ಐಆರ್ಸಿಟಿಸಿಯಿಂದ 15 ದಿನಗಳ 'ನಾರ್ತ್ ಈಸ್ಟ್ ಡಿಸ್ಕವರಿ' ಪ್ಯಾಕೇಜ್, ವಿವರ
ಈಶಾನ್ಯ ರಾಜ್ಯಗಳು ರಮಣೀಯವಾದ ನೈಸರ್ಗಿಕ ಸೌಂದರ್ಯ, ಹಿತಕರವಾದ ಹವಾಮಾನ, ಶ್ರೀಮಂತ ಜೀವವೈವಿಧ್ಯ, ಅಪರೂಪದ ವನ್ಯಜೀವಿಗಳು, ಐತಿಹಾಸಿಕ ತಾಣಗಳನ್ನು ಹೊಂದಿದೆ.
ಬೆಂಗಳೂರು, ಮಾರ್ಚ್ 4: ಐಆರ್ಸಿಟಿಸಿ ಈಶಾನ್ಯ ಭಾರತ ಪ್ರವಾಸ ಪ್ಯಾಕೇಜ್ ಅನ್ನು ಆರಂಭಿಸಿದೆ. ಇದು ಭಾರತದ ಈಶಾನ್ಯ ಗಡಿಭಾಗದ ರಾಜ್ಯಗಳನ್ನು ಒಳಗೊಂಡ ಪ್ರದೇಶಗಳಿಗೆ ರೈಲನ್ನು ಓಡಿಸಲಿದೆ. ಇದು ಈಶಾನ್ಯ ಭಾರತದ ರಮಣೀಯ ದೃಶ್ಯ ಪ್ರದೇಶಗಳನ್ನು ಒಳಗೊಂಡಿದೆ.
ಐಆರ್ಸಿಟಿಸಿಯ ಪ್ರಕಾರ, ಈಶಾನ್ಯ ರಾಜ್ಯಗಳು ರಮಣೀಯವಾದ ನೈಸರ್ಗಿಕ ಸೌಂದರ್ಯ, ಹಿತಕರವಾದ ಹವಾಮಾನ, ಶ್ರೀಮಂತ ಜೀವವೈವಿಧ್ಯ, ಅಪರೂಪದ ವನ್ಯಜೀವಿಗಳು, ಐತಿಹಾಸಿಕ ತಾಣಗಳು, ಜನಾಂಗೀಯ ಪರಂಪರೆ ಮತ್ತು ಮುಖ್ಯವಾಗಿ ಜನರನ್ನು ಸ್ವಾಗತಿಸುವ ಮಿಶ್ರಣವಾಗಿದೆ. ಈ ರೈಲು ಪ್ರಯಾಣವು 15 ದಿನಗಳ ಅವಧಿಯಲ್ಲಿ ಇವೆಲ್ಲವನ್ನೂ ಪ್ರವಾಸಿಗರು ನೋಡಬಹುದಾಗಿದೆ.
ಇದು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಯೋಜನೆಯ ಭಾಗವಾಗಿದ್ದು, ದೇಶೀಯ ಪ್ರವಾಸೋದ್ಯಮದಲ್ಲಿ ವಿಶೇಷ ಆಸಕ್ತಿಯ ಸರ್ಕ್ಯೂಟ್ಗಳನ್ನು ಉತ್ತೇಜಿಸಲು ಭಾರತ ಸರ್ಕಾರದ ಉಪಕ್ರಮ ದೇಖೋ ಅಪ್ನಾ ದೇಶ್ಗೆ ಅನುಗುಣವಾಗಿದೆ. ಪ್ರವಾಸೋದ್ಯಮವನ್ನು ಮಿಷನ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಕುರಿತು ಬಜೆಟ್ ನಂತರದ ವೆಬ್ನಾರ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕರಾವಳಿ, ಬೀಚ್, ಮ್ಯಾಂಗ್ರೋವ್, ಹಿಮಾಲಯನ್, ಸಾಹಸ, ವನ್ಯಜೀವಿ, ಪರಿಸರ, ಪರಂಪರೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮ ಸೇರಿದಂತೆ ಪ್ರವಾಸೋದ್ಯಮಕ್ಕೆ ಭಾರತವು ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದರು.
ಹೆಚ್ಚಿನ ಆದಾಯದ ಗುಂಪುಗಳಿಗೆ ಪ್ರವಾಸೋದ್ಯಮವು ಅಲಂಕಾರಿಕ ಪದ ಎಂದು ಕೆಲವರು ಭಾವಿಸುತ್ತಾರೆ. ಆದರೆ ಭಾರತದಲ್ಲಿ ಇದು ಸುದೀರ್ಘ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದ್ದರು. ಐಆರ್ಸಿಟಿಸಿಯ ಈ ಈಶಾನ್ಯ ಪ್ಯಾಕೇಜ್ 14 ರಾತ್ರಿಗಳು/ 15 ದಿನಗಳ ಪ್ರವಾಸವು ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯ ಸೇರಿದಂತೆ ರಾಜ್ಯಗಳನ್ನು ಒಳಗೊಂಡಿದೆ.
ಪ್ರವಾಸವು ದೆಹಲಿಯಿಂದ (ಡಿಎಸ್ಜೆ) ಪ್ರಾರಂಭವಾಗುತ್ತದೆ ಮತ್ತು ನಂತರ ಗುವಾಹಟಿ - ನಹರ್ಲಾಗುನ್ - ಸಿಬ್ಸಾಗರ್ ಟೌನ್ - ಫರ್ಕಟಿಂಗ್ - ಕುಮಾರ್ಘಾಟ್ - ಅಗರ್ತಲಾ - ದಿಮಾಪುರ್ - ಗುವಾಹಟಿಗೆ ಮುಂದುವರಿಯುತ್ತದೆ. ಬೋರ್ಡಿಂಗ್/ಡಿ-ಬೋರ್ಡಿಂಗ್ ಸ್ಥಳಗಳು: ದೆಹಲಿ, ಗಾಜಿಯಾಬಾದ್, ಅಲಿಗಢ, ತುಂಡ್ಲಾ, ಇಟಾವಾ, ಕಾನ್ಪುರ್, ಲಕ್ನೋ ಮತ್ತು ವಾರಣಾಸಿ ಆಗಿರುತ್ತದೆ.
ಐಆರ್ಸಿಟಿಸಿ ಪ್ರಕಾರ, ಭಾರತ್ ಗೌರವ್ ರೈಲು ಯೋಜನೆಯಡಿಯಲ್ಲಿ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ರೈಲ್ವೇಯು ಸರಿಸುಮಾರು 33 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. ಕೆಳಗಿನ ಬೆಲೆಗಳು ರಿಯಾಯಿತಿಯನ್ನು ಒಳಗೊಂಡಿವೆ. ಇದು 3 ವಿಧದ ಪ್ಯಾಕೇಜ್ ಇರುತ್ತದೆ 1ಎಸಿ (ಕೂಪೆ), 1ಎಸಿ (ಕ್ಯಾಬಿನ್) ಮತ್ತು 2ಎಸಿ ಮಾದರಿಗಳು.
ಪ್ಯಾಕೇಜ್ ಬೆಲೆಗಳು
ಡಬಲ್ ಶೇರಿಂಗ್ 1ಎಸಿಸ (ಕೂಪೆ) ಬೆಲೆ ₹1,49,290. 1ಎಸಿ (ಕ್ಯಾಬಿನ್) ವೆಚ್ಚವು ಸಿಂಗಲ್, ಡಬಲ್ ಮತ್ತು ಟ್ರಿಪಲ್ ಆಕ್ಯುಪೆನ್ಸಿಯನ್ನು ಅವಲಂಬಿಸಿ ₹1,50,100- ₹1,29,400 ವರೆಗೆ ಇರುತ್ತದೆ. 2ಎಸಿಗೆ ವೆಚ್ಚವು ₹1,25,090 ರಿಂದ ₹1,04,390 ವರೆಗೆ ಇರುತ್ತದೆ. 1ಎಸಿ (ಕ್ಯಾಬಿನ್) ಗಾಗಿ ಹಾಸಿಗೆ ಇರುವ ಮಕ್ಕಳ ಬೆಲೆ ₹1,24,350 ಮತ್ತು ಬೆಡ್ ಇಲ್ಲದ ಬೆಲೆ ₹1,21,760. 2ಎಸಿಗೆ ಹಾಸಿಗೆ ಇರುವ ಮಕ್ಕಳ ಬೆಲೆ ₹99,350 ಮತ್ತು ಬೆಡ್ ಇಲ್ಲದ ಬೆಲೆ ₹96,750 ಆಗಿರುತ್ತದೆ.

ಪ್ರವಾಸದ ಸಮಯದಲ್ಲಿ ಒಳಗೊಂಡಿರುವ ಸ್ಥಳಗಳು ಇಂತಿವೆ
ಅಸ್ಸಾಂ: ಕಾಮಾಖ್ಯ ದೇವಾಲಯ, ಪ್ರಬಲವಾದ ಬ್ರಹ್ಮಪುತ್ರ ನದಿಯ ಮೇಲೆ ಸೂರ್ಯಾಸ್ತದ ವಿಹಾರ, ಗುವಾಹಟಿಯಲ್ಲಿ ಉಮಾನಂದ ದೇವಾಲಯ, ಅಹೋಮ್ ಸಾಮ್ರಾಜ್ಯದ ರಾಜಧಾನಿ ಶಿವಸಾಗರ್. ಶಿವ ದೇವಾಲಯ, ಅಹೋಮ್ ಅರಮನೆಗಳು ಮತ್ತು ಸ್ಮಾರಕಗಳು, ಜೋರ್ಹತ್ನಲ್ಲಿರುವ ಅಸ್ಸಾಂ ಟೀ ಎಸ್ಟೇಟ್ಗಳು, ಕಾಜಿರಂಗ ರಾಷ್ಟ್ರೀಯ ಉದ್ಯಾನವನ (ಒಂದು ಕೊಂಬಿನ ಘೇಂಡಾಮೃಗಗಳು, ಹುಲಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ) ಹೆಸರುವಾಸಿಯಾಗಿದೆ.

ಅರುಣಾಚಲ ಪ್ರದೇಶದ ಇಟಾನಗರ ಭೇಟಿ
ಅರುಣಾಚಲ ಪ್ರದೇಶ: ಇಟಾನಗರ. ತ್ರಿಪುರ: ಶೈವ ತಾಣವಾದ ಉನಕೋಟಿಯು ತನ್ನ ಕಲ್ಲಿನ ಕೆತ್ತನೆಗಳು ಮತ್ತು ಭಿತ್ತಿಚಿತ್ರಗಳಿಗೆ ಹೆಸರುವಾಸಿಯಾಗಿದೆ. ಉಜ್ಜಯಂತ ಅರಮನೆ ಮತ್ತು ಸುಂದರವಾದ ನೀರಮಹಲ್ - ಈಶಾನ್ಯದಲ್ಲಿರುವ ಏಕೈಕ ಸರೋವರ ಅರಮನೆ, ತ್ರಿಪುರ ಸುಂದರಿ (ಶಕ್ತಿ ದೇವಾಲಯ). ನಾಗಾಲ್ಯಾಂಡ್: ಕೊಹಿಮಾದ ರಾಜಧಾನಿ ಖೋನೋಮಾ ಗ್ರಾಮ. ಮೇಘಾಲಯ: ಜಲಪಾತಗಳು, ರೂಟ್ ಬ್ರಿಡ್ಜ್ ಮತ್ತು ಗುಹೆಗಳು, ಶಿಲ್ಲಾಂಗ್ ಮತ್ತು ಚಿರಾಪುಂಜಿಯನ್ನು ಆವರಿಸಲಾಗುತ್ತದೆ.

ಪ್ಯಾಕೇಜ್ ಬಗ್ಗೆ ಸಂಕ್ಷೀಪ್ತ ಮಾಹಿತಿ
ಆಯಾ ತರಗತಿಯಲ್ಲಿ ವಿಶೇಷ ಪ್ರವಾಸಿ ರೈಲು ಮೂಲಕ ರೈಲು ಪ್ರಯಾಣ. 5 ರಾತ್ರಿಗಳು ಉತ್ತಮ ಗುಣಮಟ್ಟದ ಲಭ್ಯವಿರುವ ವಸತಿ ಸೌಕರ್ಯಗಳಲ್ಲಿ ತಂಗಬಹುದು. ಗುವಾಹಟಿಯಲ್ಲಿ 1 ರಾತ್ರಿ, ಕಾಜಿರಂಗದಲ್ಲಿ 1 ರಾತ್ರಿ, ಅಗರ್ತಲಾದಲ್ಲಿ 1 ರಾತ್ರಿ, ಕೊಹಿಮಾದಲ್ಲಿ 1 ರಾತ್ರಿ, ಶಿಲ್ಲಾಂಗ್ನಲ್ಲಿ 1 ರಾತ್ರಿ ವಾಸ್ತವ್ಯ. 9 ರಾತ್ರಿಯ ರೈಲು ಪ್ರಯಾಣದ ಸಮಯದಲ್ಲಿ ಆಯಾ ರೈಲು ಬೋಗಿಗಳಲ್ಲಿ ರಾತ್ರಿ ತಂಗುವುದು. ಆನ್ಬೋರ್ಡ್ ರೈಲು ಊಟ (ಸಸ್ಯಾಹಾರಿ ಮಾತ್ರ), ಡೈನಿಂಗ್ ಕೋಚ್ಗಳಲ್ಲಿ ಬಡಿಸಲಾಗುತ್ತದೆ. ಉತ್ತಮ ಗುಣಮಟ್ಟದ ಹೋಟೆಲ್ಗಳಲ್ಲಿ ಆಫ್ ಬೋರ್ಡ್ ಊಟ.

ಎಸಿ ವಾಹನಗಳಲ್ಲಿ ಎಲ್ಲೆಡೆ ಸಂಚಾರ
ಎಸಿ ವಾಹನಗಳಲ್ಲಿ ಎಲ್ಲಾ ಸಂಚಾರಗಳು ಮತ್ತು ದೃಶ್ಯವೀಕ್ಷಣೆ ಇರುತ್ತದೆ. ಅಲ್ಲದೆ ಬ್ರಹ್ಮಪುತ್ರ ನದಿ ವಿಹಾರ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ ಇರುತ್ತದೆ. ಪ್ರಯಾಣಿಕರಿಗೆ ಪ್ರಯಾಣ ವಿಮೆ ಇರುತ್ತದೆ. ಅಗತ್ಯ ಸಹಾಯಕ್ಕಾಗಿ ಐಆರ್ಸಿಟಿಸಿ ಟೂರ್ ಮ್ಯಾನೇಜರ್ಗಳು ಪ್ರವಾಸದ ಉದ್ದಕ್ಕೂ ಪ್ರಯಾಣ. ರೈಲಿನಲ್ಲಿ ಭದ್ರತೆ ಇರುತ್ತದೆ.












Click it and Unblock the Notifications