ಬೀದಿಗೆ ಬಿದ್ದಿವೆ ನೀವೇ ಪೂಜೆ ಮಾಡಿದ ಗಜಮುಖ
ಮೈಸೂರು, ಸೆಪ್ಟೆಂಬರ್ 2 : ಗಣಪತಿ ಹಬ್ಬ ಮುಗಿದು ವಾರವೇ ಕಳೆದಿದೆ. ಗಣಪತಿ ತಂದು ಆಯ್ತು, ಪೂಜಿಸಿಯೂ ಆಯ್ತು, ತೆಗೆದುಕೊಂಡು ಅದನ್ನು ನಾಲೆಗೆ ಬಿಟ್ಟದ್ದು ಆಯ್ತು. ಈಗೇಕೆ ಇವರು ಈ ವಿಷಯವನ್ನು ಮಾತನಾಡುತ್ತಿದ್ದಾರಪ್ಪ ಎಂದು ಆಶ್ಚರ್ಯ ಪಡಬೇಡಿ. ಈ ಗಣಪತಿ ನಿಮ್ಮ ಮನೆಯಲ್ಲಿ ಪೂಜೆಗೊಂಡಿದ್ದವನೇ. ಈಗ ಹೀಗೆ ಬೀದಿ ಪಾಲಾಗಿದ್ದಾನೆ.
ನಮ್ಮ ಜನಕ್ಕೆ, ಯುವಕರಿಗೆ ಎಷ್ಟು ಬಡ್ಕೊಂಡ್ರು, ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ. ರಸ್ತೆ -ರಸ್ತೆಯಲ್ಲಿ ಸಾವಿರಾರು ರುಪಾಯಿ ಖರ್ಚು ಮಾಡಿ, ಪೆಂಡಾಲು ಹಾಕಿ, ಪ್ರಸಾದ ಹಂಚಿ, ಡ್ಯಾನ್ಸ್, ಡೊಳ್ಳು -ನಗಾರಿ ಸದ್ದು ಮಾಡಿ, ಚಂದಾ ವಸೂಲಿ ಮಾಡಿ ಗಣಪನನ್ನೇನೋ ಇಡುತ್ತಾರೆ.

ಅದೇ ಉತ್ಸುಕತೆಯಲ್ಲಿ ಗಣಪತಿಯನ್ನು ಬಿಡುವ ದಿನ ಅವರೆಲ್ಲರಿಗೂ ಹಬ್ಬದ ವಾತಾವರಣ. ಕುಣಿದು - ಕುಪ್ಪಳಿಸಿ ಗಣಪನನ್ನು ತೆಗೆದುಕೊಂಡು ಹೋಗಿ ದೊಪ್ಪೆಂದು ನಾಲೆಗೆ - ನದಿಗೆ ಹಾಕಿ ಹಿಂತಿರುಗುತ್ತಾರೆ.

ಇದಾದ ಬಳಿಕ ಎಲ್ಲವೂ ಮುಗಿಯಿತೇ? ಖಂಡಿತಾ ಇಲ್ಲ. ಆರಂಭವೇ ಇದು. ಹೀಗೆ ನಾಲೆಗಳಲ್ಲಿ ತೇಲದೇ -ಮುಳುಗದೆ ಇರುವುದು ನೀವೇ ಪೂಜೆ ಮಾಡಿರುವ ಗಣಪ. ಮೈಸೂರು -ಬೆಂಗಳೂರು ರಸ್ತೆಯಲ್ಲಿ ಸಾಗುವ ದಾರಿಯಲ್ಲಿ ಕಂಡುಬರುವ ಸಾಲು -ಸಾಲು ನಾಲೆಗಳಲ್ಲಿ ಗಣಪ ಅನಾಥವಾಗಿದ್ದಾನೆ.

ಅವನ ಕೈ -ಕಾಲುಗಳು, ದೇಹದ ಅಂಗಾಂಗಗಳು ಊನವಾಗಿವೆ. ಈ ಚಿತ್ರವನ್ನು ಸೆರೆ ಹಿಡಿದದ್ದು ಛಾಯಾಚಿತ್ರಗ್ರಾಹಕ ನಂದನ್ ಎ. ವಿವಿಧ ಭಂಗಿಗಗಳಲ್ಲಿರುವ ಈ ಗಣಪನ ಸೈನ್ಯವೇ ಅಲ್ಲಿ ಕಣ್ಣಿಗೆ ರಾಚುವಂತಿತ್ತು. ಅದನ್ನು ನೋಡಿ ಬೇಸರಗೊಂಡು ಈ ಚಿತ್ರ ಕ್ಲಿಕ್ಕಿಸದೇ ಎನ್ನುತ್ತಾರೆ ಅವರು.

ನಾಲೆಗಳಲ್ಲಿ ನೀರಿಲ್ಲದೆ ಗಣಪ ತೇಲುತ್ತಿದ್ದ ಎಂಬುದಕ್ಕಿಂತ, ಅಲ್ಲಿದ್ದದ್ದು ಪಿಒಪಿ ಗಣಪತಿ ಮೂರ್ತಿಗಳೇ ಹೆಚ್ಚು. ನಮ್ಮ ಜಿಲ್ಲಾಡಳಿತ, ಸರಕಾರ ಅದೆಷ್ಟೇ ಪರಿಸರಸ್ನೇಹಿ ಗಣಪನನ್ನು ಪೂಜಿಸುವಂತೆ ಸೂಚನೆ ನೀಡಿದರೂ ನಮ್ಮ ಜನಕ್ಕೆ ಬುದ್ಧಿ ಬರುವುದಿಲ್ಲ ಏಕೆ ಎಂಬುದಕ್ಕೆ ಉತ್ತರ ಗಣಪನೇ ಹೇಳಬೇಕಷ್ಟೇ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications