ಬರೀ 36 ಗಂಟೆಯಷ್ಟೇ ದರ್ಶನ ನೀಡೋ ಚೌಡೇಶ್ವರಿ!
ಮದ್ದೂರು ತಾಲೂಕು ಹೆಮ್ಮನಹಳ್ಳಿಯಲ್ಲಿರುವ ಈ ಚೌಡೇಶ್ವರಿ ದೇಗುಲ ಬಹಳ ವಿಶೇಷ. ವರ್ಷಕ್ಕೊಮ್ಮೆ 36 ಗಂಟೆ ಕಾಲ ಮಾತ್ರ ಈ ದೇವಿಯ ದರ್ಶನ ಸಿಗುತ್ತದೆ. ಆ ದಿನಕ್ಕಾಗಿ ಕಾಯುವ ಭಕ್ತರು, ವಿಶೇಷ ಪೂಜೆ ಸಲ್ಲಿಸುತ್ತಾರೆ
ಮಂಡ್ಯ, ಮಾರ್ಚ್ 17: ಸಾಮಾನ್ಯವಾಗಿ ದೇವಾಲಯಗಳಲ್ಲಿ ದಿನವೂ ದೇವರ ದರ್ಶನ ಪಡೆಯಬಹುದು. ಆದರೆ ಮದ್ದೂರಿನ ಹೆಮ್ಮನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಾಲಯದ ಚೌಡೇಶ್ವರಿ ದೇವಿಯನ್ನು ನೋಡಬೇಕಾದರೆ ವರ್ಷ ಕಾಯಬೇಕು. ಕಾದರೂ ನೋಡಲು ಸಿಗುವುದು ಕೇವಲ 36 ಗಂಟೆ ಮಾತ್ರ.
ಪ್ರತಿವರ್ಷದಂತೆ ಈ ವರ್ಷವೂ ಹೆಮ್ಮನಹಳ್ಳಿ ಚೌಡೇಶ್ವರಿ ದೇವಿಯ ಆರಂಭವಾಗಿದ್ದು, ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ತೆರೆದು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಯಿತು.[ನಾಗಲ ಮಡಿಕೆಗೆ ನಡೆದುಕೊಂಡರೆ ನಾಗ ದೋಷ ಪರಿಹಾರ!]

ದೇವಾಲಯದ ಅಮೃತ ಮಣ್ಣಿನ ದ್ವಾರವನ್ನು ತೆರೆದ ಕ್ಷಣದಲ್ಲಿ ಆ ಅಮೃತ ಮಣ್ಣನ್ನು ಭಕ್ತಾದಿಗಳು ತಮ್ಮ ತಲೆ ಮೇಲೆ ಹೊತ್ತುಕೊಂಡು ಪ್ರದಕ್ಷಿಣೆ ಹಾಕಿದರು. ಒಂದು ಕಡೆ ರಾಶಿ ಹಾಕಿ, ಅದನ್ನು ಕಣ್ಣಿಗೆ ಒತ್ತಿಕೊಂಡು ಸ್ವಲ್ಪ ಅಮೃತ ಮಣ್ಣನ್ನು ತೆಗೆದುಕೊಂಡು ಅದರಿಂದ ಪೂಜೆ ಸಲ್ಲಿಸಿದರು. ಈ ಅಮೃತ ಕ್ಷಣಕ್ಕಾಗಿ ಕಾದ ಭಕ್ತರು ಮುಗಿಬಿದ್ದು ತಮ್ಮ ಸೇವೆ ಸಲ್ಲಿಸಿದರು.
ಉತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಬೇಡಿಕೊಂಡರು. ಇನ್ನು ಕೆಲ ಭಕ್ತರು ದೇವಾಲಯದಲ್ಲಿ ಉರುಳು ಸೇವೆ ಮಾಡುವ ಮೂಲಕ ತಮ್ಮ ಹರಕೆ ತೀರಿಸಿದರು.[ವಾರಾಂತ್ಯ ವಿಶೇಷ: ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ]
ದೇವಾಲಯದಲ್ಲಿ ಶುಕ್ರವಾರ ಕೊಂಡೋತ್ಸವ ನಡೆಯಲಿದ್ದು, ಇದಕ್ಕಾಗಿ ಕೊಂಡದ ಗುಂಡಿಯನ್ನು ಗ್ರಾಮದ ಯುವಕರು ತೆಗೆದು, ಬಳಿಕ ಎತ್ತಿನ ಬಂಡಿ ಉತ್ಸವ ನಡೆಸಿ, ಸೌದೆಯನ್ನು ಗುರುವಾರವೇ ಸಂಗ್ರಹಿಸಿದ್ದಾರೆ. ಜಾತ್ರಾಮಹೋತ್ಸವದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿದೆ. ಇದೇ ವೇಳೆ ಚೌಡೇಶ್ವರಿಯ ಅಮೃತದ್ವಾರವನ್ನು ಮುಚ್ಚಲಾಗುವುದು. ಇನ್ನು ಆಕೆಯ ದರ್ಶನ ಮಾಡಬೇಕಾದರೆ ಮುಂದಿನ ವರ್ಷದವರೆಗೆ ಕಾಯಬೇಕು.
ಹಬ್ಬದ ಅಂಗವಾಗಿ ನಡೆದ ಜಾನಪದ ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು. ಗ್ರಾಮದಾದ್ಯಂತ ಸಡಗರ ಮನೆ ಮಾಡಿದ್ದು, ಭಕ್ತರು ಚೌಡೇಶ್ವರಿ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications