ನಾಗದೋಷ ಎಂದರೇನು, ಅದರಿಂದ ಪಾರಾಗುವುದು ಹೇಗೆ?

ಸುಬ್ರಮಣ್ಯ, ಕಾಳಸರ್ಪ ಮತ್ತು ಕುಜದೋಷ ತೊಂದರೆ ಇರುವವರಿಗೆ ಪರಿಹಾರ ನೀಡುವ ದೇವರು ಎನ್ನುವುದು ಪ್ರತೀತಿ. ಈ ಪೂಜೆಯ ವಿಧಿ ನಿಯಮದಂತೆ ಎಂಟು ಜಾತಿಯ ನಾಗಗಳಾದ ಸರ್ಪ, ಅನಂತ, ಶೇಷ, ಕಪಿಲಾ, ನಾಗ, ಕಾರ್ಕೋಟಕ, ಶಂಖಪಾಲ ಮತ್ತು ಭೂದರ ಇವರುಗಳಿಗೆ ಪ್ರಧಾನ ಹೋಮ, ಕಳಸಪೂಜೆ, ನವಶಕ್ತಿ ಪೂಜೆ, ಮಂಡಲ ಪೂಜೆ ಮುಂತಾದ ಹದಿನಾರು ರೀತಿಯ ಪೂಜೋಪಚಾರಗಳ ಮೂಲಕ ಬಲಿದಾನ ಕೊಡಲಾಗುವುದು.
ಈ ಪೂಜೆಯಲ್ಲಿ ಒಟ್ಟು ಎರಡು ಮಂಡಲವನ್ನು ಬರೆಯಲಾಗುವುದು. ಬಲಬದಿಯಲ್ಲಿ ಒಂಬತ್ತು ಚೌಕಗಳು ಮತ್ತು ಎಡಮಂಡಲದ ಸುತ್ತ ನಾಗದೇವರ ಶರೀರದ ರಚನೆ ಮತ್ತು ತುದಿಯಲ್ಲಿ ಹೆಡೆಯ ಚಿತ್ರ ವಿರುತ್ತದೆ. ಬಲಬದಿಯ ಮಂಡಲದಲ್ಲಿರುವ ಒಂಬತ್ತು ಚೌಕಗಳಲ್ಲಿ ಒಂಬತ್ತು ಪ್ರಧಾನ ದೇವತೆಗಳನ್ನು ಆಹ್ವಾನಿಸಲಾಗುವುದು. ಮಂಡಲದ ಮಧ್ಯೆ 52 ಚೌಕಗಳಲ್ಲಿ ನಾಗದೇವರ ವಿವಿಧ ಅವತಾರಗಳ ಸ್ಥಾನವಿರುತ್ತದೆ.
ಮೊದಲ ಮಂಡಲದ 9 ಮತ್ತು ಎರಡನೇ ಮಂಡಲದ 76 ಸ್ಥಾನಗಳಲ್ಲಿ ಕಲ್ಪೋಕ್ತ ಪೂಜೆ ಮುಂತಾದ ವಿಧಿವಿಧಾನ ನಡೆದು, ಪ್ರತಿಯೊಂದು ಚೌಕದಲ್ಲೂ ದರ್ಭೆಯ ಮೇಲೆ ಪಿಂಡ ಅದರ ಮೇಲೆ ಅಪ್ಪ(ಒಂದು ಬಗೆಯ ಭಕ್ಷ್ಯ) ಮತ್ತು ತುಪ್ಪದ ದೀಪ ಮತ್ತು ಹೂವು ಇಡಲಾಗುವುದು. ಶ್ರದ್ದೆ, ಭಕ್ತಿಯಿಂದ ಯಾರು ಆಶ್ಲೇಷ ಪೂಜೆ ನಡೆಸುತ್ತಾರೋ ಅವರ ಎಲ್ಲಾ ಮನದಾಸೆಯನ್ನು ಸುಬ್ರಮಣ್ಯ ನಾಗದೇವರು ನಡೆಸಿ ಕೊಡುತ್ತಾರೆನ್ನುವುದು ನಂಬಿಕೆ.
ರಾಜ್ಯದ ಪ್ರಮುಖ ಸುಬ್ರಮಣ್ಯ ದೇವಾಲಯಗಳು : ಕುಕ್ಕೆ ಸುಬ್ರಮಣ್ಯ ದೇವಾಲಯ, ಕುಡುಪು ಅನಂತಪದ್ಮನಾಭ ದೇವಾಲಯ (ದಕ್ಷಿಣಕನ್ನಡ ಜಿಲ್ಲೆ), ಘಾಟಿ ಸುಬ್ರಮಣ್ಯ ದೇವಾಲಯ, ಮುಚ್ಚಿಲಕೋಡು ಸುಬ್ರಮಣ್ಯ ದೇವಾಲಯ (ಉಡುಪಿ ಜಿಲ್ಲೆ), ಖಡ್ಗೆಶ್ವರಿ ಮೂಲ (ಉಡುಪಿ ಜಿಲ್ಲೆ, ಪಡುಬಿದ್ರೆ ಬಲಿ, ಧಕ್ಕೆದಬಲಿ ಎಂದು ಜನಪ್ರಿಯ), ಹಾದಿಗಲ್ಲು (ಶಿವಮೊಗ್ಗ ಜಿಲ್ಲೆ) ಬೆಂಗಳೂರು ಸಜ್ಜನರಾವ್ ವೃತ್ತದ ಸುಬ್ರಮಣ್ಯ ಸ್ವಾಮಿ ದೇವಾಲಯ, ಹನುಮಂತನಗರದ ಕುಮಾರಸ್ವಾಮಿ ದೇವಾಲಾಯ ಇತ್ಯಾದಿ..
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications