ಕೊಳವೆ ಬಾವಿ ದುರಂತ: ಸುದ್ದಿ ಕೇಳಿ ಮೃತರ ದೊಡ್ಡಪ್ಪ ಸಾವು
ಕೊಳವೆ ಬಾವಿ ದುರಂತದಲ್ಲಿ ಮೃತರಾದ ಶಂಕರಪ್ಪ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಅವರ ದೊಡ್ಡಪ್ಪ ಸಂಗಪ್ಪ ಬಾಣದ್ ಸಹ ಮೃತರಾಗಿದ್ದಾರೆ.
ಗದಗ, ಏಪ್ರಿಲ್ 12: ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಇಂದು ಕೊಳವೆ ಬಾವಿಗೆ ಬಿದ್ದು ಮೃತರಾದ ಶಂಕರಪ್ಪ (30) ಅವರ ಸಾವಿನ ಸುದ್ದಿ ಕೇಳಿ ಅವರ ದೊಡ್ಡಪ್ಪ ಸಂಗಪ್ಪ ಬಾಣದ್(32) ಎನ್ನುವವರು ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ನಡೆದಿದೆ.
ಮೊದಲೇ ಶಂಕರಪ್ಪ ಅವರ ಸಾವಿನಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಇದೀಗ ಅವರ ದೊಡ್ಡಪ್ಪ ಸಂಗಪ್ಪ ಅವರ ಸಾವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.[ಗದಗ ಕೊಳವೆ ಬಾವಿ ದುರಂತ: ಕಾರ್ಮಿಕರಿಬ್ಬರೂ ಸಾವು]
ಇಂದು ಬೆಳಗ್ಗೆ ಶಂಕರಪ್ಪ ಅವರ ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯನ್ನು ರಿ ಬೋರ್ ಮಾಡಿಸುತ್ತಿದ್ದ ಸಮಯದಲ್ಲಿ ಜಮೀನಿನ ಮಾಲೀಕ ಶಂಕರಪ್ಪ ಮತ್ತು ಕಾರ್ಮಿಕ ಬಸವರಾಜ್ (32) ಎಂಬುವವರು ಕೊಳವೆಗೆ ಬಾವಿಗೆ ಬಿದ್ದಿದ್ದರು. ಹಲವು ಗಂಟೆಗಳ ಕಾರ್ಯಾಚರಣೆಯ ನಂತರವೂ ಇಬ್ಬರನ್ನೂ ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಸುದ್ದಿಯನ್ನು ಕೇಳಿದ ಅವರ ದೊಡ್ಡಪ್ಪ, ಆಘಾತ ತಾಳಲಾರದೆ ಸಾವನ್ನಪ್ಪಿದ್ದು, ಕುಟುಂಬವೀಗ ಇಬ್ಬರ ಸಾವಿನ ದುಃಖವನ್ನು ಭರಿಸಬೇಕಿದೆ.[ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]