ್ಲರ್ ಪಾತ್ರ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ರಾಕಿಭಾಯ್, ಪುಷ್ಪ ಅಂತವರು ಸಿಕ್ಕರೆ ಲಾಠಿ ರುಚಿ ತೋರಿಸ್ತೀವಿ ಎಂದಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಡಿಯೋರಿಯಾ ಎಸ್ಪಿ ಸಂಜೀವ್ ಸುಮನ್ ಅವರು ಕಾರ್ಯಕ್ರಮವೊಂದರಲ್ಲಿ ಕೆಜಿಎಫ್, ಪುಷ್ಪ ಸಿನಿಮಾಗಳ ಡೈಲಾಗ್ ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ. "ಪುಷ್ಪ ತಗ್ಗೋದೆ ಇಲ್ಲ", ಪುಷ್ಪ ಮತ್ತು ರಾಕಿಭಾಯ್ ಅಂತಹ ಹೀರೋಗಳು ನಮಗೆ ಸಿಕ್ಕರೆ, ಅವರನ್ನು ಸರಿಪಡಿಸಲು ನಾವು ಕೋಲುಗಳಿಂದ ಹೊಡೆಯುತ್ತೇವೆ" ಎಂದಿದ್ದಾರೆ. ಮಾಧ್ಯಮಗಳು ಅಂತಹ ಸಿನಿಮಾಗಳ ನಕಾರಾತ್ಮಕ ಪ್ರಚಾರಗಳನ್ನು ಸಕಾರಾತ್ಮಕ ಬೆಳಕಿನಲ್ಲಿ ತೋರಿಸುತ್ತವೆ. ಈಗಿನ ಕಾಲದ ಹುಡುಗರು ಮತ್ತು ಹುಡುಗಿಯರು ಇದನ್ನೇ ಇಷ್ಟಪಡುತ್ತಿದ್ದಾರೆ ಎಂದಿದ್ದಾರೆ.

ಇತ್ತೀಚಿನ ಸಿನಿಮಾಗಳಲ್ಲಿ ನಕಾರಾತ್ಮಕ ಕಥೆಗಳನ್ನು ಹೆಚ್ಚಾಗಿ ಪ್ರದರ್ಶಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದ ಅವರು, ನಕಾರಾತ್ಮಕ ಪಾತ್ರಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ. ಒಟ್ಟಾರೆ ಎಸ್ಪಿ ಅವರ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈಗಿನ ಸಿನಿಮಾಗಳಲ್ಲಿ ಮದ್ಯಪಾನ ಮಾಡುವವರು, ಸಿಗರೇಟ್ ಸೇದುವವರು ಮತ್ತು ಗೂಂಡಾಗಿರಿಯಲ್ಲಿ ತೊಡಗುವವರನ್ನು ಹೀರೋಗಳನ್ನಾಗಿ ಮಾಡುತ್ತಿದ್ದಾರೆ. ಪುಷ್ಪ ಒಬ್ಬ ಹೀರೋ, ಆದರೆ ನಾವು ಪೊಲೀಸ್ ಅಧಿಕಾರಿಗಳು ಅಂತಹ ಹೀರೋನನ್ನು ಕಂಡುಕೊಂಡರೆ, ನಾವು ಅವರನ್ನು ಲಾಠಿಗಳಿಂದ ಹೊಡೆದು ಸರಿಪಡಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಚ್ಚರಿಕೆ ಕೊಟ್ಟಿದ್ದಾರೆ.
ಯುವಜನರಿಗೆ ಅದೇ ಇಷ್ಟವಾಗುತ್ತೆ
ಇನ್ನು ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಇದ್ದಾರೆ. ಮಾಧ್ಯಮಗಳು ಅಂತಹ ಚಿತ್ರಗಳ ನಕಾರಾತ್ಮಕ ಪ್ರಚಾರಗಳನ್ನು ಸಕಾರಾತ್ಮಕ ಬೆಳಕಿನಲ್ಲಿ ತೋರಿಸುತ್ತವೆ. ಈಗಿನ ಯುವಜನರು ಕೂಡ ಅಂತಹ ಪಾತ್ರಗಳನ್ನೇ ಇಷ್ಟಪಡುತ್ತಿದ್ದಾರೆ. ಇದರಿಂದಾಗಿ ಚಲನಚಿತ್ರ ನಿರ್ಮಾಪಕರು ಎಲ್ಲ ಸಕಾರಾತ್ಮಕ ವಿಷಯಗಳನ್ನು ಬಿಟ್ಟು, ನಕಾರಾತ್ಮಕ ವಿಷಯಗಳನ್ನು ಹೆಚ್ಚಾಗಿ ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಓದುವ ಮಕ್ಕಳನ್ನು ಖಳನಾಯಕರಂತೆ ತೋರಿಸಲಾಗುತ್ತಿದೆ. ಆದರೆ ಮದ್ಯಪಾನ ಮಾಡುವ, ಸಿಗರೇಟ್ ಸೇದುವ ಮತ್ತು ಗೂಂಡಾಗಿರಿಯಲ್ಲಿ ತೊಡಗುವವರನ್ನು ಹೀರೋಗಳಂತೆ ಚಿತ್ರಿಸಲಾಗುತ್ತಿದೆ. ಇದು ಮಹಿಳೆಯರು ಮತ್ತು ಪುರುಷರು ಇಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಸಿನಿಮಾಕ್ಕಿಂತ ನಿಜಜೀವನ ಭಿನ್ನ. ಆದ್ದರಿಂದ ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ತನ್ನಿರಿ ಎಂದು ಕಿವಿಮಾತು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್ ಈ ಹೇಳಿಕೆಗೆ ಗರಂ ಆಗಿದ್ದು, ಪೊಲೀಸ್ ಅಧಿಕಾರಿಯ ಮಾತುಗಳು ಸತ್ಯ ಎಂದೂ ಹಲವರು ಬೆನ್ನಿಗೆ ನಿಂತಿದ್ದಾರೆ.
-
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ












Click it and Unblock the Notifications