ಪ್ರತಿಮೆ ಮಾನವ ರಫೀಕ್ನನ್ನು ನಿಮಗೆ ನಗಿಸಲು ಸಾಧ್ಯವೆ?
ಮಂಗಳೂರು, ಆಗಸ್ಟ್ 05 : ಪ್ರತಿಮೆ ಮಾನವ (ಸ್ಟಾಚ್ಯು ಮ್ಯಾನ್) ಎಂದೇ ಪ್ರಖ್ಯಾತಿ ಪಡೆದಿರುವ ಮಹಮ್ಮದ್ ರಫೀಕ್ ಪುತ್ತೂರಿಗೆ ಸದ್ಯದಲ್ಲಿಯೇ ಬರಲಿದ್ದಾರೆ. ರಫೀಕ್ ಸ್ಥಬ್ಧವಾಗಿ ನಿಂತುಬಿಟ್ಟರೆ ಶಿಲಾ ಪ್ರತಿಮೆಯೇ ನಾಚಿಸುವಂತಹ ಅದ್ಬುತ ಮನುಷ್ಯ.
ಈ ಪ್ರತಿಮೆ ಮಾನವ ದೃಢತೆಯೊಂದಿಗೆ ನಿಂತರೆ ಕಣ್ ರೆಪ್ಪೆ ಸಹ ಮಿಟುಕಿಸೊಲ್ಲ, ಒಂಚೂರು ಅಲುಗಾಡೊಲ್ಲ. ನೋಡಿದ್ರೆ ನೋಡ್ತಾನೆ ಇರ್ತಾರೆ. ನೀವೇನೇ ಕಸರತ್ತು ಮಾಡಿದ್ರೂ ನಗೋಲ್ಲ. ಗಂಟೆಗಳ ಕಾಲ ಪ್ರತಿಮೆಯಾಗಿಯೇ ನಿಲ್ಲುತ್ತಾರೆ ಚೆನ್ನೈನಲ್ಲಿ ನೆಲೆಸಿರುವ ಈ ರಫೀಕ್.
ಈ ಅಪರೂಪದ ಮನುಷ್ಯ ರಫೀಕ್ ಪುತ್ತೂರಿಗೆ ಬರುತಿದ್ದು ಆಗಸ್ಟ 7ರಂದು ಪುತ್ತೂರಿನ ಟೋಪ್ಕೊ ಝಮ್ ಝಮ್ ಜ್ಯುವೆಲ್ಲರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಆ ಕಾರ್ಯಕ್ರಮದಲ್ಲಿ ರಫೀಕ್ ಪ್ರತಿಮೆಯಾಗಿ ನಿಂತು ಜನರನ್ನು ಆಕರ್ಷಿಸಲಿದ್ದಾರೆ. ಚೆನ್ನೈನ ಗೋಲ್ಡನ್ ಬೀಚ್ ನಲ್ಲಿ ಇವರದೇ ಆಕರ್ಷಣೆ.

ಈ ನಡುವೆ ಝಮ್ ಝಮ್ ಜ್ಯುವೆಲ್ಲರಿ ಒಂದು ಸ್ಪರ್ಧೆಯನ್ನು ಕೂಡ ಆಯೋಜಿಸಿದೆ. ಪ್ರತಿಮೆ ಮಾನವ ರಫೀಕ್ ಅವರನ್ನು ನಗಿಸುವ ಸ್ಪರ್ದೆ. ಈ ಸವಾಲನ್ನು ಸಾರ್ವಜನಿಕರು ಸ್ವೀಕರಿಸಿ ರಫೀಕ್ ಅವರನ್ನು ನಗಿಸಿದರೆ ಝಮ್ ಝಮ್ ಜ್ಯುವೆಲ್ಲರಿ ಅವರು 51 ಸಾವಿರ ರೂಪಾಯಿ ನಗದು ಬಹುಮಾನ ನೀಡಲಿದ್ದಾರೆ.
ಪ್ರತಿಮೆ ಮಾನವ ರಫೀಕ್:
ಪ್ರತಿಮೆ ಮಾನವ ಚೆನ್ನೈಯ ಪನಿಯೂರಿನವರು. ಕೈಯಲ್ಲೊಂದು ಬಡಿಗೆ ಹಿಡಿದು ನಿಂತರೆ ಥೇಟ್ ವಿಗ್ರಹವೇ. 53ರ ಹರೆಯದ ರಫೀಕ್ ತನ್ನ ಸ್ವಸಾಮರ್ಥ್ಯದಿಂದ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕಳೆದ 35 ವರ್ಷಗಳಿಂದ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರತವಲ್ಲದೆ ದುಬೈ, ಮಲೇಷ್ಯಾ, ಮಸ್ಕತ್ ನಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ನಿರಂತರ 6 ತಾಸುಗಳ ಕಾಲ ಅಲುಗಾಡದೆ ಪ್ರತಿಮೆಯಾಗಿ ನಿಲ್ಲುವ ಸಾಮರ್ಥ್ಯ ಇವರಿಗಿದೆ. ರಫೀಕ್ ಪ್ರತಿಭೆಯನ್ನು ಗುರುತಿಸಿ ಚಿದಂಬರಂ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications