ಕಂಬನಿ ಮಿಡಿಯುವಂತೆ ಮಾಡಿದ ಮರಿಕೋತಿ ರೋದನ
ಚಾಮರಾಜನಗರ, ಮಾರ್ಚ್ 04 : ತಾಯಿಯೊಂದಿಗೆ ಆಟವಾಡುತ್ತಾ ಬದುಕು ಕಟ್ಟಿಕೊಳ್ಳಬೇಕಾಗಿದ್ದ ಕೋತಿ ಮರಿಯೊಂದು ವಿಧಿಯ ಅಟ್ಟಹಾಸದ ಎದುರು ಅನಾಥವಾಗಿ ರೋಧಿಸುತ್ತಿದ್ದ ದೃಶ್ಯ ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಜನತೆಯ ಮನಕಲಕುವಂತೆ ಮಾಡಿತು.
ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೋತಿಯೊಂದು ತನ್ನ ಮರಿಯೊಂದಿಗೆ ತೆರಳುತ್ತಿತ್ತು. ಆದರೆ ತಾಯಿಕೋತಿ ಆಯುಷ್ಯ ಗಟ್ಟಿಯಿರಲಿಲ್ಲವೋ? ಅಥವಾ ಮರಿಕೋತಿಯ ದುರಾದೃಷ್ಟವೋ? ಅಪರಿಚಿತ ವಾಹನವೊಂದು ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದಿತ್ತು.

ಮುಂದೆ ಬರುತ್ತಿರುವ ವಾಹನ ತನ್ನ ಪಾಲಿನ ಯಮ ಎಂಬುದು ಆ ತಾಯಿಕೋತಿಗೆ ಗೊತ್ತಾಗುವ ವೇಳೆಗೆ ಅದರ ಮೇಲೆಯೇ ಹರಿದು ಹೋಗಿತ್ತು ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿತ್ತು. ಆದರೆ ಅದೃಷ್ಟವಶಾತ್ ಮರಿ ಬದುಕಿತು.
ರಕ್ತಸಿಕ್ತವಾಗಿ ಬಿದ್ದ ತಾಯಿಯ ಬಳಿ ಹೋದ ಮರಿಗೆ ತಾಯಿ ಸತ್ತಿದ್ದಾಳೆ ಎಂಬುವುದೇ ಗೊತ್ತಾಗಲಿಲ್ಲ. ತಾಯಿ ಮಲಗಿದ್ದಾಳೆ ಎಂದು ತಿಳಿದ ಆ ಮರಿಕೋತಿ ಅದರೊಂದಿಗೆ ಆಡುತ್ತಾ ಇತ್ತು. ಆದರೆ ತಾಯಿ ಅಲುಗಾಡದೆ ಇದ್ದಾಗ ಹಿಂದೆ ಮುಂದೆ ಓಡಾಡುತ್ತಾ ಅಲ್ಲೇ ರೋಧಿಸತೊಡಗಿದ್ದನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುವಂತಿತ್ತು.
ಇದನ್ನು ನೋಡಿದ ಜನರ ಹೃದಯ ಕರಗದೇ ಇರಲು ಸಾಧ್ಯವೆ? ಹತ್ತಿರ ಬಂದ ಜನ ಹನುಮ ಸ್ವರೂಪಿ ಕೋತಿಗೆ ಹೂವು, ಅರಿಶಿನ, ಕುಂಕುಮ ಹಚ್ಚಿ ಅಂತ್ಯಕ್ರಿಯೆ ನಡೆಸಿದರು. ಮರಿಕೋತಿಯನ್ನು ಅಲ್ಲಿಂದ ಓಡಿಸಲು ಮಾಡಿದ ಯತ್ನ ಫಲಪ್ರದವಾಗಲಿಲ್ಲ. ಅದು ರೋಧಿಸುತ್ತಲೇ ಇತ್ತು. ಇದನ್ನು ಕಂಡ ವ್ಯಕ್ತಿಯೊಬ್ಬರ ಮನಕರಗಿ ಸಾಕಲು ತಾವೇ ಮನೆಗೆ ಕೊಂಡೊಯ್ದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications