ಈ ದಿನಾಂಕದಂದು ಜನಿಸಿದ ಮಕ್ಕಳಿದ್ದರೆ ಆ ಹೆತ್ತವರೇ ಅದೃಷ್ಟವಂತರು: ತಂದೆ ತಾಯಿಯನ್ನು ಕಣ್ಣ ರೆಪ್ಪೆಯಂತೆ ಕಾಪಾಡುತ್ತಾರೆಯಂತೆ
ಮಗುವನ್ನು ಹೊಂದುವುದು ಪ್ರತಿಯೊಬ್ಬ ಪೋಷಕರ ಜೀವನದಲ್ಲಿ ಒಂದು ಮಧುರ ಕ್ಷಣ. ತಮ್ಮ ಮಕ್ಕಳ ಜನನಕ್ಕೂ ಮುನ್ನವೇ ತಂದೆ ತಾಯಿ ಅವರ ಭವಿಷ್ಯ ಮತ್ತು ಬೆಳವಣಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮ ದಿನಾಂಕಗಳ ಹಿಂದೆ ಒಂದು ವಿಚಿತ್ರ ರಹಸ್ಯ ಅಡಗಿರುತ್ತದೆ. ಹುಟ್ಟಿದಾಗ ಎಷ್ಟೇ ಸರಳವಾಗಿದ್ದರೂ, ಬಡತನದಲ್ಲಿದ್ದರೂ ಮಕ್ಕಳು ಬೆಳೆದ ನಂತರ, ಅವರ ಭವಿಷ್ಯವು ಸಂಪೂರ್ಣವಾಗಿ ಬದಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೆಲವು ದಿನಾಂಕಗಳಲ್ಲಿ ಜನಿಸಿದ ಮಕ್ಕಳು 40 ವರ್ಷ ತುಂಬಿದ ನಂತರ ಅವರ ಪೋಷಕರಿಗೆ ಅನಿರೀಕ್ಷಿತ ಸಂಪತ್ತು ಹರಿದು ಬರುವುದು. ಅಲ್ಲದೆ ರಾಜರ ರೀತಿ ಜೀವನ ನಡೆಸುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದವರ ಮೇಲೆ ಸೂರ್ಯನ ಆಶೀರ್ವಾದ ವಿಶೇಷವಾಗಿ ಇರುತ್ತದೆ. ಅದೇ ರೀತಿ, 5, 14 ಮತ್ತು 23 ರಂದು ಜನಿಸಿದವರು ಬುಧ ಬಲ ಹೊಂದಿರುತ್ತಾರೆ. ಜೊತೆಗೆ 9, 18 ಮತ್ತು 27 ರಂದು ಜನಿಸಿದವರು ಮಂಗಳನ ಶಕ್ತಿಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ, ಈ ದಿನಾಂಕಗಳಲ್ಲಿ ಜನಿಸಿದ ಮಕ್ಕಳು, ಅವರ ಚಿಕ್ಕ ವಯಸ್ಸಿನಲ್ಲಿ ಸ್ವಲ್ಪ ತುಂಟರಾಗಿದ್ದರೂ ಅಥವಾ ಅವರ ಅಧ್ಯಯನದಲ್ಲಿ ಸರಾಸರಿಯಾಗಿದ್ದರೂ, ಬಹಳಷ್ಟು ಪರಿಶ್ರಮ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರು 20 ವರ್ಷವನ್ನು ತಲುಪುವ ಹೊತ್ತಿಗೆ, ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ಬಯಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಈ ದಿನಾಂಕಗಳಲ್ಲಿ ಜನಿಸಿದ ಮಕ್ಕಳು 25 ರಿಂದ 30 ವರ್ಷ ವಯಸ್ಸು ತಲುಪುವ ಹೊತ್ತಿಗೆ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರುತ್ತಾರೆ. ಅದರಲ್ಲಿಯೂ ಅವರು 45 ವರ್ಷ ವಯಸ್ಸಿನವರಾಗುವಾಗ ಅಂದರೆ, ಈ ಮಕ್ಕಳು ಸಂಪೂರ್ಣವಾಗಿ ಸೆಟೆಲ್ ಆದ ಬಳಿಕ ಪೋಷಕರ ಪಾಲಿಗೆ ಬಹಳ ಅದೃಷ್ಟವಂತರಾಗಿರುತ್ತಾರೆ.
ಪೋಷಕರು ಸಾಲದಲ್ಲಿದ್ದರೂ ಅಥವಾ ಮನೆ ನಿರ್ಮಾಣಕ್ಕೆ ಕಷ್ಟಪಡುತ್ತಿದ್ದರೂ ಈ ಮಕ್ಕಳ ಗಳಿಕೆ ಮತ್ತು ಅದೃಷ್ಟದಿಂದಾಗಿ ಕುಟುಂಬವು ಐಷಾರಾಮಿ ಜೀವನವನ್ನು ಪ್ರವೇಶಿಸುತ್ತದೆ. ಈ ದಿನಾಂಕಗಳಲ್ಲಿ ಜನಿಸಿದ ಮಕ್ಕಳು ತಮ್ಮ ಹೆತ್ತವರ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುತ್ತಾರೆ. ಅವರು ಸಂಪಾದಿಸಲು ಪ್ರಾರಂಭಿಸಿದ ನಂತರ, ಹೆತ್ತವರನ್ನು ರಾಜರಂತೆ ನೋಡಿಕೊಳ್ಳುತ್ತಾರೆ. ಅವರು ಬಯಸಿದ ಮನೆ ಮತ್ತು ಕಾರನ್ನು ಖರೀದಿಸುವುದಲ್ಲದೆ, ಸಮಾಜದಲ್ಲಿ ಅವರಿಗೆ ಅಪಾರ ಗೌರವ ನೀಡಲಾಗುತ್ತದೆ.
ವಿಶೇಷವಾಗಿ 1, 5 ಮತ್ತು 9 ನೇ ಸರಣಿಯ ದಿನಾಂಕಗಳಲ್ಲಿ ಜನಿಸಿದ ಮಕ್ಕಳಿರುವ ಮನೆಯಲ್ಲಿ ಪೋಷಕರು ತಮ್ಮ ವೃದ್ಧಾಪ್ಯದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ, ಅವರು ತಮ್ಮ ಹೆತ್ತವರನ್ನು ಕಣ್ಣ ರೆಪ್ಪೆಗಳಂತೆ ಕಾಪಾಡಿಕೊಳ್ಳುತ್ತಾರೆ. ನಿಮ್ಮ ಮನೆಯಲ್ಲಿಯೂ ಈ ದಿನಾಂಕಗಳಲ್ಲಿ ಜನಿಸಿದ ಮಕ್ಕಳಿದ್ದರೆ ನೀವೇ ಅದೃಷ್ಟ್ವಂತರು. ಈಗ ಕೆಲವು ತೊಂದರೆ, ಅಡೆತಡೆಗಳನ್ನು ಅನುಭವಿಸುತ್ತಿದ್ದರೂ ಭಯಪಡುವ ಅವಶ್ಯಕತೆ ಇಲ್ಲ ಎನ್ನುತ್ತದೆ ಸಂಖ್ಯಾಶಾಸ್ತ್ರ. ನಿಮ್ಮ ಮಕ್ಕಳು ಭವಿಷ್ಯದಲ್ಲಿ ನಿಮ್ಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತಾರೆಯಂತೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications