ಮೂಲೆಗುಂಪಾದ ಮರದ ಅಚ್ಚು, ಮಾರುಕಟ್ಟೆಗೆ ಬಂದ ಚೀನಾದ ಶುಗರ್ ಕ್ಯಾಂಡಿ ಮೌಲ್ಡ್
ಮೈಸೂರು, ಜನವರಿ 14: ಚೀನಾ ಪ್ಲಾಸ್ಟಿಕ್ ಆಯ್ತು, ಚೀನಾ ಬಟ್ಟೆ ಆಯ್ತು, ಇದೀಗ ಚೀನಾದ ಶುಗರ್ ಕ್ಯಾಂಡಿ ಮೌಲ್ಡ್ ಸರದಿ. ಹೌದು, ಮರದ ಅಚ್ಚಿಗೆ ಬದಲಾಗಿ ವಿವಿಧ ಮೌಲ್ಡ್ ಗಳಲ್ಲಿ ತಯಾರಾದ ಸಕ್ಕರೆ ಅಚ್ಚು ಈಗ ಹೆಚ್ಚು ಬಳಕೆಯಲ್ಲಿದೆ.
"ಯಂತ್ರಗಳಲ್ಲಿ ತಯಾರಾಗುವ ಸಕ್ಕರೆ ಅಚ್ಚಿಗೆ ಕೇವಲ ಪೆಪ್ಪರ್ ಮೆಂಟ್ ಪಾಕ ಇದ್ದರೆ ಸಾಕು. ಆದರೆ ಮನೆಯಲ್ಲೇ ತಯಾರಿಸುವ ಸಕ್ಕರೆ ಅಚ್ಚಿಗೆ ಪಾಕವನ್ನು ಪದೇ - ಪದೇ ಶೋಧಿಸಿ ತೆಗೆಯುತ್ತೇವೆ. ಹಾಗಾಗಿ ಮನೆಯಲ್ಲಿಯೇ ತಯಾರಾಗುವ ಸಕ್ಕರೆ ಹೆಚ್ಚು ಮೃದುವಾಗಿರುತ್ತದೆ ಮತ್ತು ಅಷ್ಟೇ ಬಿಳಿಯ ಹೊಳಪಿನ ಬಣ್ಣದ್ದಾಗಿರುತ್ತದೆ. ಆದರೆ ಅಂಗಡಿಯ ಅಚ್ಚು ಸ್ವಲ್ಪ ಮಂಕಾದಂತೆ ಕಾಣುತ್ತದೆ. ತಿನ್ನಲು ಅಷ್ಟು ರುಚಿಸುವುದಿಲ್ಲ" ಎನ್ನುತ್ತಾರೆ ಹಬ್ಬದ ಸಂದರ್ಭದಲ್ಲಿ ಮನೆಯಲ್ಲೇ ಸಕ್ಕರೆ ಅಚ್ಚುಗಳನ್ನು ತಯಾರಿಸುವ ಮೇಘನಾ ತೀರ್ಥಾಪುರ.
ಇನ್ನೊಂದೆಡೆ ಮನೆಯ ಅಂಗಳಕ್ಕಷ್ಟೇ ಮೀಸಲಾಗಿದ್ದ ಸಂಕ್ರಾಂತಿ ಇದೀಗ ಕಿರಾಣಿ ಅಂಗಡಿಗಳನ್ನು ಬಿಡದೆ ಬೀಡುಬಿಟ್ಟಿದೆ. ಗ್ರಾಹಕರನ್ನು ಆಕರ್ಷಿಸಲು ಕಿರಾಣಿ ಅಂಗಡಿಗಳು ಸಂಕ್ರಾಂತಿ ವೇಷ ತೊಟ್ಟುಕೊಂಡು ನಿಂತಿದೆ. ದೊಡ್ಡ - ದೊಡ್ಡ ಅಂಗಡಿಗಳಂತೂ ಕಬ್ಬಿನ ಜಲ್ಲೆ, ಮಡಿಕೆ ಕುಡಿಕೆಗಳಿಂದ ತುಂಬಿ ಸಿಂಗಾರಗೊಂಡಿದೆ.
ಡಿಜಿಟಲ್ ಜಮಾನದ ಜನರ ಟೇಸ್ಟ್ ಗೆ ತಕ್ಕಂತೆ ಸಕ್ಕರೆ ಅಚ್ಚಿನ ಆಕಾರ, ವಿನ್ಯಾಸ ಸಹ ಬದಲಾಗಿದೆ. ಅವರ ಅಭಿರುಚಿಗೆ ತಕ್ಕಂತೆ ಪೆಪ್ಪರ್ ಮೆಂಟ್ ಮಾದರಿಯಲ್ಲಿ ಸಕ್ಕರೆ ಅಚ್ಚುಗಳು ಮಾರಾಟಕ್ಕೆ ಬಂದಿವೆ. ಇದರೊಟ್ಟಿಗೆ ಹುರಿದ ಎಳ್ಳು, ಕಡಲೆ, ಕೊಬ್ಬರಿ, ಬೆಲ್ಲ, ಕಡಲೆ ಕಾಯಿ ಬೀಜಗಳು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಏನು ಮಾಡುವುದೇ ಬೇಡ, ಕುಳಿತ ಜಾಗದಲ್ಲೇ ಸಂಕ್ರಾಂತಿ ಕಿಟ್ಟನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿ ತರಿಸಿಕೊಳ್ಳಬಹುದು.

ರೆಡಿಮೇಡ್ ಸಕ್ಕರೆ ಅಚ್ಚುಗಳಿಗೆ ಬೇಡಿಕೆ
ಹಬ್ಬವೆಂದರೆ ಹೆಚ್ಚು ಕಾಳಜಿಯಿಂದ ಮಾಡುವುದು ಗ್ರಾಮಾಂತರ ಪ್ರದೇಶಗಳಲ್ಲಿ ಎಂಬ ಮಾತಿದೆ. ಆದರೆ ಇದು ಸುಳ್ಳಾಗುತ್ತಿದೆ. ಇತ್ತ ಗ್ರಾಮಾಂತರ ಪ್ರದೇಶಗಳಲ್ಲೂ ರೆಡಿಮೇಡ್ ಸಕ್ಕರೆ ಅಚ್ಚುಗಳಿಗೆ ಬೇಡಿಕೆ ಹೆಚ್ಚಿದೆ. ಮರದ ಅಚ್ಚು ಮೂಲೆ ಗುಂಪಾಗಿದೆ. ಅಷ್ಟೇಕೆ ಗ್ರಾಮೀಣ ಭಾಗದ ಅಂಗಡಿಗಳು, ಸೂಪರ್ ಬಜಾರ್, ಸೂಪರ್ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಅಚ್ಚು, ಎಳ್ಳು ಬೆಲ್ಲ ಮಾರಾಟದ ಕೌಂಟರ್ ಗಳಲ್ಲಿ ವ್ಯಾಪಾರ ಭರ್ಜರಿಯಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯ
ಬಾರ್ಬಿಡಾಲ್ , ಡೋರೆಮಾನ್, ಸೂಪರ್ ಮ್ಯಾನ್, ಬ್ಯಾಟ್ಮನ್, ಚೋಟಾ ಭೀಮ್ , ಮೋಟು - ಪತ್ಲು ಹೀಗೆ ನಾನಾ ಬಗೆಯ ಸಕ್ಕರೆ ಅಚ್ಚು ಮಾಡಿಕೊಡುವವರು ಈಗ ಸಿಗುತ್ತಾರೆ. ಹಾಲಿವುಡ್ ಸಿನಿಮಾ ಕ್ಯಾರಿಕೇಚರ್ ಮೌಲ್ಡ್ ಗಳು ಲಭ್ಯವಿದ್ದು, ಟ್ರೆಂಡ್ ಗೆ ತಕ್ಕಂತೆ ಚೀನಾ ಅಚ್ಚುಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದು ಆರೋಗ್ಯಕ್ಕೆ ಹಾನಿಕಾರಕ
ಸಕ್ಕರೆಯ ಪಾಕಕ್ಕೆ ಹಾಲು ಸೇರಿಸಿ ತಯಾರಿಸುವ ಅಚ್ಚುಗಳಿಗೆ ಮಾಡರ್ನ್ ಟಚ್ ಬರಲಾರಂಭಿಸಿದೆ. ಪೆಪ್ಪರ್ ಮೆಂಟ್ ಪಾಕವನ್ನು ಶುಗರ್ ಕ್ಯಾಂಡಿ ಮೋಲ್ಡ್ ಗಳಿಗೆ ಹಾಕಿ ಸಕ್ಕರೆ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತದೆ. ಹಾಗಾಗಿ ಮರದ ಅಚ್ಚಿನ ಬದಲು ಇತರೆ ಮೌಲ್ಯಗಳನ್ನು ಬಳಸಲಾಗುತ್ತಿದೆ. ಅದರಿಂದಾಗಿ ಹೊಸ ಹೊಸ ವಿನ್ಯಾಸಗಳನ್ನು ಪ್ರಾಯೋಗಿಕವಾಗಿ ತರಲು ಸಾಧ್ಯವಾಗುತ್ತದೆ ಎನ್ನುವ ವಾದ ಒಂದೆಡೆಯಾದರೆ, ಮತ್ತೊಂದೆಡೆ ಇದು ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತು ಕೇಳಿಬರುತ್ತದೆ.

ಬಣ್ಣಗಳನ್ನು ಬಳಸಿಯೇ ಮಾಡಿರುತ್ತಾರೆ
ಮರದ ಅಚ್ಚು ಅಪ್ಪಟ ಆರೋಗ್ಯ ಸ್ನೇಹಿ. ಸಿಲಿಕಾನ್ ಮೌಲ್ಡ್ ಗಳು ಎಷ್ಟಾದರೂ ಪ್ಲಾಸ್ಟಿಕ್ ಸಾಧನ. ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವ ಅಚ್ಚುಗಳಂತೂ ಹೇಳುವುದೇ ಬೇಡ. ಕೆಮಿಕಲ್ ಹಾಗೂ ಬಣ್ಣಗಳನ್ನು ಬಳಸಿಯೇ ಮಾಡಿರುತ್ತಾರೆ ಎಂಬುದು ಬಣ್ಣವನ್ನು ನೋಡಿಯೇ ತಿಳಿದುಕೊಳ್ಳಬಹುದು. ಇದು ನಮ್ಮ ದೇಹದ ಮೇಲೂ ಪರಿಣಾಮ ಬೀರುತ್ತದೆ. ಒಟ್ಟಾರೆ ನಮ್ಮ ಹಿರಿಯರು ನಮ್ಮ ಒಳಿತಿಗಾಗಿ ಮಾಡಿದ ನಿಯಮವನ್ನೇ ನಮಗೆ ಬೇಕಾದ ಹಾಗೇ ಬದಲಿಸಿಕೊಳ್ಳುತ್ತಿರುವ ನಮ್ಮ ಮನಸ್ಥಿತಿಗೆ ಏನೆನ್ನೋಣ ನೀವೇ ಹೇಳಿ?
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications