ಪ್ರತಿಮೆ ಮಾನವ ರಫೀಕ್ನನ್ನು ನಿಮಗೆ ನಗಿಸಲು ಸಾಧ್ಯವೆ?
ಮಂಗಳೂರು, ಆಗಸ್ಟ್ 05 : ಪ್ರತಿಮೆ ಮಾನವ (ಸ್ಟಾಚ್ಯು ಮ್ಯಾನ್) ಎಂದೇ ಪ್ರಖ್ಯಾತಿ ಪಡೆದಿರುವ ಮಹಮ್ಮದ್ ರಫೀಕ್ ಪುತ್ತೂರಿಗೆ ಸದ್ಯದಲ್ಲಿಯೇ ಬರಲಿದ್ದಾರೆ. ರಫೀಕ್ ಸ್ಥಬ್ಧವಾಗಿ ನಿಂತುಬಿಟ್ಟರೆ ಶಿಲಾ ಪ್ರತಿಮೆಯೇ ನಾಚಿಸುವಂತಹ ಅದ್ಬುತ ಮನುಷ್ಯ.
ಈ ಪ್ರತಿಮೆ ಮಾನವ ದೃಢತೆಯೊಂದಿಗೆ ನಿಂತರೆ ಕಣ್ ರೆಪ್ಪೆ ಸಹ ಮಿಟುಕಿಸೊಲ್ಲ, ಒಂಚೂರು ಅಲುಗಾಡೊಲ್ಲ. ನೋಡಿದ್ರೆ ನೋಡ್ತಾನೆ ಇರ್ತಾರೆ. ನೀವೇನೇ ಕಸರತ್ತು ಮಾಡಿದ್ರೂ ನಗೋಲ್ಲ. ಗಂಟೆಗಳ ಕಾಲ ಪ್ರತಿಮೆಯಾಗಿಯೇ ನಿಲ್ಲುತ್ತಾರೆ ಚೆನ್ನೈನಲ್ಲಿ ನೆಲೆಸಿರುವ ಈ ರಫೀಕ್.
ಈ ಅಪರೂಪದ ಮನುಷ್ಯ ರಫೀಕ್ ಪುತ್ತೂರಿಗೆ ಬರುತಿದ್ದು ಆಗಸ್ಟ 7ರಂದು ಪುತ್ತೂರಿನ ಟೋಪ್ಕೊ ಝಮ್ ಝಮ್ ಜ್ಯುವೆಲ್ಲರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಆ ಕಾರ್ಯಕ್ರಮದಲ್ಲಿ ರಫೀಕ್ ಪ್ರತಿಮೆಯಾಗಿ ನಿಂತು ಜನರನ್ನು ಆಕರ್ಷಿಸಲಿದ್ದಾರೆ. ಚೆನ್ನೈನ ಗೋಲ್ಡನ್ ಬೀಚ್ ನಲ್ಲಿ ಇವರದೇ ಆಕರ್ಷಣೆ.

ಈ ನಡುವೆ ಝಮ್ ಝಮ್ ಜ್ಯುವೆಲ್ಲರಿ ಒಂದು ಸ್ಪರ್ಧೆಯನ್ನು ಕೂಡ ಆಯೋಜಿಸಿದೆ. ಪ್ರತಿಮೆ ಮಾನವ ರಫೀಕ್ ಅವರನ್ನು ನಗಿಸುವ ಸ್ಪರ್ದೆ. ಈ ಸವಾಲನ್ನು ಸಾರ್ವಜನಿಕರು ಸ್ವೀಕರಿಸಿ ರಫೀಕ್ ಅವರನ್ನು ನಗಿಸಿದರೆ ಝಮ್ ಝಮ್ ಜ್ಯುವೆಲ್ಲರಿ ಅವರು 51 ಸಾವಿರ ರೂಪಾಯಿ ನಗದು ಬಹುಮಾನ ನೀಡಲಿದ್ದಾರೆ.
ಪ್ರತಿಮೆ ಮಾನವ ರಫೀಕ್:
ಪ್ರತಿಮೆ ಮಾನವ ಚೆನ್ನೈಯ ಪನಿಯೂರಿನವರು. ಕೈಯಲ್ಲೊಂದು ಬಡಿಗೆ ಹಿಡಿದು ನಿಂತರೆ ಥೇಟ್ ವಿಗ್ರಹವೇ. 53ರ ಹರೆಯದ ರಫೀಕ್ ತನ್ನ ಸ್ವಸಾಮರ್ಥ್ಯದಿಂದ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕಳೆದ 35 ವರ್ಷಗಳಿಂದ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರತವಲ್ಲದೆ ದುಬೈ, ಮಲೇಷ್ಯಾ, ಮಸ್ಕತ್ ನಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ನಿರಂತರ 6 ತಾಸುಗಳ ಕಾಲ ಅಲುಗಾಡದೆ ಪ್ರತಿಮೆಯಾಗಿ ನಿಲ್ಲುವ ಸಾಮರ್ಥ್ಯ ಇವರಿಗಿದೆ. ರಫೀಕ್ ಪ್ರತಿಭೆಯನ್ನು ಗುರುತಿಸಿ ಚಿದಂಬರಂ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.
-
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲುವು: ಎರಡು ಬೌಂಡರಿಗಳ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಬೂಮ್ರಾ ಬೇಸರ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
High Speed Rail: ಬೆಂಗಳೂರು-ಹೈದರಾಬಾದ್ ತಲುಪಲು 2 ಗಂಟೆ ಸಾಕು, 3 ಕಡೆ ಎಂಟ್ರಿ, ಮಹತ್ವದ ಅಪ್ಡೇಟ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
ಹೊಸ ಮನೆಯಲ್ಲಿ ರಶ್ಮಿಕಾ-ವಿಜಯ್ ಸತ್ಯನಾರಾಯಣ ಪೂಜೆ: ಹುಟ್ಟೂರಿಗೆ ಬಂದ ನವದಂಪತಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ












Click it and Unblock the Notifications