Hardik Pandya: ಮತ್ತೆ ಒಂದಾಗ್ತಾರಾ ಸ್ಟಾರ್ ಕಪಲ್: ಹೀಗೊಂದು ಅನುಮಾನ ಮೂಡಿದ್ದು ಏಕೆ?
ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸದ್ಯ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿದ್ದಾರೆ. ಸದ್ಯ ಹಾರ್ದಿಕ್ ಅವರ ಆಟಕ್ಕಿಂತಲೂ ಅವರ ವ್ಯಯಕ್ತಿಕ ಜೀವನ ತುಂಬ ಚರ್ಚೆಯ ವಿಷಯವಾಗಿದೆ. ಹಾರ್ದಿಕ್ ಪಾಂಡ್ಯ ತಮ್ಮ ಹಾಗೂ ನತಾಶಾ ಸ್ಟಾಂಕೋವಿಕ್ ಸಂಬಂಧ ಸರಿಯಾಗಿಲ್ಲ ಎಂಬುದನ್ನು ಸ್ವತಃ ಅವರೇ ತಿಳಿಸಿದ್ದರು.
ಆದರೆ ಈಗ ಒಂದು ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾರ್ದಿಕ್ ಹಾಗೂ ನತಾಶ್ ಅವರ ಮಧ್ಯೆ ಎಲ್ಲವೂ ಸರಿಯಾಗಿಯೇ ಇದೆಯಾ ಎಂಬ ಗುಸುಗುಸು ಆರಂಭವಾಗಿದೆ. ಅದಕ್ಕೆ ಕಾರಣವಾಗಿದ್ದೆ ಆ ಒಂದು ಪೋಸ್ಟ್..

ವೈರಲ್ ಫೊಟೋ
ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ದಾಂಪತ್ಯದಲ್ಲಿ ಬಿರುಕು ಇರುವದನ್ನು ಧೃಡ ಪಡಿಸಿದ್ದರು. ಆದರೆ, ಈ ಸಂಬಂಧ ಮುರಿದು ಬೀಳಲು ಕಾರಣ ತಿಳಿದುಬಂದಿಲ್ಲ. ನತಾಶಾ ಸ್ಟಾಂಕೋವಿಕ್ ಕೂಡ ಇತ್ತೀಚೆಗೆ ಮಗ ಅಗಸ್ತ್ಯನೊಂದಿಗೆ ಸರ್ಬಿಯಾಕ್ಕೆ ಮರಳಿದ್ದರು. ಅಂದಿನಿಂದ ನತಾಶಾ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮನದಾಳದಲ್ಲಿ ಅಡಗಿದ್ದ ಭಾವನೆಗಳಿಗೆ ಅಕ್ಷರ ರೂಪ ನೀಡುತ್ತಲೆ ಬಂದಿದ್ದಾರೆ. ಆದರೆ ಈಗ ಅವರ ಪೋಸ್ಟ್ಗಳಲ್ಲಿ ಒಂದನ್ನು ಅಭಿಮಾನಿಗಳು ಸೆಳೆದಿದ್ದಾರೆ.
ನತಾಶಾ ತನ್ನ Instagram ಖಾತೆಯಲ್ಲಿ ಮ್ಯೂಸಿಯಂ ಭೇಟಿಯ ಅನೇಕ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಹಾರ್ದಿಕ್ ಈ ಚಿತ್ರಗಳನ್ನು ಲೈಕ್ ಮಾಡಿ ಒಂದಲ್ಲ ಎರಡಲ್ಲ ಕಮೆಂಟ್ ಮಾಡಿದ್ದಾರೆ. ಈ ಎರಡೂ ಕಾಮೆಂಟ್ಗಳು ಎಮೋಜಿಗಳನ್ನು ಹೊಂದಿದ್ದವು.
ಹೆಚ್ಚು ಲೈಕ್, ಕಮೆಂಟ್
ಮೊದಲ ಕಾಮೆಂಟ್ನಲ್ಲಿ ಹಾರ್ದಿಕ್ ದುಷ್ಟ ಕೋಪದಂತೆ ಕಾಣುವ ಎಮೋಜಿಯನ್ನು ಸೇರಿಸಿದರು ಮತ್ತು ಎರಡನೆಯದರಲ್ಲಿ ಅವರು ಹೃದಯ ಮತ್ತು ಸೂಪರ್ ಚಿಹ್ನೆಯನ್ನು ಸೇರಿಸಿದರು. ನತಾಶಾ ಅವರ ಫೋಟೋಗೆ ಹಾರ್ದಿಕ್ ಪಾಂಡ್ಯ ಅವರ ಸಹೋದರ ಕೃನಾಲ್ ಪಾಂಡ್ಯ ಕೂಡ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ. ಅವರು ಕಾಮೆಂಟ್ ಬಾಕ್ಸ್ನಲ್ಲಿ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

ನತಾಶಾ ಅವರ ಪೋಸ್ಟ್ಗೆ ಹಾರ್ದಿಕ್ ಮತ್ತು ಕೃನಾಲ್ ಅವರ ಕಾಮೆಂಟ್ ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಸುಮಾರು 5500 ಕಾಮೆಂಟ್ಗಳು ಬಂದಿವೆ. ಹಾರ್ದಿಕ್ ಅವರ ಕಾಮೆಂಟ್ಗಳನ್ನೇ 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 4 ವರ್ಷಗಳ ಕಾಲ ದಾಂಪತ್ಯ ಜೀವವನ್ನು ನಡೆಸಿದ್ದಾರೆ.
ಕೋವಿಡ್ ವೇಳೆ ಮದುವೆ ಆಗಿದ್ದರಿಂದ, ಸಂಭ್ರಮಾಚರಣೆಗೆ ಅಡಚಣೆ ಆಗಿತ್ತು. ಹೀಗಾಗಿ ಕಳೆದ ವರ್ಷ ಇಬ್ಬರೂ ಉದಯಪುರದಲ್ಲಿ ಮತ್ತೆ ವಿವಾಹವಾದರು. ಆದಾಗ್ಯೂ, ಅದೇ ಅವಧಿಯಲ್ಲಿ, ಅವರ ಮಗ ಅಗಸ್ತ್ಯನೂ ಜನಿಸಿದನು. ನತಾಶಾ ಸ್ಟಾಂಕೋವಿಕ್ ಒಬ್ಬ ಖ್ಯಾತ ರೂಪದರ್ಶಿ. ಅವರು ಅನೇಕ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೆ ಈಗ ಅವರ ತವರಿಗೆ ಮರಳಿದ್ದಾರೆ.
ಶ್ರೀಲಂಕಾ ಪ್ರವಾಸ
ಶ್ರೀಲಂಕಾ ಪ್ರವಾಸಕ್ಕಾಗಿ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಸೇರ್ಪಡೆಗೊಂಡಿದ್ದಾರೆ. ಆದರೂ ಅವರನ್ನು ನಾಯಕನನ್ನಾಗಿ ಮಾಡಿಲ್ಲ. ಟಿ-20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ ಕೈಗೆ ನೀಡಲಾಗಿದೆ. ಆದರೆ ಏಕದಿನದಲ್ಲಿ ರೋಹಿತ್ ಶರ್ಮಾ ನಾಯಕರಾಗಲಿದ್ದಾರೆ. ಹಾರ್ದಿಕ್ ಇನ್ನು ಫಿಟ್ನೆಸ್ ಮೇಲೆ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications