Get Updates
Get notified of breaking news, exclusive insights, and must-see stories!

ಹೈಬ್ರಿಡ್ ರೈತನಿಗೆ ದಾರಿಬಿಡಿ!

Karnataka need to grow good breed of farmers
ನವ ದೆಹಲಿ ಫೆ.23: ದೇಶದ ರೈತರ ಬವಣೆ ಮತ್ತು ಆತ್ಮಹತ್ಯೆಗಳಿಂದ ರೋಸಿಹೋಗಿರುವ ಕೇಂದ್ರ ಸರ್ಕಾರ, ಉತ್ತಮ ತಳಿಯ ರೈತರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಂಡಿದೆ.

ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ಕೃಷಿ ಸಂಶೋಧನಾಲಯದ ನೂತನ ಪ್ರಯೋಗ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಹಳ್ಳಿ-ಹಳ್ಳಿಗಳಲ್ಲೂ ಉತ್ತಮ ತಳಿಯ ರೈತರು ಕಂಡು ಬರಲಿದ್ದು, ರೈತರ ಆತ್ಮಹತ್ಯೆ ಎಂಬುದು ಸಂಪೂರ್ಣವಾಗಿ ಮರೆತ ಮಾತಾಗಲಿದೆ ಎಂದರು. "ಇಲ್ಲಿಯವರೆಗೆ ಕೃಷಿ ಸಂಶೋಧನೆ ಎಂದರೆ ಉತ್ತಮ ತಳಿಯ ಬಿತ್ತನೆ ಬೀಜಗಳ ಅಭಿವೃದ್ಧಿ, ಉತ್ತಮ ಮಟ್ಟದ ಗೊಬ್ಬರ, ಕ್ರಿಮಿ ನಾಶಕಗಳ ಉತ್ಪಾದನೆ ಎಂಬ ಅಭಿಪ್ರಾಯವಿತ್ತು. ಆದರೆ, ಇವು ಯಾವುದೂ ರೈತರ ಬವಣೆ ಮತ್ತು ಆತ್ಮಹತ್ಯೆಯ ಸುದ್ದಿಗಳ ಇರುಸು-ಮುರುಸನ್ನು ಕಡಿಮೆ ಮಾಡಲಿಲ್ಲ. ಹೀಗಾಗಿ, ಸರ್ಕಾರ ಬೇರೊಂದು ದಿಕ್ಕಿನಲ್ಲಿ ಯೋಚಿಸುವ ಪ್ರಮೇಯ ಒದಗಿತು" ಎಂದ ಪವಾರ್, "ಇನ್ನು ಮುಂದೆ ದೇಶದ ಜನತೆ ಯಾವುದೇ ಯೋಚನೆ ಇಲ್ಲದೆ ಐ.ಪಿ.ಎಲ್. ಪಂದ್ಯಾವಳಿಗಳನ್ನು ನೋಡಬಹುದು" ಎಂದು ನುಡಿದರು.

ಪ್ರಯೋಗಾಲಯದ ಮುಖ್ಯ ನಿರ್ದೇಶಕ ಡಾ.ಬೇಜಾನ್ ಸಿಂಗ್ ಮಾತನಾಡಿ, ತಮ್ಮ ಪ್ರಯೋಗಶಾಲೆಯಲ್ಲಿ ಅಭಿವೃದ್ಧಿಪಡೆಸಲಿರುವ ರೈತ ಹಲವಾರು ಉತ್ತಮ ಗುಣಗಳನ್ನು ಹೊಂದಿರುತ್ತಾನೆ ಎಂದರಲ್ಲದೆ "ನಮ್ಮ ಪ್ರಯೋಗಾಲಯದಿಂದ ಹೊರಬರುವ ರೈತ ಆಶಾವಾದಿ, ಶ್ರಮಜೀವಿ ಮಾತ್ರವಲ್ಲದೆ ಸ್ಫುರದ್ರೂಪಿ ಸಹ ಆಗಿರುತ್ತಾನೆ. ಬೆಳಗಿನಿಂದ ಸಂಜೆಯವರೆಗೆ ತನ್ನ ಹೊಲ ಗದ್ದೆಗಳಲ್ಲಿ ದುಡಿಯುವ ಈ ಉತ್ತಮ ತಳಿಯ ರೈತ, ಸಂಜೆಯ ನಂತರ, ನಗರ ಪ್ರದೇಶಗಳಿಂದ ಬರುವಂತಹ ಪ್ರವಾಸಿಗರಿಗೆ ಮನರಂಜನೆ ನೀಡಲು ಸಂಗೀತ ಮತ್ತು ನೃತ್ಯಗಳಲ್ಲಿ ಅತ್ಯುತ್ತಮ ಪರಿಣತಿ ಸಹ ಹೊಂದಿರುತ್ತಾನೆ. ಇಂತಹ ರೈತನನ್ನು ರೂಪಿಸಲು ನಮ್ಮ ವಿಜ್ಞಾನಿಗಳು ವಿವಿಧ ಭಾಷೆಯ ಹತ್ತು ಹಲವಾರು ಚಲನಚಿತ್ರಗಳನ್ನು ಮತ್ತೆ ಮತ್ತೆ ಸತತವಾಗಿ ನೋಡುತ್ತಿದ್ದಾರೆ" ಎಂದರು.
(ಮಜಾವಾಣಿ ಕೃಷಿ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+