Get Updates
Get notified of breaking news, exclusive insights, and must-see stories!

ತಲಕಾಡು ಪಂಚಲಿಂಗ ದರ್ಶನಕ್ಕೆ ದಾರಿ

P Manivannan
ಮೈಸೂರು, ನ.12 :ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆಯಲಿರುವ ಪಂಚಲಿಂಗದರ್ಶನದಲ್ಲಿ ಭಾಗವಹಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನವೆಂಬರ್ 13 ರಿಂದ 27ರವರೆಗೆ ಈ ಕೆಳಕಂಡ ಮಾರ್ಗಗಳಲ್ಲಿ ಏಕಮುಖ ಸಂಚಾರವನ್ನು ಹಾಗೂ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ ಮಣಿವಣ್ಣನ್ ಅವರು ಆದೇಶ ಹೊರಡಿಸಿದ್ದಾರೆ.

ಏಕಮುಖ ಸಂಚಾರದ ಮಾರ್ಗಗಳು:
ಮೈಸೂರು - ಟಿ. ನರಸೀಪುರ ರಸ್ತೆ ಮಾರ್ಗವಾಗಿ ಬರುವ ವಾಹನಗಳು ವಡೆಯಾಂದಳ್ಳಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಲಕಾಡು - ಪೋಲೀಸ್ ಠಾಣೆ - ಅರ್ಕೇಶ್ವರ ದೇವಸ್ಥಾನ - ವಿಜಾಪುರ - ಟಿ. ಮೇಗಡಹಳ್ಳಿ - ಕಾಳಬಸವನಹುಂಡಿ ಗ್ರಾಮ ಮಾರ್ಗವಾಗಿ ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಏಕಮುಖವಾಗಿ ಸಂಚರಿಸುವುದು.

ಬೆಳಕವಾಡಿ ಮಾರ್ಗವಾಗಿ ಬರುವ ವಾಹನಗಳು ಅರ್ಕೇಶ್ವರ ದೇವಸ್ಥಾನದ ಕಡೆಯಿಂದ ಬಲಕ್ಕೆ ತಿರುಗಿ ವಿಜಾಪುರ ಗ್ರಾಮದ ಮುಖಾಂತರ ಮುಡುಕುತೊರೆಗೆ ಹೋಗುವಂತೆ ಏಕಮುಖವಾಗಿ ಸಂಚರಿಸುವುದು.

ಎಲ್ಲಾ ವಾಹನಗಳ ಸಂಚಾರ ನಿರ್ಬಂದ ಮಾರ್ಗಗಳು:
ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಹಳೇಬೀದಿ, ವೈದ್ಯನಾಥೇಶ್ವರ ದೇವಸ್ಥಾನದ ಸುತ್ತಮುತ್ತ ಮತ್ತು ತಲಕಾಡು ಕಾವೇರಿ ಸ್ನಾನಘಟ್ಟದವರೆಗೆ ಹಾಗೂ ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಕೆ.ಇ.ಬಿ. ವೃತ್ತದವರೆಗೆ (ತಲಕಾಡು ಮುಖ್ಯ ರಸ್ತೆಯಿಂದ).

(ದಟ್ಸ್ ಕನ್ನಡವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+