Amruthadhare serial: ಗೌತಮ್-ಭೂಮಿಕಾ ಮನೆಯಲ್ಲಿ ಮಗನಿಗೆ ನಾಮಕರಣ ಶಾಸ್ತ್ರ: ಇಟ್ಟ ಹೆಸರೇನು ಗೊತ್ತಾ?
ಅಮೃತಧಾರೆ' ಧಾರಾವಾಹಿಯಲ್ಲಿ ದಿನಕ್ಕೊಂದು ಘಟನೆಗಳು ನಡೆಯುತ್ತಿವೆ. ಗೌತಮ್ ಎಂಬ ಉದ್ಯಮಿ ತನ್ನಿಗಿಂತ ಹತ್ತು ವರ್ಷ ಚಿಕ್ಕವಯಸ್ಸಿನ ಭೂಮಿಕಾ ಎಂಬ ಮಧ್ಯಮ ವರ್ಗದ ಶಾಲಾ ಶಿಕ್ಷಕಿಯನ್ನ ವಿವಾಹವಾಗುತ್ತಾನೆ. ಈ ಮದುವೆ ಪ್ರಾರಂಭದಲ್ಲಿ ಸುಲಭವಾಗಿರದೆ, ಇಬ್ಬರೂ ತಮ್ಮದೇ ಆದ ಕಾರಣಗಳಿಂದ ಈ ಸಂಬಂಧವನ್ನು ಒಪ್ಪಿಕೊಳ್ಳುತ್ತಾರೆ. ಸಮಯ ಕಳೆದಂತೆ ಅವರ ನಡುವೆ ನಿಜವಾದ ಸ್ನೇಹ, ಗೌರವ ಮತ್ತು ಪ್ರೀತಿ ಬೆಳೆಯುತ್ತದೆ.
ಮೊದಲಿನಿಂದಲೂ ಗೌತಮ್ ಕುಟುಂಬದ ಸದಸ್ಯರು ಆಸ್ತಿ ವಿಚಾರವಾಗಿ ಹಲವು ತಂತ್ರಗಾರಿಕೆಯನ್ನ ನಡೆಸಿರುತ್ತಾರೆ. ಈ ಹಿಂದೆ ಗೌತಮ್ ಮೇಲೆ ರೌಡಿಗಳು ದಾಲಿ ಮಾಡಿದ ಸಂದರ್ಭದಲ್ಲಿ ಮನೆಯವರಿಗೆ ಆಸ್ತಿಯನ್ನ ಭಾಗ ಮಾಡಿ ಹೆಚ್ಚು ಆಸ್ತಿಯನ್ನ ಭೂಮಿಕಾ ಹೆಸರಿಗೆ ಗೌತಮ್ ಬರೆದಿದ್ದರು. ಹೆಚ್ಚಿನ ಆಸ್ತಿ ಸಿಗಲಿಲ್ಲ ಎಂದು ಶಕುಂತಲಾ ಹಾಗೂ ಜೈದೇವ್ ಭೂಮಿಕಾ ಹಾಗೂ ಮಗುವನ್ನ ಕೊಲ್ಲಲು ಸಂಚು ಹಾಕಿದ್ರು. ಇದೀಗ ಎಲ್ಲಾ ಸವಾಲು ಹಾಗೂ ಕಷ್ಟಗಳನ್ನ ಎದುರಿ ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ, ಕುತಂತ್ರಿಗಳು ಹೆಣ್ಣು ಮಗುವನ್ನ ಕಿಡ್ನಾಪ್ ಮಾಡಿದ್ದು, ಇದೀಗ ಗೌತಮ್ ಮನೆಯಲ್ಲಿ ನಾಮಕರಣ ಸಂಭ್ರಮ ಶಾಸ್ತ್ರ ಜೋರಾಗಿದೆ.

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಹಾಗೂ ಭೂಮಿಕಾ ದಂಪತಿಗೆ ಮಗು ಜನಿಸಿದ್ದು, ಇದರಿಂದಾಗಿ ಇಡೀ ಕುಟುಂಬದಲ್ಲಿ ಖುಷಿಯ ವಾತಾವರಣ ಮೂಡಿದೆ. ಇದೀಗ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ. ಮಗುವಿಗೆ ಏನು ಹೆಸರು ಇಡಬೇಕು ಎಂಬ ವಿಚಾರವನ್ನು ಇಷ್ಟು ದಿನ ಗುಟ್ಟಾಗಿಯೇ ಇಡಲಾಗಿತ್ತು.ಆದರೆ, ಇದೀಗ ರಿವೀಲ್ ಮಾಡಲಾಗಿದೆ. ಸಿಂಪಲ್ ಆಗಿ ನಾಮಕರಣ ಶಾಸ್ತ್ರ ನಡೆಸಲಾಗಿದೆ.
