ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಥಣಿ ಬ್ರಿಜ್‌ : ಜ.12ರಿಂದ ಹಾಲುಮತ ಸಂಸ್ಕೃತಿ ವೈಭವ 2017

By Ramesh
|
Google Oneindia Kannada News

ರಾಯಚೂರು, ಜನವರಿ. 10 : ಶ್ರೀ ಸಿದ್ದರಾಮಾನಂದ ಪುರಿ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಗುಲ್ಬರ್ಗ ವಿಭಾಗದ ವತಿಯಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ನಲ್ಲಿ ಜನವರಿ 12, 13 ಮತ್ತು 14ರಂದು 'ಹಾಲುಮತ ಸಂಸ್ಕೃತಿ ವೈಭವ-2017'ನಡೆಯಲಿದೆ.

ಜನವರಿ 12ರಂದು ಮೊದಲನೇ ದಿನ 'ಹಾಲುಮತ ಸಂಸ್ಕೃತಿ ವೈಭವ 2017 ಕಾರ್ಯಮದ ದಿವ್ಯ ಸಾನಿಧ್ಯವನ್ನುಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಹೆಚ್.ಎಂ ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

Halumatha Samskruti Vaibhava 2017 at Thintini bridge from January 12 to 14

ಕಾರ್ಯಕ್ರಮದ ಅಂಗವಾಗಿ ಜನವರಿ 12ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ,ಟಗರು ಕಾಳಗ, ರಕ್ತದಾನ, ನೇತ್ರ ತಪಾಸಣೆ ಸೇರಿದಂತೆ ಆರೋಗ್ಯ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಜನವರಿ 13ರಂದು 12ನೇ ರಾಷ್ಟ್ರೀಯ ಗೊಂಡ ಸಮಾವೇಶ ಸಹ ನಡೆಯಲಿದೆ. ಜನವರಿ 14ರಂದು ಕೊನೆದಿನ ಸಂಕ್ರಾಂತಿ ಹಬ್ಬದ ಅಂಗವಾಗಿ ಎತ್ತುಗಳಿಗೆ ಭಾರ ಎಳೆಯುವ ಸ್ಪರ್ಧೆ ಅಲ್ಲದೇ, ಮೂರು ದಿನಗಳ ಕಾಲ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

English summary
The Gulbarga division of the Kaginele Mahasamsthan Kanaka Gurupeetha is organising Halumatha Samskruti Vaibhava 2017, a three-day cultural extravaganza, from January 12 to 14 at Thintini bridge, Devadurga taluk Raichur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X