Darshan Thoogudeepa: ರಾಜರಾಜೇಶ್ವರಿ ನಗರದ ಮನೆಯನ್ನು ಖಾಲಿ ಮಾಡಲು ದರ್ಶನ್ ತೂಗುದೀಪ್...

ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ನರಳುತ್ತಿದ್ದಾರೆ, ದರ್ಶನ್ ತೂಗುದೀಪ್ ಗ್ರಹಗತಿ ಸರಿಯಾಗಿ ಇಲ್ಲದ ಕಾರಣ ಹೀಗೆ ಆಗಿದೆ ಎಂಬುದು ಅಭಿಮಾನಿಗಳ ಮಾತು. ಅಲ್ಲದೆ ದರ್ಶನ್ ತೂಗುದೀಪ್ ಅವರ ಗ್ರಹಗತಿ ಸರಿಯಾಗಿ ಇಲ್ಲದ ಕಾರಣ ಹೀಗೆ ಅವರ ಶತ್ರುಗಳು ದರ್ಶನ್ ತೂಗುದೀಪ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗಲು ಒಂದು ಕೆಲಸ ಮಾಡಬೇಕಂತೆ, ಆ ಪ್ರಕಾರ ಇದೀಗ ರಾಜರಾಜೇಶ್ವರಿ ನಗರದ ಮನೆಯನ್ನು ಖಾಲಿ ಮಾಡಲು ದರ್ಶನ್ ತೂಗುದೀಪ್...

ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಅವರ ಆರೋಗ್ಯ ಹಾಳಾಗಿ ಹೋಗಿದ್ದು, ಜೈಲು ಊಟವನ್ನು ಅರಗಿಸಿಕೊಳ್ಳಲು ಅವರಿಗೆ ಆಗ್ತಿಲ್ಲ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿರುವ ಕಾರಣ ಆಸ್ಪತ್ರೆಗೆ ಸೇರುವ ಕಂಡೀಷನ್ ಇದೆ. ಹೀಗಿದ್ದಾಗ ಇದೇ ಕಾರಣಕ್ಕೆ ಅಭಿಮಾನಿಗಳು ಕೂಡ ದರ್ಶನ್ ತೂಗುದೀಪ್ ಅವರ ಆರೋಗ್ಯ ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಹೀಗೆಲ್ಲಾ ಇದ್ದಾಗಲೇ ರಾಜರಾಜೇಶ್ವರಿ ನಗರದ ಮನೆಯನ್ನು ಖಾಲಿ ಮಾಡಲು ದರ್ಶನ್ ತೂಗುದೀಪ್ ಹೆಂಡತಿ...

Darshan Thoogudeepa Rajarajeshwari Nagar Home May Be Vacate For This Reason

ರಾಜರಾಜೇಶ್ವರಿ ನಗರದ ಮನೆ ಖಾಲಿ...

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರ ಕೈವಾಡ ಏನೂ ಇಲ್ಲ, ಹೀಗಿದ್ದರೂ ದರ್ಶನ್ ತೂಗುದೀಪ್ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಲಾಗಿದೆ. ಅಲ್ಲದೆ ಬಳ್ಳಾರಿ ಜೈಲಿಗೆ ನಟ ದರ್ಶನ್ ತೂಗುದೀಪ್ ಶಿಫ್ಟ್ ಆಗುವುದರ ಹಿಂದೆ ಕೂಡ ಶತ್ರುಗಳ ಕೈವಾಡ ಇದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಹೀಗಿದ್ದಾಗಲೇ ರಾಜರಾಜೇಶ್ವರಿ ನಗರದ ಮನೆ ಖಾಲಿ ಮಾಡಲು ದರ್ಶನ್ ತೂಗುದೀಪ್ ಅವರು ಮುಂದಾಗಿದ್ದಾರೆ, ಇದಕ್ಕಾಗಿ ದರ್ಶನ್ ತೂಗುದೀಪ್ ಕುಟುಂಬದವರು ಕೂಡ ಸಿದ್ಧತೆ ನಡೆಸಿ ಇನ್ನೇನು ಕೆಲವೇ ದಿನದಲ್ಲಿ ಮನೆ ಖಾಲಿ ಮಾಡಿ ಮೈಸೂರಿಗೆ ಹೋಗಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಈಗ...

ದರ್ಶನ್ ತೂಗುದೀಪ್ ಅವರಿಗೆ ಶತ್ರುಗಳ ಕಾಟ ಹೆಚ್ಚಾಗಲು & ರೇಣುಕಾಸ್ವಾಮಿ ವಿಚಾರದಲ್ಲಿ ಜೈಲಿಗೆ ಹೋಗಲು ರಾಜರಾಜೇಶ್ವರಿ ನಗರದ ಮನೆಯಲ್ಲಿ ಇರುವ ದೋಷವೇ ಕಾರಣ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಇದೇ ಕಾರಣಕ್ಕೆ ರಾಜರಾಜೇಶ್ವರಿ ನಗರದ ಮನೆ ಖಾಲಿ ಮಾಡಲು ದರ್ಶನ್ ತೂಗುದೀಪ್ ಅವರಿಗೆ ಇದೀಗ ಪ್ರಖ್ಯಾತ ಜೋತಿಷಿ ಒಬ್ಬರು ಸಲಹೆ ನೀಡಿದ್ದಾರಂತೆ. ಅಲ್ಲದೆ ದರ್ಶನ್ ತೂಗುದೀಪ್ ಹೆಂಡತಿ ವಿಜಯಲಕ್ಷ್ಮೀ ಅವರು ಈ ರೀತಿ ಜೋತಿಷಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ದರ್ಶನ್ ತೂಗುದೀಪ್ ಅವರ ಹೆಂಡತಿ...

ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರು ರಾಜರಾಜೇಶ್ವರಿ ನಗರದ ಮನೆ ಖಾಲಿ ಮಾಡುವ ಸುದ್ದಿ ಸಂಚಲನ ಸೃಷ್ಟಿ ಮಾಡಿದ್ದು, ಸೋಷಿಯಲ್ ಮೀಡಿಯಾ ತುಂಬಾ ಸದ್ದು ಮಾಡುತ್ತಿದೆ. ಹೀಗಿದ್ದರೂ ಈ ಬಗ್ಗೆ ದರ್ಶನ್ ತೂಗುದೀಪ್ ಅವರ ಹೆಂಡತಿ ಆಗಲಿ ಅಥವಾ ತಮ್ಮ ಆಗಲಿ ಅಥವಾ ದರ್ಶನ್ ತೂಗುದೀಪ್ ಅವರ ಕುಟುಂಬದ ಸದಸ್ಯರೇ ಆಗಲಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರ ರಾಜರಾಜೇಶ್ವರಿ ನಗರದ ಮನೆ ಖಾಲಿ ಆಗಬಹುದು ಎಂಬ ಸುದ್ದಿ ಅಭಿಮಾನಿಗಳಿಗೆ ಸಾಕಷ್ಟು ನೋವು ತರಿಸಿದೆ.

ಎಸಿಪಿ ಚಂದನ್ ಬಗ್ಗೆ ಡಿ-ಬಾಸ್ ಫ್ಯಾನ್ಸ್...

ಬಳ್ಳಾರಿ ಜೈಲಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಅವರು ಜಾಮೀನು ಪಡೆದು, ಅದ್ಧೂರಿಯಾಗಿ ಜೈಲಿನಿಂದ ರಿಲೀಸ್ ಆಗಿ ಬರಲಿದ್ದಾರೆ. ಈ ಮೂಲಕ ಬಳ್ಳಾರಿ ಜೈಲಿಂದ ಬೆಂಗಳೂರು ತನಕ ಹೆಲಿಕಾಪ್ಟರ್ ಮೂಲಕ ದರ್ಶನ್ ತೂಗುದೀಪ್ ಅವ್ರನ್ನ ಕರೆಸಿಕೊಳ್ಳಬೇಕು ಎಂಬ ಆಸೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗಲೇ ನಟ ದರ್ಶನ್ ಅವರ ಜಾಮೀನು ಅಂದ್ರೆ ಬೇಲ್ ಅರ್ಜಿ ರಿಜೆಕ್ಟ್ ಆಗಿ ಭಾರಿ ದೊಡ್ಡ ಆಘಾತ ಎದುರಾಗಿತ್ತು. ಇದೇ ಸಮಯದಲ್ಲಿ ಎಸಿಪಿ ಚಂದನ್ ಅವರ ಬಗ್ಗೆ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋಗಳು ಓಡಾಡ್ತಿವೆ. ಅಲ್ಲದೆ ಬಾಸ್ ಹೊರಗೆ ಬಂದ ಮೇಲೆ ನಾವೇ ನಂಬರ್ 1 ಅಂತಿದ್ದಾರೆ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+