ಗೌತಮ್ ಮತ್ತು ಭೂಮಿಕಾ ದಂಪತಿಗಳು ತಮ್ಮ ಮಗನಿಗೆ ನಾಮಕರಣ ಶಾಸ್ತ್ರ ನಡೆದಿದೆ. ಭೂಮಿಕಾ ಹಾಗೂ ಗೌತಮ್ ಮಗನಿಗೆ ಯಾವ ಹೆಸರಿಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದರು. ಹಳೆಯ ಸಂಪ್ರದಾಯದಲ್ಲಿ ತಾತನ ಹೆಸರನ್ನು ಮೊಮ್ಮಕ್ಕಳಿಗೆ ಇಡಲಾಗುತ್ತದೆ. ಗೌತಮ್ ತಂದೆಯ ಹೆಸರು ರಘುವೀರ್ ದೀವಾನ್. ಇಲ್ಲೂ ಸಹ ಗೌತಮ್ ಅವರ ತಂದೆ ರಘುವೀರ್ ಎಂಬ ಹೆಸರಿಡಲು ಯೋಚಿಸಲಾಗಿತ್ತು. ಆದರೆ, ಮನೆಯವರು ಆ ಹೆಸರು ಹಳೆಯ ಹೆಸರು ಎಂದು ತಿರಸ್ಕರಿಸಲಾಯಿತು
ಮಗನ ನಾಮಕರಣ ಶಾಸ್ತ್ರ ಎಂದು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಭೂಮಿಕಾ ಮಗನ ನಾಮಕರಣ ಶಾಸ್ತ್ರ ಎಂದು ಖುಷಿಯಲ್ಲಿದ್ದಾರೆ. ಒಂದು ಕಡೆ ಮಗುವಿಗೆ ನಾಮಕರಣ ಶಾಸ್ತ್ರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಗೌತಮ್ ಗೆ ಮಗಳು ಇಲ್ಲ ಎಂಬ ಬೇಸರ ಮೂಡಿದೆ. ಈ ಸಂದರ್ಭದಲ್ಲಿ ಮಗಳು ನಮ್ಮ ಜೊತೆಯಲ್ಲಿದ್ದರೇ ಇನ್ನಷ್ಟು ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಬಹುದಿತ್ತು ಎನ್ನುವ ಚಿಂತೆ ಗೌತಮ್ಗೆ ಇದೆ. ಮಗನಿಗೆ ಯಾವ ಹೆಸರಿಡಬೇಕು ಎಂಬುದು ಗೌತಮ್ ಹಾಗೂ ಭೂಮಿಕಾಗೆ ಬಿಡಲಾಗಿತ್ತು. ಹೀಗಾಗಿ ಇಬ್ಬರು ಚರ್ಚೆ ಮಾಡಿ ಒಂದು ಹೆಸರು ನಿರ್ಧರಿಸೋದಾಗಿ ಹೇಳಿದರು.
ನಾಮಕರಣ ಶಾಸ್ತ್ರದಲ್ಲಿ ಗೌತಮ್ ಹಾಗೂ ಭೂಮಿಕಾ ಸೇರಿ ಒಂದು ಹೆಸರನ್ನು ಆಯ್ಕೆ ಮಾಡಿದರು. ಆ ಹೆಸರೇ ಆಕಾಶ್. ಈ ಹೆಸರು ಕೇಳಿ ಮನೆಯವರೆಲ್ಲರೂ ಖುಷಿ ಪಟ್ಟರು. ಅಳಿಯ ಗೌತಮ್ ಹೆಸರು ಸೆಲೆಕ್ಟ್ ಮಾಡಿರುವುದು ಖುಷಿಯಾಗಿದೆ ಎಂದು ಭೂಮಿಕಾ ತಾಯಿ ಹೇಳಿದರು. ಮಗನ ನಾಮಕರಣ ಶಾಸ್ತ್ರದಲ್ಲೂ ಗೌತಮ್ ಗೆ ನೋವು ಕಾಡುತ್ತಿತ್ತು. ಮಗನ ನಾಮಕರಣ ಶಾಸ್ತ್ರದ ಜೊತೆಗೆ ಮಗಳ ನಾಮಕರಣವು ಆಗುತ್ತಿತ್ತು ಎಂದು ಗೌತಮ್ ಹಾಗೂ ಗೌತಮ್ ಸ್ನೇಹಿತ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications