Darshan Thoogudeepa: ದರ್ಶನ್ ತೂಗುದೀಪ್ ಅಭಿಮಾನಿಗಳ ಹಾವಳಿಗೆ ಬೆಚ್ಚಿಬಿದ್ದ ಅಹೋರಾತ್ರ, ರಾತ್ರಿ ಪೂರ್ತಿ...

ದರ್ಶನ್ ತೂಗುದೀಪ್ ಅಭಿಮಾನಿಗಳು ತಮ್ಮ ಡಿ-ಬಾಸ್ ಬಗ್ಗೆ ಮಾತನಾಡುವವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು, ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಪರದಾಡುವಾಗ ಹೊರಗೆ ಶತ್ರುಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾತನಾಡಿದ್ದ ಅಹೋರಾತ್ರಗೆ ಆತಂಕ ಹುಟ್ಟಿಸುವ ರೀತಿ ಫೋನ್ ಕಾಲ್‌ಗಳು ಬರುತ್ತಿವೆ, ಎಂಬ ಆರೋಪ ಬಂದಿದ್ದು ದರ್ಶನ್ ತೂಗುದೀಪ್ ಅಭಿಮಾನಿಗಳ ಹಾವಳಿಗೆ ಬೆಚ್ಚಿಬಿದ್ದ ಅಹೋರಾತ್ರ, ರಾತ್ರಿ ಪೂರ್ತಿ...

ದರ್ಶನ್ ತೂಗುದೀಪ್ ಬಗ್ಗೆ ತುಂಬಾ ಕೆಟ್ಟ ಕೆಟ್ಟ ಪದಗಳನ್ನು ಅಹೋರಾತ್ರ ಬಳಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಕಿಚ್ಚ ಸುದೀಪ್ ಬಗ್ಗೆ ಕೂಡ ಅಹೋರಾತ್ರ ಕೆಟ್ಟ ಕೆಟ್ಟ ಪದ ಬಳಸಿದ್ದು ವಿಡಿಯೋ ಮಾಡಿ ಅಪ್‌ಲೋಡ್ ಮಾಡಿರುವ ಆರೋಪ ಇದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಇರುವಾಗ ಹೊರಗೆ ಶತ್ರುಗಳು ಏನೇನೋ ಮಾತನಾಡುತ್ತಿದ್ದಾರೆ. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದು, ಅಹೋರಾತ್ರಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಫೋನ್ ಕಾಲ್ ಮಾಡಿ ರಾತ್ರಿ ಪೂರ್ತಿ...

Darshan Thoogudeepa Fans Are Saying This To The Ahoratra

ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು...

ದರ್ಶನ್ ತೂಗುದೀಪ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಡಿ-ಬಾಸ್ ಎಂಬ ಬಿರುದು ನೀಡಿದ್ದಾರೆ. ಅಲ್ಲದೆ ದರ್ಶನ್ ತೂಗುದೀಪ್ ಅಭಿಮಾನಿಗಳು ಎಲ್ಲೇ ಹೋದರು ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಎಂದು ಜೈಕಾರ ಹಾಕುತ್ತಿದ್ದಾರೆ. ಹೀಗಿದ್ದಾಗ ಅಹೋರಾತ್ರ ಕೂಡ ದರ್ಶನ್ ತೂಗುದೀಪ್ ಅವರ ಬಗ್ಗೆ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬೈದಿರುವ ಆರೋಪ ಇದ್ದು, ಅಹೋರಾತ್ರಗೆ ಫೋನ್ ಕಾಲ್ ಮಾಡಿ ಏನು ಮಾಡಿದ್ದಾರೆ ಗೊತ್ತಾ? ಆಡಿಯೋ ಕೇಳಲು & ವಿಡಿಯೋ ನೋಡಲು ಮುಂದೆ ಓದಿ.

ಡಿ-ಬಾಸ್ ಅಭಿಮಾನಿ ಮಾತಿಗೆ ಅಹೋರಾತ್ರ...

ಹೌದು, ದರ್ಶನ್ ತೂಗುದೀಪ್ ಅವರ ಅಭಿಮಾನಿ ನೇರವಾಗಿ ಅಹೋರಾತ್ರಗೆ ಫೋನ್ ಕಾಲ್ ಮಾಡಿ ಮಾತನಾಡಿರುವ ಆಡಿಯೋ ಸಂಚಲನ ಸೃಷ್ಟಿ ಮಾಡಿದೆ. ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಹೋರಾತ್ರಗೆ ಫೋನ್ ಕಾಲ್ ಮಾಡಿ ಮಾತನಾಡಿರುವ ಆಡಿಯೋ ವೈರಲ್ ಆಗ್ತಿದೆ. ಈ ಆಡಿಯೋದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿ ಆಕ್ರೋಶ ಹೊರ ಹಾಕುತ್ತಾರೆ. ಅಲ್ಲದೆ, ಅಹೋರಾತ್ರಗೆ ಈ ವೇಳೆ ನೇರ ಪ್ರಶ್ನೆ ಕೇಳ್ತಾರೆ. ಲೇ ಯಾವನೋ ನೀನು ನಮ್ಮ ಡಿ-ಬಾಸ್ ಬಗ್ಗೆ ಮಾತಾಡೋಕೆ? ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿ ಪ್ರಶ್ನೆಯನ್ನ ಕೇಳ್ತಾರೆ. ಇದಕ್ಕೆ ಅಹೋರಾತ್ರ ಉತ್ತರ ನೀಡಿ, ಯಾರೋ ಅದು ಡಿ-ಬಾಸ್ ಅಂತಾ ಮರು ಪ್ರಶ್ನೆ ಹಾಕುತ್ತಾರೆ.

ಇದಕ್ಕೆ ಉತ್ತರ ನೀಡಿರುವ ದರ್ಶನ್ ತೂಗುದೀಪ್ ಅವರ ಅಭಿಮಾನಿ, ಯಾರೋನಾ? ಚಿಕ್ಕ ಮಕ್ಕಳಿಗೆ ಹೋಗಿ ಕೇಳು ಡಿ-ಬಾಸ್ ಯಾರು ಅಂತಾ ಹೇಳ್ತಾರೆ ಅಂತಾ ಆಕ್ರೋಶ ಹೊರ ಹಾಕುತ್ತಾರೆ. ಈ ರೀತಿ ಶುರು ಆಗುವ ಸಂಭಾಷಣೆ ವೇಳೆ ಇಬ್ಬರ ನಡುವೆ ಅಸಹ್ಯಕರ ಭಾಷೆ ಕೂಡ ಬಳಕೆ ಆಗಿದ್ದು, ಈ ಆಡಿಯೋ ಈಗ ವಿಡಿಯೋ ರೂಪದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಇದೇ ಆಡಿಯೋದಲ್ಲಿ ಅಹೋರಾತ್ರ ಮತ್ತೆ ದರ್ಶನ್ ತೂಗುದೀಪ್ ಅವರಿಗೆ ಬೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ತನಿಖೆ ನಡೆಯಲಿ ಎಂಬ ಆಗ್ರಹ ಕೂಡ ಕೇಳಿ ಬಂದಿದೆ.

ಬಳ್ಳಾರಿ ಜೈಲಿನಿಂದ ರಿಲೀಸ್ ಆದ ತಕ್ಷಣ...

ದರ್ಶನ್ ತೂಗುದೀಪ್ ಅವರ ಜೀವಕ್ಕೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಖುದ್ದು ವೈದ್ಯರೇ ಸ್ಫೋಟಕ ಮಾಹಿತಿ ಕೂಡ ನೀಡಿದ್ದಾರೆ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಅಂತಾ ಅಭಿಮಾನಿಗಳಿಂದ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಈಗ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಆರೋಗ್ಯ ಕೈಕೊಟ್ಟಿದ್ದು, ಜೀವಕ್ಕೆ ಕೂಡ ಕಂಟಕ ಎದುರಾಗುತ್ತಿದೆ ಎಂಬ ಆರೋಪ ಓಡಾಡುತ್ತಿದೆ. ಈ ಕಾರಣಕ್ಕೆ ಇಂದು ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕರೆ ನಾಳೆಯೇ ರಿಲೀಸ್ ಆಗೋದು ಬಹುತೇಕ ಗ್ಯಾರಂಟಿ ಎಂಬ ಮಾತುಗಳು ಓಡಾಡುತ್ತಿವೆ. ಮತ್ತೊಂದು ಕಡೆ ಕರ್ನಾಟಕ ಬಂದ್ ಕೂಡ ಮಾಡ್ತಾರಾ ಅಭಿಮಾನಿಗಳು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+