ಬಾರ್ಗಳೂ ಇಲ್ಲದ ಈ ಪ್ರದೇಶದಲ್ಲೀಗ ಡ್ರಗ್ಸ್ ಸಾಮ್ರಾಜ್ಯ: ಮಾದಕ ವ್ಯಸನಿಗಳಿಂದ ಹೈರಣಾದ ಬೆಂಗ್ರೆ ಜನ
ಮಂಗಳೂರು, ಆಗಸ್ಟ್ 27: ಮಂಗಳೂರು ನಗರದ ಬಂದರು ಪ್ರದೇಶದಿಂದ ಅನತಿ ದೂರದಲ್ಲಿಯೇ ಇದೆ ಬೆಂಗ್ರೆ ಪ್ರದೇಶ. ದ್ವೀಪ ಪ್ರದೇಶವಾದ ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ ಒಂದೇ ಒಂದು ಮದ್ಯದಂಗಡಿ, ಬಾರ್ಗಳಿಲ್ಲ. ಆದರೆ ಸದ್ಯ ಈ ಬೆಂಗ್ರೆಯೆಂಬ ದ್ವೀಪವು ಮಾದಕ ವ್ಯಸನಿಗಳ ಕೂಪವಾಗಿದೆ. ಇಡೀ ಗ್ರಾಮವನ್ನೇ ಆವರಿಸಿರುವ ಈ ವ್ಯಸನವನ್ನು ಮುಕ್ತ ಮಾಡುವುದೇ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.
ಕಸ್ಬಾ ಬೆಂಗ್ರೆ, ತೋಟ ಬೆಂಗ್ರೆ ಹಾಗೂ ತಣ್ಣೀರುಬಾವಿ ಪ್ರದೇಶಗಳಲ್ಲಿ ಮೂರು ದಶಕಗಳ ಹಿಂದೆಯೇ ಮದ್ಯದಂಗಡಿ ತಲೆಯೆತ್ತದಂತೆ ಹಿರಿಯರು ಮಾಡಿದ್ದರು. ಬಹಿಷ್ಕಾರದ ಭೀತಿಯಿಂದ ಈಗಲೂ ಈ ಆಜ್ಞೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಆದರೆ ಇದೀಗ ಡ್ರಗ್ಸ್, ಗಾಂಜಾ ಎಂಬ ಮಾದಕಜಾಲ ಸದ್ದಿಲ್ಲದೆ ಯುವಜನತೆಯ ಒಳಹೊಕ್ಕಿ ಇಡೀ ಗ್ರಾಮದ ನೆಮ್ಮದಿಯನ್ನೇ ಹಾಳುಗೆಡವಿದೆ. ಕಳೆದ ಐದು ವರ್ಷಗಳಲ್ಲಿ ಪಣಂಬೂರು ಠಾಣೆಯಲ್ಲಿ ಬೆಂಗ್ರೆ ವ್ಯಾಪ್ತಿಯ ಗಾಂಜಾ, ಮಾದಕ ದ್ರವ್ಯದ 132 ಪ್ರಕರಣಗಳು ದಾಖಲಾಗಿದೆ. 2.92ಲಕ್ಷ ರೂ. ಮೊತ್ತದ ಮಾದಕದ್ರವ್ಯ ವಶಪಡಿಸಿಕೊಂಡಲ್ಲಿ, 158 ಮಂದಿ ಬಂಧನಕ್ಕೊಳಗಾಗಿದ್ದಾರೆ.

ಡ್ರಗ್ಸ್ ಚಟ ಎಷ್ಟು ಇಲ್ಲಿನ ಜನರ ನಿದ್ದೆಗೆಡಿಸಿದೆಯೆಂದರೆ, ಮದುವೆಗೆ ಸಂಬಂಧವೂ ಕೂಡಿಬರುತ್ತಿಲ್ಲ. ಹುಡುಗಿ ಮನೆಯವರು ಇಲ್ಲಿನ ಯುವಕರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇದರಿಂದ ಕೂಡಿ ಬಂದ ಸಂಬಂಧಗಳೂ ದೂರವಾಗುತ್ತಿದೆ. ಇದೀಗ ಇಲ್ಲಿನ ಮುಖಂಡರು ಸೇರಿ ಇತ್ತೀಚೆಗೆ ಮಂಗಳೂರು ಪೊಲೀಸ್ ಕಮಿಷನರ್ ರಿಂದ 'ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನ'ದಡಿ ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಿದ್ದರು.
ಈ ವೇಳೆ ಸಾರ್ವಜನಿಕರಿಂದ ಮಾದಕದ್ರವ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಡ್ರಗ್ಸ್ನಿಂದ ಮನೆಯಲ್ಲಿ ನೆಮ್ಮದಿಯಿಲ್ಲ, ಕುಟುಂಬ ಕಲಹ ಹೆಚ್ಚುತ್ತಿದೆ, ಮದುವೆಗೆ ಸಂಬಂಧ ಕೂಡಿ ಬರುತ್ತಿಲ್ಲ ಹೀಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಮಹಿಳೆಯರು ಕಮಿಷನರ್ರಲ್ಲಿ ಅಲವತ್ತುಕೊಂಡಿದ್ದಾರೆ. ಆದ್ದರಿಂದ ಬೆಂಗ್ರೆಯಲ್ಲಿ ಒಂದು ಮುಕ್ತ ಸಂವಾದಕ್ಕಿಂತ ನಿರಂತರ ಜಾಗೃತಿಯ ಅಗತ್ಯವಿದೆ.
ಬೆಂಗ್ರೆ ಪ್ರದೇಶದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರುತ್ತಿದ್ದು,ಡ್ರಗ್ಸ್ ವ್ಯಸನಿಗಳ ವಿರುದ್ಧ ದೂರುಕೊಟ್ಟರೆ ಮಾನಸಿಕ ಅಸ್ವಸ್ಥನೆಂದು ಸರ್ಟಿಫಿಕೇಟ್ ತೋರಿಸುತ್ತಾರೆ ಎಂದು ಬೆಂಗ್ರೆ ಪ್ರದೇಶದ ಜನರು ಅಳಲು ತೋಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ತೋಟಬೆಂಗ್ರೆ ಪ್ರದೇಶದಲ್ಲಿ ಡ್ರಗ್ಸ್ ವ್ಯಸನಿಗಳ ಹಾವಳಿ ಜಾಸ್ತಿಯಾಗಿದ್ದು, ಡ್ರಗ್ಸ್ ಚಟದಿಂದ ಬೆಂಗ್ರೆ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದೆ. ಈ ಬಗ್ಗೆ ದೂರು ನೀಡಿದ್ದಲ್ಲಿ ಆರೋಪಿ ಮಾನಸಿಕ ಅಸ್ವಸ್ಥ ಎಂದು ಆರೋಪಿಯ ಮನೆಯವರು ಸರ್ಟಿಫಿಕೇಟ್ ಹಿಡಿದುಕೊಂಡು ಬರುತ್ತಾರೆ. ದ.ಕ ಜಿಲ್ಲಾಸ್ಪತ್ರೆ ಯಿಂದ ಸರ್ಟಿಫಿಕೇಟ್ ನೀಡುತ್ತಿರೋದಾಗಿ ಗ್ರಾಮಸ್ಥರ ಆರೋಪಿಸಿದ್ದಾರೆ.
ಈಗಾಗಲೇ ಇಂತಹ ಮೂರು ಪ್ರಕರಣಗಳು ನಡೆದಿದೆ. ಡ್ರಗ್ಸ್ ಸೇವಿಸಿ ಯುವಕರ ಗುಂಪು ಹೊಡೆದಾಡಿಕೊಂಡಿದ್ದಾರೆ.ಈ ಬಗ್ಗೆ ಪೊಲೀಸ್ ಠಾಣೆಗೆ ಜಮಾತ್ ಪ್ರಮುಖರು ದೂರು ನೀಡಿದ್ದರು. ಆದರೆ ಗಲಾಟೆ ಮಾಡಿದವನು ಮಾನಸಿಕ ಅಸ್ವಸ್ಥ ಎಂದು ಸರ್ಟಿಫಿಕೇಟ್ ತಂದು ಮನೆಯವರು ಬಿಡಿಸಿಕೊಂಡಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಜಮಾತ್ ಕಮಿಟಿ ಡ್ರಗ್ಸ್ ದಾಸರನ್ನು ಗ್ರಾಮದಿಂದಲೇ ಹೊರ ಹಾಕುವಂತೆ ಮನವಿ ಮಾಡಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications