ಕಾಮಿಡಿ ಶೋಗೆ ಬಂದ ಅಪ್ಪು.! ಕಣ್ಣೀರಿಟ್ಟ ನಿರೂಪಕಿ ಅನುಶ್ರೀ, ಏನಿದು ಚಮತ್ಕಾರ?-ಇಲ್ಲಿದೆ ಮಾಹಿತಿ
Puneeth Rajkumar: ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಇಲ್ಲವಾದರೂ ಅವರ ನೆನಪುಗಳು ಮಾತ್ರ ಎಂದೆದಿಗೂ ಅಚ್ಚಹರಿಸಿರಿನಂತೆ ಶಾಶ್ವತ. ಅವರು ಚಿಕ್ಕಮಕ್ಕಳಿಂದ ಹಿಡಿದು, ಅಜ್ಜ, ಅಜ್ಜಂದಿರವರೆಗೂ ಮನಸಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ.
ಇನ್ನು ರಿಯಾಲಿಟಿ ಶೋಗಳು, ಸಿನಿಮಾಗಳು ಆರಂಭವಾಗುವ ಮುನ್ನ ಅವರನ್ನು ನೆನಪಿಸುವಂತಹ ಕಾರ್ಯಕ್ರಮಗಳು ನಡೆಯುತ್ತಲಿವೆ. ಹಾಗೆಯೇ ಇದೀಗ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ಗೆ ಅಪ್ಪು ಅವರು ಬಂದಿದ್ದು, ಈ ದೃಶ್ಯವನ್ನು ಕಂಡ ನಿರೂಪಕಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ.

ಸಾಮಾನ್ಯವಾಗಿ ಅಪ್ಪು ಹೇಗೆ ಕಾರ್ಯಕ್ರಮಕ್ಕೆ ಬಂದರೂ ಎನ್ನುವ ಪ್ರಶ್ನೆಗಳು ಕಾಡುತ್ತವೆ. ಇಲ್ಲಿದೆ ನೋಡಿ ಚಮತ್ಕಾರ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಸಣ್ಣ ಪ್ರೋಮೋವೊಂದನ್ನು ಜೀ ಕನ್ನಡ ಬಿಡುಗಡೆ ಮಾಡಿದ್ದು, ಅದರಲ್ಲಿ ಜಗ್ಗಪ್ಪ ಮತ್ತು ಅವರ ತಂಡ ಸ್ಕಿಟ್ ಮಾಡುತ್ತಿದೆ. ಟೈಮ್ ಮಷಿನ್ ಇಟ್ಕೊಂಡು ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಈ ವೇಳೆ ಜಗಪ್ಪ 'ಏ ಬುಜ್ಜಿ 2021ಕ್ಕೆ ಹೋಗು' ಅಂತಾ ಟೈಮ್ ಮಷಿನ್ಗೆ ಹೇಳಿದ್ದಾರೆ. ಆಗ ಕಾಲಚಕ್ರ ಹಿಂದೆ ಹೋಗಿದ್ದು, ಈ ಕ್ಷಣವಂತೂ ತೀರ್ಪುಗಾರರನ್ನು ಅಚ್ಚರಿಗೊಳಿಸಿದೆ. ಅದರಲ್ಲೂ ನಿರೂಪಾಲಿ ಅನುಶ್ರೀ ಏನ್ ಆಗುತ್ತಿದೆ ಅಂತಾ ದಿಟ್ಟಿಸಿ ನೋಡಿದ್ದರು. ಈ ವೇಳೆ ಕತ್ತಲಾಗಿ ಮಿನುಗು ಬೆಳಕಿನಲ್ಲಿ ಪುನೀತ್ ರಾಜ್ಕುಮಾರ್ ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡು ಅನುಶ್ರೀ ಕಣ್ಣೀರಿಟ್ಟಿದ್ದಾರೆ.
ಅಪ್ಪು ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಸೂಟು ಬೂಟು ಹಾಕಿಕೊಂಡು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ವೇದಿಕೆ ಮೇಲೆ ಆಗಮಿಸಿದ್ದು, ಈ ವೇಳೆ "ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ" ಎಂಬ ಅವರ ಧ್ವನಿಯಲ್ಲಿದ್ದ ಹಾಡು ಪ್ಲೇ ಆಗಿದೆ. ಇನ್ನು ಈ ವೇಳೆ ತರುಣ್ ಸುಧೀರ್ ಎದ್ದು ನಿಂತರೆ, ಅನುಶ್ರೀ, ನಯನಾ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಮಿಡಿ ಶೋಗೆ ಆಗಮಿಸಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರಿಟ್ಟು ಭಾವುಕರಾದರು.
ಜ್ಯೂನಿಯರ್ ಪುನೀತ್ ರಾಜ್ಕುಮಾರ್ ಥೇಟ್ ಅಪ್ಪು ರೀತಿಯಲ್ಲೇ ಮಾತನಾಡಿ ಎಲ್ಲರನ್ನೂ ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡಿದರು. ಅಪ್ಪು ಅವರ ಶೈಲಿಯಲ್ಲೇ ಮತನಾಡುತ್ತಾ, ನಡೆಯುತ್ತಾ ಗಮನ ಸೆಳೆದರು. ಬಳಿಕ ಸ್ಕಿಟ್ ಮುಂದುವರಿಸಿದ ಜಗಪ್ಪ, ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು, ನಿಮ್ಮ ಜೊತೆ ಸೆಲ್ಪೀ ತೆಗೆದುಕೊಳ್ಳಬಹುದಾ ಸರ್ ಎಂದು ಕೇಳಿದ್ದಾರೆ. ಆಗ ಜಗ್ಗ ಅವರೇ ಮೊದಲು ನೀವು ಅಳುವುದನ್ನು ನಿಲ್ಲಿಸುತ್ತೀರಾ? ಎಂದಯ ಪುನೀತ್ ರಾಜ್ಕುಮಾರ್ ರೀತಿಯಲ್ಲೇ ಮಾತನಾಡಿದ್ದಾರೆ.
ಅಲ್ಲದೆ, ಇದೇ ವೇಳೆ ಜೀವನದಲ್ಲಿ ಯಾವಗಲೂ ನಗ್ ನಗುತ್ತಾ ಇರಬೇಕ್ರಿ. ನೀವು ನಕ್ಕರೆ ಅಲ್ವಾ ಪೋಟೋದಲ್ಲಿ ಚೆನ್ನಾಗಿ ಕಣಿಸುತ್ತೀರಾ ತಗೋಳಿ ಅನ್ನೋ ಡೈಲಾಗ್ ಹೇಳಿದ್ದು, ಬಳಿಕ ಅಣ್ಣಾ ಬಾಂಡ್ ಹಾಡಿಗೆ ಜೂನಿಯರ್ ಪುನೀತ್ ರಾಜ್ಕುಮಾರ್ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದಿದ್ದಾರೆ. ಈ ಕ್ಷಣವಂತೂ ಅಪ್ಪು ಅವರೇ ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದಾರೆ ಅನ್ನುವಂತಿತ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications