ನಾಗರ ಪಂಚಮಿ, ಮಾರುಕಟ್ಟೆಯಲ್ಲಿ ಕೇದಗೆ ಘಮ
ಮಂಗಳೂರು, ಆಗಸ್ಟ್ 06 : ಆಷಾಢ ಮಾಸ ಮುಗಿದ ನಂತರ ಶ್ರಾವಣ ಮಾಸದಲ್ಲಿ ಪ್ರಥಮವಾಗಿ ಆರಂಭಗೊಳ್ಳುವ ಹಬ್ಬ ನಾಗರ ಪಂಚಮಿ. ಈ ದಿನ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಾಗದೇವರಿಗೆ ಹೆಚ್ಚು ಪ್ರಿಯವಾದ ಹೂ ಅಂದರೆ ಅದು ಕೇದಗೆ ಹೂ. ನಾಗರಪಂಚಮಿಯ ಮೊದಲ ದಿನದಿಂದ ಹೂವಿನ ಮಾರುಕಟ್ಟೆ ಕೇದಗೆ ಘಮದಿಂದಲೇ ಕೂಡಿರುತ್ತದೆ.
ನಾಗರಪಂಚಮಿಯಂದು ಕೇದಗೆ ಬಳಕೆ ಬಗ್ಗೆ ಪುರಾಣದಲ್ಲಿ ಅನೇಕ ಮಾಹಿತಿಗಳಿವೆ. 6 ಜನ ಅಣ್ಣಂದಿರಿಗೆ ಒಬ್ಬ ತಂಗಿ ಇರುವಂತಹ ಕುಟುಂಬ. ಅಣ್ಣಂದಿರು ನಾಗಗಳಿಗೆ ತೊಂದರೆ ಕೊಟ್ಟ ಕಾರಣ ಎಲ್ಲರೂ ನಾಗಕೋಪಕ್ಕೆ ಗುರಿಯಾಗಿ ತೊಂದರೆ ಅನುಭವಿಸುವಂತಾಗುತ್ತದೆ.[ಆದಿಶೇಷನ ಕೃಪೆಗೆ ಪಾತ್ರರಾಗಲು ನಿಮಗೊಂದು ಅವಕಾಶ]

ಆಗ ತಂಗಿಯು ಪಂಚಮಿಯ ದಿನ ಕೇದಗೆ ಹೂವುಗಳನ್ನು ಬಳಸಿ ಪೂಜೆ ಮಾಡಿ ದೇವರನ್ನು ತೃಪ್ತಿಪಡಿಸಿ ಶಾಪ ವಿಮೋಚನೆಗೆ ಕಾರಣಳಾಗುತ್ತಾಳೆ. ಈ ಕಾರಣದಿಂದ ಪಂಚಮಿಯನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯಲಾಗುತ್ತದೆ. ಕೇದಗೆಯನ್ನು ಪೂಜೆಗೆ ಬಳಸಲಾಗುತ್ತದೆ.[ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?]
ಕೇದಗೆ ಹೇಗೆ ಪೂಜ್ಯನೀಯ ಸ್ಥಾನ ಪಡೆದುಕೊಂಡಿದೆ ಅದೇ ರೀತಿ ಅದರ ಸುಗಂಧ ಭರಿತವಾದ ಪರಿಮಳ ಹಲವಾರು ಉದ್ಯಮಿಗಳಿಗೆ ಆರ್ಥಿಕತೆಯ ಮೂಲವಾಗಿ ಪರಿಣಮಿಸಿದೆ. ನಾಗ ಪಂಚಮಿ ಸಮೀಪಿಸುತ್ತಿದ್ದಂತೆಯೇ ಹಲವು ಭಾಗಗಳಲ್ಲಿ ಕೇದಗೆಯ ಸಂಗ್ರಹಣೆಯಲ್ಲಿ ತೊಡಗಿರುತ್ತಾರೆ ವ್ಯಾಪಾರಿಗಳು.
ವ್ಯಾಪಾರಿಗಳು ಕೇದಗೆ ಹೂವಿನ ಸುತ್ತ ಮುತ್ತ ಇರುವಂತಹ ಎಲೆಗಳ ಮಾರಾಟ ಮಾಡುತ್ತಿದ್ದು ಇದು 50 ರಿಂದ 60ರೂ. ಗೆ ದೊರೆಯುತ್ತದೆ. ಆದರೆ, ಹಳದಿ, ಕೇಸರಿ ಮಿಶ್ರಿತ ಕೇದಗೆಗಳು ನೈಜ ಹೂವುಗಳಾಗಿದ್ದು ಒಂದು ಹೂವಿಗೆ 100 ರಿಂದ 120ರೂ. ತನಕ ಮಾರಾಟ ಮಾಡಲಾಗುತ್ತಿದೆ.
ಕರಾವಳಿ ಭಾಗದಲ್ಲಿ ನಾಗದೇವರಿಗೆ ವಿಶೇಷ ಪ್ರಾಧಾನ್ಯತೆ ಇರುವ ಕಾರಣ ಇದರ ಖರೀದಿಯಲ್ಲಿ ಸಾಮಾನ್ಯವಾಗಿ ಜನರು ಹಿಂದೇಟು ಹಾಕುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications