ನಂಬರ್ ಗಳೊಡನೆ ಆಟವಾಡುವ ಅಂಧ ಬಸವರಾಜ್ ಸಾಧನೆಗೆ ಬೆರಗಾಗಲೇಬೇಕು!
ಮೈಸೂರು, ಸೆಪ್ಟೆಂಬರ್.7: ಈತ ಅಪ್ಪಟ ಹಳ್ಳಿ ಹೈದ. ಕೋಟಿಗಟ್ಟಲೇ ಗಣಿತ ಅಂಕೆಯನ್ನು ಹೇಳಿದರೆ ಸಾಕು ಲೀಲಾಜಾಲವಾಗಿ ಗುಣಾಕಾರ, ಭಾಗಕಾರ, ಸಂಕಲನ, ವ್ಯವಕಲನ ಎಲ್ಲವನ್ನು ಪೆನ್ನು ಬೇಡ, ಹಾಳೆ ಇಲ್ಲದೆ ಮಾಡಿ ಮುಗಿಸುತ್ತಾನೆ. ಇವನ ಸಾಧನೆ ನೋಡಿದರೆ ನೀವು ಅಚ್ಚರಿಪಡುವುದರಲ್ಲಿ ಎರಡು ಮಾತಿಲ್ಲ.
ಹೌದು, ಬೆಳಗಾಂ ಜಿಲ್ಲೆಯ ಅಥಣಿ ತಾಲೂಕಿನ ನಿವಾಸಿ ಬಸವರಾಜ್ ಶಂಕರ್ ಉಮ್ರಾಣಿ ಎಂಬ 24ರ ಹರೆಯದ ಯುವಕನ ಜ್ಞಾಪಕ ಶಕ್ತಿಯ ಅಗಾಧತೆ ನೋಡಿದರೆ ಒಮ್ಮೆ ಎದ್ದು ನಿಂತು ಸೆಲ್ಯೂಟ್ ಹೊಡೆಯಬೇಕೆಂದೆನಿಸುತ್ತದೆ.
ಅಂಧರಾಗಿರುವ ಬಸವರಾಜ್ ಅವರ ಸಾಧನೆ ಕಣ್ಣು ಇದ್ದವನೂ ಸಹ ಸಾಧಿಸಲು ಅಸಾಧ್ಯ. ಸಣ್ಣ ವಯಸ್ಸಿನಲ್ಲೇ ಈ ಪ್ರಯತ್ನ ಪ್ರಾರಂಭ ಮಾಡಿದ್ದ ಬಸವರಾಜ್ ಗೆ ಈಗ 24 ವರ್ಷ. ಅಂಧರಾದ ಇವರು ಎಲ್ಲರ ನೆಚ್ಚಿನ ಟಿವಿ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ತೋರಿದ್ದಾರೆ.
ಕೇವಲ ನೀವು ಸಂಖ್ಯೆಗಳನ್ನು ಹೇಳಿದರೆ ಸಾಕು, ಯಾವ ಸಹಾಯವೂ ಇಲ್ಲದೆ ನಿಖರ ಉತ್ತರ ಕೊಡುತ್ತಾನೆ. ಯಾವುದೇ ವರ್ಷ, ಇಲ್ಲವೇ ತಿಂಗಳಿನ ದಿನಾಂಕವೂ ಯಾವ ವಾರ ಬರುತ್ತದೆ ಎಂದು ಕೇಳಿದರೆ ಪಂಚಾಂಗದ ಮೊರೆ ಹೋಗದೆ ಕ್ಷಣಾರ್ಧದಲ್ಲಿ ವಾರ ಹೇಳುತ್ತಾನೆ.
ಕಣ್ಣಿದ್ದು ಸಮಯವನ್ನು ಗಡಿಯಾರ ನೋಡಿ ಹೇಳುತ್ತೇವೆ ನಾವು. ಆದರೆ ಕಣ್ಣಿಲ್ಲದೇ, ಗಡಿಯಾರದ ಸಹಾಯವಿಲ್ಲದೇ ಸಮಯ ಎಷ್ಟಾಗಿದೆ ಎಂದು ಕೇಳಿದರೆ ಸಾಕು ನಿಖರವಾದ ಸಮಯ ಹೇಳುವ ನಿಷ್ಣಾತ ಈತ. ಇಷ್ಟೇ ಅಲ್ಲ ಬಸವರಾಜ್ ಸಾಧನೆ, ಇನ್ನು ಮುಂದೆ ಇದೆ ಓದಿ ....

ಕರಾರುವಕ್ಕಾಗಿ ಹೇಳ್ತಾರೆ ಬೆಲೆ
ನೀವು ಯಾವುದಾದರೊಂದು ನೋಟನ್ನು ಆತನ ಕೈಗಿಟ್ಟು ತಕ್ಷಣವೇ ಕಿತ್ತುಕೊಂಡರೆ ಕ್ಷಣಾರ್ಧದಲ್ಲಿ ನೋಟುಗಳ ಒಟ್ಟು ಮೌಲ್ಯವನ್ನು ಕರಾರುವಕ್ಕಾಗಿ ಹೇಳುವ ಹಾಗೂ ಇನ್ನು ಬೇರೆ ಬೇರೆ ದೇಶದ ಕರೆನ್ಸಿಗಳನ್ನು ಕೈಗಿಟ್ಟು ತಕ್ಷಣವೇ ಕಿತ್ತುಕೊಂಡರೆ ನೋಟುಗಳ ಅಂದಿನ ಮೌಲ್ಯವನ್ನು ಹೇಳುತ್ತಾನೆ.

ಗಣಿತ ನೀರು ಕುಡಿದಷ್ಟೇ ಸಲೀಸು
ಈತನ ವಿಶೇಷತೆಗಳು ಇಲ್ಲಿಗೆ ನಿಲ್ಲಲಿಲ್ಲ. ರಾಷ್ಟ್ರೀಯ ನಾಯಕರ ಹುಟ್ಟು ಮತ್ತು ಸಾವಿನ ದಿನಾಂಕ, ತಿಂಗಳು, ವರ್ಷ ಹಾಗೂ ವಾರಗಳನ್ನು ಹೇಳುತ್ತಾನೆ. ಹಿಂದೆಂದೋ ಕೇಳಿದ ದೂರವಾಣಿ ಅಥವಾ ಯಾರನ್ನೇ ಭೇಟಿಯಾದ ದಿನಾಂಕ ಕೇಳಿದರೇ ಅಷ್ಟೇ ಖಚಿತವಾಗಿ ಹೇಳುವುದು ಈತನಿಗೆ ನೀರು ಕುಡಿದಷ್ಟೇ ಸಲೀಸು.
ಹೌದು, ಇವನೊಬ್ಬ ಮಾನವ ಕಂಪ್ಯೂಟರ್. ವಿಜಯಪುರ ಗಡಿಯಂಚಿನಲ್ಲಿರುವ ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಬಸವರಾಜ್ ಸ್ಮರಣಶಕ್ತಿ ಹಾಗೂ ಬುದ್ಧಿಮತ್ತೆಗೆ ಪ್ರತಿಯೊಬ್ಬರು ತಲೆಬಾಗಲೇಬೇಕು.

ಅಂಧನಾಗಲು ಕಾರಣ
ಬಸವರಾಜ್ ಪೋಷಕರು ಆತನನ್ನು ಮೋದಿ, ಮಿಂಟೋ, ನಾರಾಯಣ ನೇತ್ರಾಲಯ ಸೇರಿದಂತೆ ಕಂಡ ಕಂಡ ನೇತ್ರ ತಜ್ಞರನ್ನು ಕಂಡು ಮಗನಿಗೆ ಬೆಳಕು ನೀಡುವಂತೆ ಅಂಗಲಾಚಿದ್ದಾರೆ. ಆದರೆ ಈತನ ಕಣ್ಣಿನ ನರಗಳ ದೌರ್ಬಲ್ಯದಿಂದಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇದರಿಂದ ತಂದೆ - ತಾಯಿಗಳು ಕೈ ಚೆಲ್ಲಿ ಕುಳಿತರು. ಆದರೂ ಈತ ವಿಶೇಷ ವ್ಯಕ್ತಿಯಾಗಿದ್ದಾನೆ. ಬಸವರಾಜ್ ಗೆ ಎಂಟು ವರ್ಷವಿದ್ದಾಗಲೇ ಮನೆ ಪಕ್ಕದ ಕುಲಕರ್ಣಿ ಎಂಬುವವರು ಶಾಲೆಗೆ ಪ್ರವೇಶ ನೀಡಿಸಲು ನಿರ್ಧರಿಸಿದರು. ಅಂದು ಶಾಲೆಗೆ ಸೇರಿಸಿದರು. ನಂತರ ಆತ ಬೆಳೆದದ್ದೇ ವಿಶೇಷ ಸಾಧನೆ.
ಮಹೇಶ್ ಅಂಧ ಮಕ್ಕಳ ಶಾಲೆಯಲ್ಲಿ ಬ್ರೈಲ್ ಲಿಪಿ ಕಲಿತ ನಂತರ ಅಥಣಿಯ ಶ್ರೀ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಬಿಎ ಮುಗಿಸಿದರು. ನಂತರ ಬಿ ಎಡ್ ಪದವಿಯನ್ನು ಸಹ ಪಡೆದಿದ್ದಾರೆ.

ಮೆಮೊರಿಯಲ್ಲಿದೆ 10,000 ಕ್ಕೂ ಹೆಚ್ಚು ನಂಬರ್ ಗಳು
ಇವರಿಗೆ ಒಮ್ಮೆ ಪರಿಚಯವಾಗಿ ಮೊಬೈಲ್ ನಂಬರ್ ಹೇಳಿದರೆ ಸಾಕು, ಮೆಮೊರಿಯಲ್ಲಿ ಹಾಗೆಯೇ ಕುಳಿತು ಬಿಡುತ್ತದೆ ನಂಬರ್. ಇದುವರೆಗೂ ಇವರ ಮೆಮೊರಿಯಲ್ಲಿರುವುದು ಬರೋಬ್ಬರಿ 10,000 ಕ್ಕೂ ಹೆಚ್ಚು ಮೊಬೈಲ್ ನಂಬರ್ ಗಳು.
ಕೇವಲ ನಂಬರ್ ಗಳೊಡನೆ ಆಟವಾಡುವ ಬಸವರಾಜ್ ಇನ್ನೊಂದು ವಿಶೇಷತೆ ಹೊಂದಿದ್ದಾರೆ. ಪ್ರತಿಯೊಬ್ಬ ರಾಷ್ಟ್ರೀಯ ಕ್ರಿಕೆಟ್ ಆಟಗಾರರು, ನಾಯಕರ ಹೆಸರು ಹಾಗೂ ಅವರು ಗಳಿಸಿದ್ದ ರನ್, ವಿಕೆಟ್ , ಕ್ಯಾಚ್ ಗಳನ್ನು ಸಲೀಸಾಗಿ ಹೇಳುತ್ತಾನೆ.
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications