Get Updates
Get notified of breaking news, exclusive insights, and must-see stories!

ಚುನಾವಣೆ ಗೆಲುವಿಗೆ ವರುಷ; ಮಹಾ ಸಂಕಲ್ಪ ತಿಳಿಸಿದ ಬಿವೈ ವಿಜಯೇಂದ್ರ

ಶಿವಮೊಗ್ಗ, ಮೇ 14: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿ ಒಂದು ವರ್ಷ ಕಳೆದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಚುನಾವಣೆಯಲ್ಲಿ ಸೋಲು ಕಂಡಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಚುನಾವಣೆಯಲ್ಲಿ ಹಲವಾರು ಅಭ್ಯರ್ಥಿಗಳು ಮೊದಲ ಬಾರಿಗೆ ಶಾಸಕರಾದರು. ಅವರಲ್ಲಿ ಬಿ. ವೈ. ವಿಜಯೇಂದ್ರ ಸಹ ಒಬ್ಬರು.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ 2023ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದರು. ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿದ ಅವರು ಚುನಾವಣೆಯಲ್ಲಿ 81,810 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು.

One Year For Election Result Shikaripura MLA BY Vijayendra Post

ಚುನಾವಣಾ ಫಲಿತಾಂಶ ಪ್ರಕಟಗೊಂಡು ಒಂದು ವರ್ಷವಾದ ಹಿನ್ನಲೆಯಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. 'ನನ್ನ ಕುಟುಂಬವೇ ಆಗಿರುವ ಶಿಕಾರಿಪುರದ ಸಹೃದಯ ಬಂಧುಗಳ ಧ್ವನಿಯಾಗಿ ನಿಲ್ಲುವೆ' ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಕಟಗೊಂಡ ಕೆಲವೇ ತಿಂಗಳುಗಳ ಬಳಿಕ ಬಿಜೆಪಿ ಬಿ. ವೈ. ವಿಜಯೇಂದ್ರರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಲೋಕಸಭೆ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಾಗಿದೆ. ಶಿಕಾರಿಪುರ ಕ್ಷೇತ್ರದ ಅಭಿವೃದ್ಧಿಯ ಜೊತೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯೂ ಈಗ ವಿಜಯೇಂದ್ರ ಮೇಲಿದೆ.

ವಿಜಯೇಂದ್ರ ಪೋಸ್ಟ್: ಶಿಕಾರಿಪುರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, 'ಶಿಕಾರಿಪುರದ ಮಹಾಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಇಂದಿಗೆ ಒಂದು ವರ್ಷ. ಮಾನ್ಯ BS Yediyurappa ಅವರಂತೆ ನನ್ನ ಮೇಲೂ ಅಗಾಧ ವಿಶ್ವಾಸವಿರಿಸಿ ಆಶೀರ್ವಾದ ಮಾಡಿದ್ದರ ಪ್ರತಿಫಲವೋ ಅಥವಾ ಪೂರ್ವಜನ್ಮದ ಸುಕೃತವೋ ಎಂಬಂತೆ ಜನರ ನಿರೀಕ್ಷೆಯಂತೆ ಸಾಗುವ ಹಾದಿಯಲ್ಲಿ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಮಹತ್ವದ ಜವಾಬ್ದಾರಿ ಹೆಗಲಿಗೇರಿಸಿದರು' ಎಂದು ಹೇಳಿದ್ದಾರೆ.

'ಗುರುತರ ಜವಾಬ್ದಾರಿ ಹೆಗಲಿಗೇರಿದ ಬೆನ್ನಲ್ಲೇ ರಾಜ್ಯದ ಪಕ್ಷದ ಕಾರ್ಯಕರ್ತ ಬಂಧುಗಳು ಹೇಗೆ ಸಹಕಾರ ಕೊಟ್ಟರೋ, ಅದಕ್ಕೂ ಮಿಗಿಲಾಗಿ ಶಿಕಾರಿಪುರದ ಮತದಾರ ಬಂಧುಗಳು ಅಷ್ಟೇ ಪ್ರೀತಿ, ವಿಶ್ವಾಸವಿಟ್ಟು ಬೆಂಬಲಪೂರ್ವಕವಾಗಿ ಜತೆ ನಿಂತಿದ್ದಾರೆ. ಜನಪ್ರತಿನಿಧಿಗಳಾಗಿ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವುದು ನಮ್ಮ ಕರ್ತವ್ಯ, ಅನಿರೀಕ್ಷಿತವಾಗಿ ಎದುರಾದ ಬರ ರೈತರನ್ನು, ಶ್ರಮಿಕ ವರ್ಗದ ಜನರನ್ನು ಕೊಂಚ ಬಾಧಿಸಿದೆ, ಲೋಕಸಮರ ಮುಗಿದ ಬೆನ್ನಲ್ಲೇ ಎಲ್ಲೆಡೆ ವರ್ಷಧಾರೆಯ ಸಿಂಚನ ಭೂತಾಯ ಒಡಲನ್ನು ತಂಪೆರೆಯುವ ಮೂಲಕ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿದೆ' ಎಂದು ತಿಳಿಸಿದ್ದಾರೆ.

'ಇನ್ನು ಮುಂದೆ ಉತ್ತಮ ಕಾಲದ ಆರಂಭವಾಗಲಿದೆ ಎಂಬ ಭರವಸೆಯೊಂದಿಗೆ ಸಾಗೋಣ, ನನ್ನ ಹೆಗಲ ಮೇಲೆ ಎಷ್ಟೇ ಎತ್ತರದ ಜವಾಬ್ದಾರಿ ಇದ್ದರೂ ನನ್ನ ಕುಟುಂಬವೇ ಆಗಿರುವ ಶಿಕಾರಿಪುರದ ಸಹೃದಯ ಬಂಧುಗಳ ಧ್ವನಿಯಾಗಿ ನಿಲ್ಲುವೆ, ಅಭಿವೃದ್ಧಿ ಕಾರ್ಯಗಳು ಸಾಗುತ್ತಲೇ ಇರುವಂತೆ ಕಣ್ಗಾವಲಾಗಿರುವೆ. ಶಿಕಾರಿಪುರ ಅಂದು, ಇಂದು, ಎಂದೆಂದಿಗೂ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿಯೇ ಕೊಂಡೊಯ್ಯುವುದು ನನ್ನ ಕರ್ತವ್ಯ ಹಾಗೂ ಮಹಾ ಸಂಕಲ್ಪ. ನಿಮ್ಮ ಹೃನ್ಮನಸ್ಸಿನ ಆಶೀರ್ವಾದವೇ ನನಗೆ ಶ್ರೀರಕ್ಷೆ' ಎಂದು ವಿಜಯೇಂದ್ರ ಪೋಸ್ಟ್‌ನಲ್ಲಿ ಹೇಳಿದ್ದಾರೆ.

2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಶಿಕಾರಿಪುರದ ಶಾಸಕ ಬಿ. ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. ಶಿಕಾರಿಪುರದಿಂದ ಬಿ. ವೈ. ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿದರು. ಬಿಜೆಪಿ ಪಕ್ಷ ಸಹ ಅವರಿಗೆ ಟಿಕೆಟ್ ನೀಡಿತು.

ಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ರ 81810 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಗೋಣಿ ಮಾಲತೇಶ್ 8101 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಎಸ್. ಪಿ. ನಾಗರಾಜ್ ಗೌಡ 70802 ಮತಗಳನ್ನು ಪಡೆದರು. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಸ್ಪರ್ಧೆ ಕಾರಣಕ್ಕೆ ಕ್ಷೇತ್ರದ ಚುನಾವಣೆ ರಾಜ್ಯ, ರಾಷ್ಟ್ರದ ಗಮನ ಸೆಳೆದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+