Bigg Boss: ಕಿಚ್ಚ ಸುದೀಪ್ ವಿರುದ್ಧ ಲಾಯರ್ ಜಗದೀಶ್ ಗರಂ? ಬಿಗ್‌ಬಾಸ್ ಮನೆಯಿಂದ ಹೊರ ಹಾಕಿಸಿ ಮಾಜಿ ಮುಖ್ಯಮಂತ್ರಿ....

ಕಿಚ್ಚ ಸುದೀಪ್ ನಿರೂಪಣೆಯಲ್ಲಿ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಸಿಕ್ಕಾಪಟ್ಟೆ ಸಂಭ್ರಮ ಪಡುತ್ತಿದೆ. ಅದರಲ್ಲೂ, ಕನ್ನಡ ರಿಯಾಲಿಟಿ ಶೋಗಳ ಪಾಲಿನ ಕಿಂಗ್ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಅಂತಾರೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು & ಕನ್ನಡ ಟಿವಿ ಪ್ರೇಕ್ಷಕರು. ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಭಾರಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದು, ಭಾರತದ ಮೂಲೆ ಮೂಲೆಗೂ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಹಬ್ಬುತ್ತಿದೆ & ಪ್ರೇಕ್ಷಕರ ಸೆಳೆಯುತ್ತಿದೆ.

ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಪ್ರೇಕ್ಷಕರು ಕೂಡ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಇಷ್ಟಪಟ್ಟು ನೋಡುತ್ತಾರೆ. ಹೀಗಾಗಿಯೇ ಟಿಆರ್‌ಪಿಯ ವಿಚಾರದಲ್ಲಿ ಕೂಡ ಬಿಗ್‌ಬಾಸ್ ಕನ್ನಡ ಇತಿಹಾಸ ಬರೆಯುತ್ತಿದೆ. ಆದ್ರೆ ಇಂತಹ ಸಮಯದಲ್ಲೇ, ಕಿಚ್ಚ ಸುದೀಪ್ ವಿರುದ್ಧ ಲಾಯರ್ ಜಗದೀಶ್ ಗರಂ? ಬಿಗ್‌ಬಾಸ್ ಮನೆಯಿಂದ ಹೊರ ಹಾಕಿಸಿ ಮಾಜಿ ಮುಖ್ಯಮಂತ್ರಿ....

Lawyer Jagadish Said This About Bigg Boss Kannada In A Viral Video

ಕಿಚ್ಚ ಸುದೀಪ್ ವಿರುದ್ಧ ಲಾಯರ್?

ಹೌದು, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ನಿಂತಿರುವುದೇ ಕಿಚ್ಚ ಸುದೀಪ್ ಅವರಿಂದ ಅಂತ ಅಭಿಮಾನಿಗಳು ಹೇಳುತ್ತಾರೆ. ಯಾಕಂದ್ರೆ ವಾರಕ್ಕೆ ಎರಡು ದಿನ ಕಿಚ್ಚ ಸುದೀಪ್ ನಡೆಸಿಕೊಡುವ ಕಾರ್ಯಕ್ರಮ ಕೋಟ್ಯಂತರ ಜನರಿಗೆ ಮುಖ್ಯ. ಹೀಗಿದ್ದಾಗಲೇ ಲಾಯರ್ ಜಗದೀಶ್ ತಮ್ಮನ್ನ ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಿರುವ ವಿಚಾರದ ಬಗ್ಗೆ ಈಗ ರೊಚ್ಚಿಗೆದ್ದು ರಿಯಾಕ್ಷನ್ ಕೊಟ್ಟಿದ್ದಾರೆ, ಅಲ್ಲದೆ ಪರೋಕ್ಷವಾಗಿ ಕಿಚ್ಚ ಸುದೀಪ್ ಬಗ್ಗೆ....

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ?

ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಪಿಲ್ಲರ್ ಇದ್ದಂತೆ. ಹೀಗಿದ್ದಾಗ, ಲಾಯರ್ ಜಗದೀಶ್ ಅವರು ಫುಲ್ ಗರಂ ಆಗಿ ವಿಡಿಯೋ ಒಂದನ್ನ ಮಾಡಿದ್ದಾರೆ. ಹಾಗೇ, ಈ ವಿಡಿಯೋದಲ್ಲಿ ಲಾಯರ್ ಜಗದೀಶ್ ಅವರು ಮಾಡಿರುವ ಆರೋಪದ ಪ್ರಕಾರ, ಅವರನ್ನ ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಲು ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಂತೆ.

ಹಾಗೇ ಈ ವಿಚಾರದಲ್ಲಿ ಕಿಚ್ಚ ಸುದೀಪ್ ಅವರನ್ನು ಹೆಸರು ಹೇಳದೇ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿರುವ ಆರೋಪ ಕೂಡ ಕೇಳಿ ಬಂದಿದೆ. ಅಲ್ಲದೆ ಲಾಯರ್ ಜಗದೀಶ್ ಅವರ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಲಾಯರ್ ಜಗದೀಶ್ ಅವರು ಇದೀಗ ಆರೋಪ ಮಾಡಿರುವಂತೆ, ತಾವು ಎಲ್ಲಿ ಮತ್ತಷ್ಟು ಫೇಮಸ್ ಆಗಿಬಿಡ್ತೀವೋ ಅನ್ನೋ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೀಗೆಲ್ಲಾ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ.

ಅಂತಿಮ ಹಂತದಲ್ಲಿ ಬಿಗ್‌ಬಾಸ್ ಕಾರ್ಯಕ್ರಮ....

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಇದೀಗ ಅಂತಿಮ ಹಂತ ತಲುಪುತ್ತಿದೆ. ಹಾಗೇ ಗೆಲುವಿಗಾಗಿ ಸ್ಪರ್ಧಿಗಳ ನಡುವೆ ಪೈಪೋಟಿ ಕೂಡ ಜೋರಾಗಿದೆ. ಇದೇ ಹೊತ್ತಲ್ಲಿ ಲಾಯರ್ ಜಗದೀಶ್ ಅವರು ತಾವು ಯಾಕೆ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಹೋಗಲಿಲ್ಲ, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ? ಅನ್ನೋ ವಿಚಾರವನ್ನು ವಿಡಿಯೋ ಮೂಲಕ ತಿಳಿಸಿ, ಬಸವರಾಜ್ ಬೊಮ್ಮಾಯಿ ಅವರನ್ನ ಕುರಿತು ಸ್ಫೋಟಕ ಆರೋಪ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+