ಮಾದಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ
ಮೈಸೂರು, ಡಿಸೆಂಬರ್ 12: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾದ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದ್ದು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಮಾದಾಪುರ ಗ್ರಾಮದ ನಿವಾಸಿ ಶಿವಬಸವೇಗೌಡ ಮಗ ಸಂಪತ್ ಹಾಗೂ ಸುರೇಂದ್ರ ಮಕ್ಕಳಾದ ದರ್ಶನ್ ಮತ್ತು ಹರೀಶ್ ಹುಡುಗಿಯರನ್ನು ಚುಡಾಯಿಸುತ್ತಿದ್ದರು.
"ನಿಮ್ಮ ಮಕ್ಕಳು ನಮ್ಮ ಅಂಗಡಿಯ ಬಳಿ ಕುಳಿತು ಕಾಲೇಜಿಗೆ ಹೋಗುವ ಹುಡುಗಿಯರನ್ನು ಚುಡಾಯಿಸುತ್ತಾರೆ. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ" ಎಂದು ಶಿವಬಸವೇಗೌಡರ ಬಳಿ ಲಾಲಲಿಂಗ ಎಂಬುವವರು ಹೇಳಿದ್ದರು.

ಇದೇ ಕಾರಣಕ್ಕೆ ಕೋಪಗೊಂಡ ಸಂಪತ್, ದರ್ಶನ್, ಹರೀಶ್ ತಮ್ಮ ಸ್ನೇಹಿತರ ಜೊತೆ ಸೇರಿ ಲಾಲಲಿಂಗ (ಮನು)ವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಜಗಳ ಬಿಡಿಸಲು ಹೋದ ಗ್ರಾಪಂ ಸದಸ್ಯ ಶಿವಶಂಕರ್ ಮೇಲು ಹಲ್ಲೆ ನಡೆಸಿದ್ದಾರೆ.
ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಗಾಯಾಳುಗಳನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ತಿ.ನರಸೀಪುರ ಎಎಸ್ಐ ಅಜರುದ್ದೀನ್ ರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.












Click it and Unblock the Notifications