Get Updates
Get notified of breaking news, exclusive insights, and must-see stories!

ಸಿಡಿಮದ್ದು ತಾಲೀಮಿಗೆ ಬೆದರದ ಅರ್ಜುನ, ಬಲರಾಮ, ಅಭಿಮನ್ಯು...

ಮೈಸೂರು, ಅಕ್ಟೋಬರ್.01: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸುವ ದಸರಾ ಗಜಪಡೆ ಹಾಗೂ ಅಶ್ವಪಡೆ ಕುಶಾಲು ತೋಪುಗಳ ಸದ್ದಿಗೆ ಬೆದರದಿರಲೆಂದು ಕುಶಾಲುತೋಪುಗಳನ್ನು ಸಿಡಿಸುವ ಮೂಲಕ ಎರಡನೇ ಸುತ್ತಿನ ತಾಲೀಮು ನಡೆಸಲಾಯಿತು.

ಎರಡನೇ ಬಾರಿಯೂ ಅಶ್ವಪಡೆಯ ಕೆಲವು ಕುದುರೆಗಳು ಬೆದರಿದವು. ಮತ್ತೆ ಧನಂಜಯ, ಚೈತ್ರ, ದ್ರೋಣ ಬೆದರಿದವು. ಆದರೆ ಅವು ವಿಚಲಿತವಾಗಿ ಓಡುವ ಪ್ರಯತ್ನ ಮಾಡಲಿಲ್ಲ. ಮುಖ ಕೊಟ್ಟು ನಿಲ್ಲಲು ಸಾಧ್ಯವಾಗದೆ ಮುಖವನ್ನು ತಿರುಗಿಸಿದವು.

ನಗರದ ಅರಮನೆ ಮುಂಭಾಗ ಇರುವ ಕೋಟೆ ಮಾರಮ್ಮನ ದೇವಸ್ಥಾನದ ಮೈದಾನದಲ್ಲಿ ಅರ್ಜುನ ನೇತೃತ್ವದ 12 ಆನೆಗಳು ಹಾಗೂ 24 ಕುದುರೆಗಳನ್ನು ನಿಲ್ಲಿಸಿ ಅವುಗಳಿಂದ ಸ್ವಲ್ಪ ದೂರದಲ್ಲಿ ಫಿರಂಗಿಗಳನ್ನು ಸಜ್ಜುಗೊಳಿಸಿ ಮದ್ದು ತುಂಬಿ ಸಿಡಿಸಲಾಯಿತು. ಈ ಮೂಲಕ ಅಗಾಧ ಶಬ್ದವನ್ನು ಆನೆಗಳು ಮತ್ತು ಕುದುರೆಗಳಿಗೆ ಪರಿಚಯಿಸಲಾಯಿತು.

Overwhelming noise was introduced to elephants, horses

ತಾಲೀಮಿನ ವೇಳೆ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿರುವ ಧನಂಜಯ, ಚೈತ್ರ ಮತ್ತು ದ್ರೋಣ ಆನೆಗಳು ಬೆದರಿದ್ದವು. ಈ ಹಿನ್ನೆಲೆಯಲ್ಲಿ ಇಂದೂ ಕೂಡ ಈ ಆನೆಗಳನ್ನು ಪ್ರತ್ಯೇಕವಾಗಿ ನಿಲ್ಲಿಸಿ, ಒಟ್ಟು 21 ಬಾರಿ ಕುಶಾಲುತೋಪುಗಳನ್ನು ಸಿಡಿಸುವಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಯಶಸ್ವಿಯಾದರು.

Overwhelming noise was introduced to elephants, horses

ಆದರೆ ಅಗಾಧ ಶಬ್ದಕ್ಕೆ ಅರ್ಜುನ, ಬಲರಾಮ, ಅಭಿಮನ್ಯು, ವಿಜಯ, ವರಲಕ್ಷ್ಮಿ, ಗೋಪಿ ಸೇರಿದಂತೆ ದಸರಾದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಆನೆಗಳು ಕೊಂಚವೂ ವಿಚಲಿತವಾಗಲಿಲ್ಲ. ಮೂರನೇ ಸುತ್ತು ತಾಲೀಮು ಸದ್ಯದಲ್ಲೇ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+