ODI World Cup 2023: ಕನ್ನಡಿಗ ಸೇರಿ ಈ ಮೂವರಿಗೆ ಇನ್ನೂ ಇದೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ!

ಅಕ್ಟೋಬರ್ 5ರಿಂದ ಆರಂಭವಾಗಲಿರವ ಏಕದಿನ ವಿಶ್ವಕಪ್‌ಗೆ ಬಿಸಿಸಿಐ ಈಗಾಗಲೇ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಸಂಜು ಸ್ಯಾಮ್ಸನ್, ಹಿರಿಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್, ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಶ್ವಿನ್‌ಗೆ ಅಪಾರ ಅನುಭವ ಇದ್ದು ಭಾರತದಲ್ಲಿ ವಿಶ್ವಕಪ್ ನಡೆಯುವಾಗ ಅವರ ಅಗತ್ಯ ತಂಡಕ್ಕಿದೆ ಎಂದು ವಾದ ಮಾಡಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಕೂಡ ಆಯ್ಕೆದಾರರು ಅನ್ಯಾಯ ಮಾಡಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

World Cup 2023 Remains a Possibility for Sanju Samson, Ashwin, and Prasidh Krishna

ಆದರೆ, ಈ ಮೂವರಿಗೆ ಏಕದಿನ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಇನ್ನೂ ಇದೆ. ಅಭಿಮಾನಿಗಳು ಈಗಲೇ ಬೇಸರ ಪಡುವಂತಿಲ್ಲ ಎಂದು ಹೇಳಲಾಗಿದೆ. ವಿಶೇಷ ಎಂದರೆ ಈ ಮೂವರು ಆಟಗಾರರು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡುತ್ತಾರೆ.

ಮಂಗಳವಾರ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಏಕದಿನ ವಿಶ್ವಕಪ್‌ಗೆ ತಂಡವನ್ನು ಘೋಷಿಸಿದ್ದರೂ, ಕೊನೆಯ ಕಟ್-ಆಫ್ ದಿನಾಂಕ ಸೆಪ್ಟೆಂಬರ್ 27 ಆಗಿದೆ. ಭಾರತವು ಆ ದಿನಾಂಕದೊಳಗೆ ತಂಡವನ್ನು ಬದಲಾಯಿಸುವ ಅವಕಾಶ ಇದೆ. ಅಷ್ಟರೊಳಗೆ ಈ ಮೂವರು ಭಾರತ ತಂಡಕ್ಕೆ ವಾಪಸಾದರೂ ಅಚ್ಚರಿ ಪಡಬೇಕಿಲ್ಲ.

ರೋಹಿತ್ ಶರ್ಮಾ ಹೇಳಿದ್ದೇನು?

"ಅನೇಕ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿರುವುದು ಉತ್ತಮ ವಿಚಾರ, ಇದರಿಂದ ಸವಾಲು ಹೆಚ್ಚಾಗುತ್ತವೆ. ಆದರೆ ಯಾರು ಫಾರ್ಮ್‌ನಲ್ಲಿದ್ದಾರೆ, ಎದುರಾಳಿ ಯಾರು ಮತ್ತು ಆ ಸಂದರ್ಭಗಳಲ್ಲಿ ಯಾವ ಆಟಗಾರ ಹೆಚ್ಚು ಲಾಭ ಪಡೆಯುತ್ತಾರೆ ಎಂಬುದನ್ನು ನಾವು ನೋಡಬೇಕು. ಇದು ಎಲ್ಲಾ ಸಮಯದಲ್ಲೂ ನಡೆಯುತ್ತದೆ. ತಂಡಕ್ಕೆ ಬೇಕಾದುದನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನೀವು ಕಠಿಣ ಆಯ್ಕೆಗಳನ್ನು ಮಾಡಬೇಕೆಂದು ನಾವು ಕ್ರಿಕೆಟ್‌ನಲ್ಲಿ ನೋಡಿದ್ದೇವೆ" ಎಂದು ರೋಹಿತ್ ಶರ್ಮಾ ತಂಡವನ್ನು ಘೋಷಿಸಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಾಲ್ವರು ಮೀಸಲು ಆಟಗಾರರು!

ಸಂಜು ಸ್ಯಾಮ್ಸನ್ ಬೆಂಬಲಿಗರಿಗೆ ಒಂದು ಸಂತಸದ ಸುದ್ದಿಯಿದೆ. ಅವರು ಇನ್ನೂ ತಂಡಕ್ಕೆ ಬರಬಹುದು, ಆದರೆ ಗಾಯದ ಸಂದರ್ಭದಲ್ಲಿ ಮಾತ್ರ. ವಿಶ್ವಕಪ್ 2023 ರ ಮೊದಲು ಅಂತಿಮ ತಯಾರಿಯಾಗಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲು ಸಂಜು ಸ್ಯಾಮ್ಸನ್ ತಂಡದಲ್ಲಿರುವುದು ಅಸಂಭವವಾದರೂ, ಯಾರಾದರೂ ಗಾಯಗೊಂಡರೆ ಅವರು ನೇರವಾಗಿ ತಂಡಕ್ಕೆ ಬರಲಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಮೂಲತಃ ಯಾರನ್ನೂ ಹೆಸರಿಸದಿದ್ದರೂ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ರವಿಚಂದ್ರನ್ ಅಶ್ವಿನ್, ತಿಲಕ್ ವರ್ಮಾ ಮೀಸಲು ಆಟಗಾರರಾಗಿದ್ದಾರೆ. ಭಾರತ ತಂಡ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಕಾರಣ ಮೀಸಲು ಆಟಗಾರರ ಹೆಸರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಈ ನಾಲ್ವರೇ ಪರ್ಯಾಯ ಆಯ್ಕೆಯಾಗಿದ್ದು ತಂಡಕ್ಕೆ ಸೇರ್ಪಡೆಯಾಗುವ ಅವಕಾಶ ಹೆಚ್ಚಾಗಿದೆ. ಆದರೆ, ಇದು ತಂಡದಲ್ಲಿರುವ ಆಟಗಾರ ಗಾಯಗೊಂಡರೆ ಮಾತ್ರ ಎನ್ನುವುದು ನೆನಪಿಡಬೇಕಾದ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+